Arunachal Pradesh; ಸಮುದ್ರ ತಳದಲ್ಲೂ ಹೆಸರು ಬದಲಿಸಿದ ಚೀನ
ನಿಲ್ಲದ ಡ್ರ್ಯಾಗನ್ ಉದ್ಧಟತನ ಅರುಣಾಚಲ ಪ್ರದೇಶದಲ್ಲೂ ಕಿಡಿಗೇಡಿತನ
Team Udayavani, Apr 18, 2023, 7:40 AM IST
ಬೀಜಿಂಗ್:ಇತ್ತೀಚೆಗೆ ಭಾರತದ ಅವಿಭಾಜ್ಯ ಅಂಗ ಅರುಣಾಚಲ ಪ್ರದೇಶದ ಹೆಸರುಗಳನ್ನು ಬದಲಿಸಿ, ಕುತ್ಸಿತ ಬುದ್ಧಿ ಪ್ರದರ್ಶಿಸಿದ್ದ ಚೀನಾ ಮತ್ತೊಂದು ದುಃಸ್ಸಾಹಸ ಪ್ರದರ್ಶಿಸಿದೆ. ಹಿಂದೂ ಮಹಾಸಾಗರದಲ್ಲಿ ಉದ್ಧಟತನ ಮುಂದುವರಿಸಿದೆ.
ಭಾರತದ ಪಯಾರ್ಯ ದ್ವೀಪದಿಂದ 2 ಸಾವಿರ ಕಿಮೀ ಅಂತದಲ್ಲಿರುವ ಸಾಗರದ ತಳ ಪ್ರದೇಶದ ಖನಿಜ ಸಂಪನ್ಮೂಲಗಳ ಭಾಗವನ್ನು ತನ್ನದೆಂದು ಬಿಂಬಿಸುವಂತೆ ಅವುಗಳ ಹೆಸರು ಬದಲಾಯಿಸಿದೆ.
ಖನಿಜ ಸಂಪನ್ಮೂಲಗಳ ಅನ್ವೇಷಣೆಗಾಗಿ 2011ರಲ್ಲಿ ಅಂತಾರಾಷ್ಟ್ರೀಯ ಸೀ ಬೆಡ್ ಅಥಾರಿಟಿಯಿಂದ ಸಮುದ್ರ ತಳದ ಕೆಲಭಾಗಗಳನ್ನು ಚೀನ 15 ವರ್ಷಗಳ ಕಾಲ ಗುತ್ತಿಗೆ ಪಡೆದಿತ್ತು. ಇದೀಗ ಗುತ್ತಿಗೆ ಅವಧಿ ಮುಗಿಯುವ ಮುನ್ನವೇ ತನಗೆ ಗುತ್ತಿಗೆ ನೀಡಿರದ ಪ್ರದೇಶಗಳನ್ನೂ ಸೇರಿಸಿ ಒಟ್ಟು 19 ಸಾಗರತಳದ ಪ್ರದೇಶಗಳ ಹೆಸರು ಬದಲಿಸಿದೆ.
ಗಮನಾರ್ಹ ಅಂಶವೆಂದರೆ ಚೀನಾ ಗುತ್ತಿಗೆ ಪಡೆದಿದ್ದ ಸ್ಥಳದಿಂದ ಉತ್ತರ ಭಾಗದಲ್ಲಿ ಭಾರತ ಕೂಡ ಇದೇ ಉದ್ದೇಶಕ್ಕೆ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ “ಸಮುದ್ರ ತಳದ ಹೆಸರು ಬದಲಿಸುವ ಚೀನಾದ ನಿಲುವು 19ನೇ ಶತಮಾನದ ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ನಿಲುವು ಪ್ರದರ್ಶಿಸಿದಂತೆ ಆಗಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ