ವಲಸೆ ನೀತಿಗೆ ಒಪ್ಪಿಗೆ; ಸಂಸತ್ಗೆ ರವಾನೆ
Team Udayavani, Jan 22, 2021, 6:30 AM IST
ವಾಷಿಂಗ್ಟನ್: ಚುನಾವಣ ಪ್ರಚಾರದ ವೇಳೆ ಪ್ರಸ್ತಾವಿಸಿದ್ದಂತೆ ವಲಸೆ ನೀತಿಯನ್ನು ಸಮಗ್ರವಾಗಿ ಬದಲಿಸಲು ಜೋ ಬೈಡೆನ್ ಮುಂದಾಗಿದ್ದಾರೆ.
ಅಧಿಕಾರದ ಮೊದಲ ದಿನವೇ “ಅಮೆರಿಕ ಪೌರತ್ವ ಕಾಯ್ದೆ 2021’ಯ ಬಗ್ಗೆ ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದ್ದಾರೆ. ಜತೆಗೆ ಅದನ್ನು ಅನುಮೋದಿಸಲು ಸಂಸತ್ಗೆ ಕಳುಹಿಸಿಕೊಟ್ಟಿದ್ದಾರೆ. ಸೂಕ್ತ ದಾಖಲೆ ಹೊಂದಿಲ್ಲದ ವಲಸಿಗರು, ಎಚ್-1 ಬಿ ವೀಸಾ ಮೂಲಕ ಅಮೆರಿಕಕ್ಕೆ ತೆರಳಿ ಅಲ್ಲಿನ ಪೌರತ್ವ ಹೊಂದುವವರಿಗೆ ಈ ಕಾಯ್ದೆ ನೆರವಾಗಲಿದೆ. ಅದರಲ್ಲಿ ನಿಗದಿತ ದೇಶಕ್ಕೆ ಇಂತಿಷ್ಟೇ ಸಂಖ್ಯೆಯಲ್ಲಿ ಗ್ರೀನ್ ಕಾರ್ಡ್ ನೀಡುವ ಮಿತಿ ತೆಗೆದು ಹಾಕಲು ಸಲಹೆ ಮಾಡಲಾಗಿದೆ. ಇದರಿಂದಾಗಿ ದಶಕಗಳ ಕಾಲ ಅಮೆರಿಕದಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರದ ಉದ್ಯೋಗಿಗಳಿಗೆ ಪೌರತ್ವ ಪಡೆಯಲು ಕಾಯುತ್ತಿದ್ದವರಿಗೆ ನೆರವಾಗಲಿದೆ. ಟ್ರಂಪ್ ಸರಕಾರದ ಅವಧಿಯಲ್ಲಿ ಎಚ್-1ಬಿ ವೀಸಾ ಹೊಂದಿದವರ ಸಂಗಾತಿಗಳಿಗೆ ಕೆಲಸ ಮಾಡುವ ಅಧಿಕಾರ ಇಲ್ಲ. ಹೊಸ ನೀತಿಯಲ್ಲಿ ಅದನ್ನು ಮತ್ತೆ ಜಾರಿ ಗೊಳಿಸಲು ಸಲಹೆ ಮಾಡಲಾಗಿದೆ.
ಹೊಸ ಕಾಯ್ದೆಯಲ್ಲಿ ಯಾವುದೇ ದಾಖಲೆಗಳನ್ನು ಹೊಂದಿ ಲ್ಲದೆ ಇರುವರಿಗೆ ಪೌರತ್ವ ನೀಡುವ ಉದ್ದೇಶ ಹೊಂದಲಾಗಿದೆ. ಆಂಗ್ಲ ಭಾಷೆಯ ಮೇಲಿನ ಹಿಡಿತ, ಅರ್ಜಿದಾರರ ಮಾಹಿತಿ ಖಚಿತಪಡಿಸುವಿಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕು. ಇತರ ಜತೆಗೆ ಗ್ರೀನ್ ಕಾರ್ಡ್ ಪಡೆದುಕೊಂಡು ಮೂರು ವರ್ಷ ಪೂರ್ತಿಯಾಗಿರಬೇಕು. ಮೂರು ವರ್ಷಗಳ ಗಡುವನ್ನು ಜ.1ಕ್ಕೆ ಮಿತಿಗೊಳಿಸಲಾಗಿದೆ.
ಭಾಷಣ ಬರೆದದ್ದು ವಿನಯ ರೆಡ್ಡಿ: ಬೈಡೆನ್ ಮಾಡಿದ ಪ್ರಭಾವ ಶಾಲಿ ಭಾಷಣ ಬರೆದದ್ದು ತೆಲಂಗಾಣ ಮೂಲದ ವಿನಯ ರೆಡ್ಡಿ. ಆದಕ್ಕಾಗಿ ಅವರು ಆಯ್ಕೆ ಮಾಡಿದ ವಿಷಯ, ಅದನ್ನು ಪ್ರಸ್ತುತಪಡಿಸಿದ ಶೈಲಿಗೆ ಭಾರೀ ಹೊಗಳಿಕೆ ವ್ಯಕ್ತವಾಗುತ್ತಿದೆ.
ಚುನಾವಣೆಯ ಸಮಯದಲ್ಲಿ ಜೋ ಬೈಡೆನ್ ಹಾಗೂ ಕಮಲಾ ಹ್ಯಾರಿಸ್ ಅವರ ಭಾಷಣ ರಚನೆಕಾರರಾಗಿದ್ದ ಭಾರತೀಯ ಮೂಲದ ವಿನಯ ರೆಡ್ಡಿ ಈಗ ಶ್ವೇತ ಭವನದ ಭಾಷಣ ರಚನೆ ತಂಡದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ವಿನಯ್ ರೆಡ್ಡಿ ಹುಟ್ಟಿ ಬೆಳೆದದ್ದು ಅಮೆರಿಕದಲ್ಲೇ ಆದರೂ ಅವರ ಕುಟುಂಬದ ಮೂಲವಿರುವುದು ತೆಲಂಗಾಣದ ಪೋತಿರೆಡ್ಡಿ ಪೇಟ ಎಂಬ ಪುಟ್ಟ ಗ್ರಾಮದಲ್ಲಿ.
ಟ್ರಂಪ್ ಜತೆಗೆ ಮಾತಾಡುವೆ
ಶ್ವೇತ ಭವನದಿಂದ ನಿರ್ಗಮಿಸುವ ಮೊದಲು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೃತ್ಪೂರ್ವಕ ಸಲಹೆಗಳನ್ನು ನೀಡಿದ್ದಾರೆ ಎಂದು ಅಧ್ಯಕ್ಷ ಬೈಡೆನ್ ಹೇಳಿದ್ದಾರೆ. ಇದೊಂದು ಖಾಸಗಿ ವಿಚಾರವಾಗಿರುವ ಅಂಶವಾದ್ದರಿಂದ ಅದನ್ನು ಬಹಿರಂಗವಾಗಿ ಮಾತನಾಡುವು ದಿಲ್ಲ. ನಿಕಟ ಪೂರ್ವ ಅಧ್ಯಕ್ಷರ ಜತೆಗೆ ಮಾತನಾಡುವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ