ಡೈಲಿಡೋಸ್‌:ಅಗ್ನಿ ಪರೀಕ್ಷೆ ಕಾಲ ಮುಗೀತು ಇನ್ನು ಹೊಸ ಪರೀಕ್ಷೆ-ಕುದುರೆಯೂ ಇಲ್ಲ,ಅಗ್ನಿಯೂ ಇಲ್ಲ


Team Udayavani, Mar 29, 2023, 7:52 AM IST

poli

ಚುನಾವಣೆ ಬಂತೆಂದರೆ ರಾಜಕಾರಣಿಗಳಿಗೆ ನಿಜಕ್ಕೂ ಅಗ್ನಿ ಪರೀಕ್ಷೆ. ಅದರಲ್ಲೂ ಯಾವುದಾದರೂ ವಿವಾದಕ್ಕೆ ಸಿಲುಕಿಕೊಂಡೋ, ಹಗರಣದಲ್ಲಿ ಸಿಕ್ಕಿ ಬಿಧ್ದೋ, ಸಿ.ಡಿ-ಗೀಡಿ ಗಲಾಟೆಯಲ್ಲಿ ಹೆಸರು ಕೇಳಿಬಂದರಂತೂ ಡಬ್ಬಲ್‌ ಅಗ್ನಿ ಪರೀಕ್ಷೆ. ಅಂದರೆ ಹಿಂದಿ ಸಿಂಗಂ ಸಿನಿಮಾದಲ್ಲಿ ಒಂದು ಡೈಲಾಗ್‌ ಇದೆಯಲ್ಲ-“ಇವನನ್ನು (ವಿಲನ್‌) ಎರಡು ಮಹಡಿಯಿಂದ ಕೆಳಗೆಸೆದರೆ ಸಾಯುವುದು ಕಷ್ಟ. ಅದಕ್ಕೇ ಎರಡು ಬಾರಿ ಹಾಕಿದ್ರೆ ನಾಲ್ಕು ಫ್ಲೋರ್‌ ನಿಂದ ಹಾಕಿದಂತಾಗುತ್ತಲ್ಲ!” ಎನ್ನುವ ಹಾಗೆ.

ಪ್ರತಿ ಬಾರಿಯೂ ಕೆಲವರಿಗೆ ಎರಡೆರಡು ಬಾರಿ ಅಗ್ನಿ ಹಾರುವ ಸಂಕಷ್ಟ ಎದುರಾಗುತ್ತದೆ. ಕೆಲವರು ಹಾರಿಯೂ ಸೈ ಎನಿಸಿಕೊಳ್ಳುತ್ತಾರೆ. ಇನ್ನು ಕೆಲವರು ಹಾರಲು ಹೋಗಿ ಆಹುತಿಯಾಗುತ್ತಾರೆ. ಇನ್ನೂ ಕೆಲವರು “ಬೇರೆಯವರನ್ನು ಹಾರಿಸಿ” ತಾವು ಹಾರಿದಂತೆ ಡ್ನೂಪ್‌ ಮಾಡುತ್ತಾರೆ. ನಮ್‌ ಸಿನಿಮಾಗಳಲ್ಲಿ ಕೆಲವು ಹೀರೋಗಳು ಮಾಡುತ್ತಾರಲ್ಲ ಹಾಗೆಯೇ..ಕೊನೆಗೆ ಅವರೇ ಹೀರೋಗಳು !

ಈಗ ಮತ ಕ್ಷೇತ್ರಗಳಲ್ಲಿನ ಮತದಾರರಿಗೂ ಈ ಅಗ್ನಿ ಪರೀಕ್ಷೆ, ಅಶ್ವಮೇಧ, ಕೊನೇ ಚುನಾವಣೆ, ಇದೊಂದು ಬಾರಿ ಗೆಲ್ಲಿಸಿ ಇಂಥವುಗಳನ್ನು ಕೇಳಿದರೆ ಅನಾಸಕ್ತಿಯೋಗದಲ್ಲಿ ಇದ್ದವರಂತೆ ಮಾಡತೊಡಗಿದ್ದಾರಂತೆ. ಏನ್ರೀ ಮೊದಲ ಚುನಾವಣೆಯಿಂದಲೂ ಈಗಲೂ ಅದೇ ಕುದುರೆ, ಆದೇ ಅಗ್ನಿ ಏನ್ರೀ? ಸ್ವಲ್ಪ ಚೇಂಜ್‌ ಬೇಡವೇ? ಎಂದು ಕೇಳುತ್ತಿದ್ದಾರಂತೆ.

ಅದಕ್ಕೆ ನಮ್ಮ ಹಳ್ಳಿಯ ಬುದ್ಧಿವಂತನೊಬ್ಬ “ಹೌದು, ಅವರೂ ಹೇಳ್ಳೋದೂ ನಿಜವೇ. ಟೆಕ್ನಾಲಜಿ ಯುಗದಲ್ಲಿ ಯುದ್ಧಗಳೇ ಬದಲಾಗ್ತಿವೆ. ಈ ಕುದುರೆ, ಅಗ್ನಿ ಬದಲಾಗದಿದ್ದರೆ ಹೇಗೆ?” ಎಂದವನೇ ಹೊಸ ಐಡಿಯಾ ಕೊಟ್ಟ.

ಅವನ ಪ್ರಕಾರ ಈ ಅಗ್ನಿ ಪರೀಕ್ಷೆ ಎಲ್ಲವೂ ಹಳತಾಯಿತಂತೆ, ಶಾಖವೂ ಆರಿ ಹೋಗಿದೆಯಂತೆ. ಈಗೇನಿದ್ದರೂ ಹವಾಮಾನ ವೈಪರೀತ್ಯದ ಕಾಲ. ಏಕ್‌ ದ್‌ಂ ಹೀಟ್‌ ಹೆಚ್ಚಾಗಿ ಬಿಡುತ್ತೆ, ಏಕ್‌ ದಂ ಕೋಲ್ಡ್‌ ಆಗಿ ಬಿಡುತ್ತೆ. ಅದಕ್ಕೇ ನಾವು ಈ ಅಗ್ನಿ ಪರೀಕ್ಷೆ ಅನ್ನೋದಿಕ್ಕೂ ಆಗೋದಿಲ್ಲ, ಅದರ ಬದಲು ಜಲ ಪರೀಕ್ಷೆ ಎನ್ನೋದಕ್ಕೂ ಆಗೋದಿಲ್ಲ. ಯಾಕೆ ಅಂತಾ ಗೊತ್ತಿದೆಯಲ್ಲ ಇವರು ಅಗ್ನಿ ಪರೀಕ್ಷೆ ಅಂತ ಹಾರುವ ಹೊತ್ತಿಗೆ ಬೆಂಕಿ ಆರಿ ತಣ್ಣಗೆ ಆಗ್‌ ಬಿಡಬಹುದು ! ಹಾಗೇನೇ ಜಲ ಪರೀಕ್ಷೆ ಅಂತ ಹಾರಲಿಕ್ಕೆ ಹೋದ ಅಂದುಕೊಳ್ಳಿ, ಅಷ್ಟರಲ್ಲಿ ನೀರೆಲ್ಲಾ ಮಂಜುಗೆಡ್ಡೆ ರೀತಿ ಆಗಿಬಿಟ್ಟಿದ್ದರೆ ಅವರು ಸೀದಾ ನಡೆದು ಕೊಂಡು ಹೋಗಿಬಿಡ್ತಾರೆ, ಇನ್ನು ಹಾರುವುದು ಎಲ್ಲಿಂದ ಬಂತು?
ಅದಕ್ಕೇ ಇನ್ನೇನಿದ್ದರೂ ವಾಯು ಪರೀಕ್ಷೆ, ಅಗ್ನಿಯಾದರೂ ಕಣ್ಣಿಗೆ ಕಾಣುತ್ತೆ, ಆರಿಸಬಹುದು. ಆದರೆ ವಾಯು ಹೇಗೆ ಎಂದೇ ತಿಳಿಯೋದಿಲ್ಲ. ಕೊರೊನಾ ಹಾಗೇ ತಾನೇ ಬಂದಿದ್ದು ಸರಕಾರ, ಸಮಾಜ ಎಲ್ಲದರ ಪರೀಕ್ಷೆ ಮಾಡಿದ್ದು. ಹಾಗಾಗಿ ಇನ್ನು ಮುಂದೆ ವಾಯು ಪರೀಕ್ಷೆ ಎನ್ನೋಣ, ಅಗ್ನಿಗೆ ವಯಸ್ಸಾಯಿತು, ಟಿಕೆಟ್‌ ನಿರಾಕರಿಸಿ ಯಂಗ್‌ ಫೇಸ್‌ ವಾಯುವಿಗೆ ಮುಂದಕ್ಕೆ ತರೋಣ. ಹೇಗಿದ್ದರೂ ನಮ್ಮಲ್ಲಿ 75 ಪ್ಲಸ್‌ ನವರಿಗೆ ವಿರಾಮ ಕೊಡ್ತೀದ್ದವಲ್ಲಾ !

ಟಾಪ್ ನ್ಯೂಸ್

1-dsasa

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-dsad

Train ಅವಘಡ; ಬಾಲಸೋರ್ ನಲ್ಲಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು

MLA Vedavyasa Kamath

ಪಾಲಿಕೆ ವ್ಯಾಪ್ತಿಯ ಅನುದಾನ ತಡೆಯಿಂದ ತೀವ್ರ ಸಮಸ್ಯೆ: ಶಾಸಕ ವೇದವ್ಯಾಸ ಕಾಮತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

ಹೊಸ ಸೇರ್ಪಡೆ

1-dsasa

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-dsad

Train ಅವಘಡ; ಬಾಲಸೋರ್ ನಲ್ಲಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-WWQEWQ

Harapanahalli ಮೂವರು ಅಂತರ್ ರಾಜ್ಯ ಕಳ್ಳರ ಬಂಧನ