
ದಾವಣಗೆರೆ ಜಿಲ್ಲೆಯಲ್ಲಿ 414 ಮಂದಿ ಗುಣಮುಖ, 648 ಹೊಸ ಪ್ರಕರಣ ಪತ್ತೆ
Team Udayavani, May 16, 2021, 10:33 PM IST

ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ಕೊರೊನಾದಿಂದ ಗುಣಮುಖರಾದ 414 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 276, ಹರಿಹರದಲ್ಲಿ 38, ಜಗಳೂರಿನಲ್ಲಿ 12, ಚನ್ನಗಿರಿ ಯಲ್ಲಿ 37, ಹೊನ್ನಾಳಿಯಲ್ಲಿ 33 ಹಾಗೂ ಹೊರ ಜಿಲ್ಲೆಯ 18 ಜನ ಒಳಗೊಂಡಂತೆ 414 ಸೋಂಕಿತರು ಗುಣಮುಖರಾಗಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಸ್ಫೋಟವಾಗಿದೆ.
ಕಳೆದ ಮಾರ್ಚ್ನಿಂದ ಇದೇ ಮೊದಲ ಬಾರಿಗೆ ಒಂದೇ ದಿನ ಸೋಂಕಿತರ ಪ್ರಮಾಣ ಸಾವಿರದ ಗಡಿ ದಾಟಿವೆ. ಮೊದಲನೇ ಅಲೆಯಲ್ಲಿ ಒಂದೇ ದಿನ 648 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ದಾಖಲೆಯಾಗಿತ್ತು. ಭಾನುವಾರ 1,155 ಪ್ರಕರಣ ದೃಢಪಟ್ಟಿವೆ.
ಜಿಲ್ಲಾ ಕೇಂದ್ರ ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 631 ಪ್ರಕರಣ ಪತ್ತೆಯಾಗಿವೆ. ಕೊರೊನಾ ಊಹೆಗೂ ಮೀರಿ ವ್ಯಾಪಿಸುತ್ತಿರುವದರಿಂದ ಜನರಲ್ಲಿ ಆತಂಕ ಮೂಡಿದೆ.
ಇದನ್ನೂ ಓದಿ :ರಾಜ್ಯಕ್ಕೆ ಕೇಂದ್ರದಿಂದ 4.25 ಲಕ್ಷ ಡೋಸ್ ರೆಮಿಡಿಸಿವರ್ ಹಂಚಿಕೆ: ಡಿಸಿಎಂ ಅಶ್ವತ್ಥನಾರಾಯಣ
ಹರಿಹರದಲ್ಲಿ 150 , ಜಗಳೂರಿನಲ್ಲಿ 45, ಚನ್ನಗಿರಿಯಲ್ಲಿ 173, ಹೊನ್ನಾಳಿಯಲ್ಲಿ 113 ಹಾಗೂ ಹೊರ ಜಿಲ್ಲೆಯ 43 ಜನರು ಒಳಗೊಂಡಂತೆ 1,155 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ.
ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 18747, ಹರಿಹರದಲ್ಲಿ 4643, ಜಗಳೂರಿನಲ್ಲಿ 1635, ಚನ್ನಗಿರಿಯಲ್ಲಿ 3294, ಹೊನ್ನಾಳಿಯಲ್ಲಿ 3712, ಹೊರ ಜಿಲ್ಲೆಯ 970 ಜನರು ಸೇರಿದಂತೆ ಈವರೆಗೆ ಒಟ್ಟು 33,001 ಜನರು ಸೋಂಕಿಗೆ ಒಳಗಾಗಿದ್ದಾರೆ.
ಕೊರೊನಾದಿಂದ ದಾವಣಗೆರೆ ತಾಲೂಕಿನಲ್ಲಿ 16,705, ಹರಿಹರದಲ್ಲಿ 4054, ಜಗಳೂರಿನಲ್ಲಿ 1426, ಚನ್ನಗಿರಿಯಲ್ಲಿ 2795, ಹೊನ್ನಾಳಿಯಲ್ಲಿ 3219, ಹೊರ ಜಿಲ್ಲೆಯ 834 ಜನರು ಸೇರಿದಂತೆ 29,033 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 3656 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಕೊರೊನಾದಿಂದ ಓರ್ವ ಮೃತಪಟ್ಟಿದ್ದಾರೆ. ದಾವಣಗೆರೆಯ ವಿನೋಬ ನಗರದ 61 ವರ್ಷದ ವೃದ್ಧೆ ಮೃತಪಟ್ಟವರು. ಈವರೆಗೆ ಕೊರೊನಾದಿಂದ 312 ಜನರು ಸಾವನ್ನಪ್ಪಿದ್ದಂತಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 258 ಸೋಂಕಿತರು ಸಾಮಾನ್ಯ, 704 ಸೋಂಕಿತರು ಆಕ್ಸಿಜನ್, 36 ಸೋಂಕಿತರು ಎಚ್ಎಫ್ಎನ್ಸಿ, 52 ಸೋಂಕಿತರು ವೆಂಟಿಲೇಟರ್ 32 ಸೋಂಕಿತರು ವೆಂಟಿಲೇಟರ್ ರಹಿತ, 1133 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 274 ಸೋಂಕಿತರು ಕೋವಿಡ್ ಕೇರ್ ಸೆಂಟರ್ನಲ್ಲಿ ಇದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ
ಹೊಸ ಸೇರ್ಪಡೆ

ಸಿದ್ರಾಮಣ್ಣೋರ್ ಫೈವ್ ಗ್ಯಾರಂಟಿ ಕೊಟ್ಮ್ಯಾಕೆ ಲೈಫ್ ಈಸ್ ಜಿಂಗಾಲಾಲಾ…

Telangana Polls; ತೆಲಂಗಾಣ ಚುನಾವಣೆಗೆ ಬಿಜೆಪಿ ಜತೆ ಟಿಡಿಪಿ ಮೈತ್ರಿ?

CSK Forever: ಮದುವೆ ಕಾರ್ಡ್ನಲ್ಲಿ ಧೋನಿ ಫೋಟೋ ಪ್ರಿಂಟ್ ಮಾಡಿಸಿದ ಅಭಿಮಾನಿ

ಹೊಸ ಇನ್ನಿಂಗ್ಸ್ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ