ಪೊಲೀಸರ ನಶೆ ಇಳಿಸಲು ಮುಂದಾದ ಆಯುಕ್ತರು!
Team Udayavani, May 2, 2022, 9:38 AM IST
ಬೆಂಗಳೂರು: ಪೊಲೀಸರು ಆರೋಪಿಗಳು ಮತ್ತು ಕಳ್ಳಕಾಕರ “ನಶೆ’ ಇಳಿಸುವುದು ಸಾಮಾನ್ಯ ಸಂಗತಿ. ಆದರೆ, ಪೊಲೀಸರ ನಶೆ ಇಳಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿದೆ.
ನಗರದ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಕೆಲ ಅಧಿಕಾರಿ-ಸಿಬ್ಬಂದಿ ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದಲ್ಲದೆ, ಸಾರ್ವಜನಿಕರು ಮತ್ತು ಹಿರಿಯ ಅಧಿಕಾರಿಗಳ ಜತೆಯೂ ದುರ್ವತನೆ ತೋರುತ್ತಿದ್ದ ಆರೋಪಗಳು ಕೇಳಿ ಬಂದಿದ್ದವು. ಕೆಲವರು ಕೌಟುಂಬಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಮತ್ತು ಇತರೆ ವೈಯಕ್ತಿಕ ಕಾರಣಗಳು ಹಾಗೂ ಕುಡಿತ ಚಟ ಅಂಟಿಸಿಕೊಂಡವರು ಇದ್ದಾರೆ. ಪ್ರಮುಖವಾಗಿ ಮದ್ಯ ಸೇವಿಸಿ ರಾತ್ರಿ ವೇಳೆ ಠಾಣೆ ಕರ್ತವ್ಯ ಮತ್ತು ಸಂಚಾರ ನಿರ್ವಹಣೆ ಮಾಡಿ, ಸಾರ್ವಜ ನಿಕರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದರು.
ಈ ಹಿನ್ನೆಲೆ ಯಲ್ಲಿ ನಗರ ಪೊಲೀಸ್ ಆಯುಕ್ತರಿಗೆ ಹಲವಾರು ದೂರುಗಳು ಬರುತ್ತಿದ್ದವು. ಈ ಸಂಬಂಧ ಅಂತಹ ಅಧಿಕಾರಿ-ಸಿಬ್ಬಂದಿ ಪತ್ತೆ ಹಚ್ಚಿ “ಕುಡಿತ ಬಿಡಿಸುವ’ ಕೆಲಸವನ್ನು ನಗರ ಪೊಲೀಸ್ ಇಲಾಖೆ ಮಾಡುತ್ತಿದೆ.
ಮಂಗಳೂರಿನಲ್ಲಿ ಚಿಕಿತ್ಸೆ
ಮದ್ಯದ ಅಮಲಿನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ-ಸಿಬ್ಬಂದಿ ಬಗ್ಗೆ ಮಾಹಿತಿ ಸಂಗ್ರ ಹಿಸಿ ಠಾಣಾಧಿಕಾರಿಗಳು ಅಥವಾ ಎಸಿಪಿ ಹಂತದ ಅಧಿಕಾರಿಗಳು ನಗರ ಪೊಲೀಸ್ ಕಚೇರಿಯಲ್ಲಿರುವ ಆಡಳಿತ ವಿಭಾಗದ ಡಿಸಿಪಿಗೆ ಮಾಹಿತಿ ನೀಡಬೇಕು. ಬಳಿಕ ಕನಿಷ್ಠ 8-10 ಮಂದಿಯನ್ನು ಆಯ್ಕೆ ಮಾಡಿ, ಪಿಎಸ್ಐ ಅಥವಾ ಎಎಸ್ಐ ಹಂತದ ಅಧಿಕಾರಿಯೊಬ್ಬ ಉಸ್ತುವಾರಿಯಲ್ಲಿ ಪೊಲೀಸ್ ಇಲಾಖೆ ವಾಹದಲ್ಲಿಯೇ ಮಂಗಳೂರಿನಲ್ಲಿರುವ ಕೆ.ಎಸ್.ಹೆಗಡೆ ಚಾರಿಟೆಬಲ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. 10 ದಿನಗಳ ಕಾಲ ಕುಡಿತ ಬಿಡಿಸುವ ಕುರಿತು ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ವಾಪಸ್ ಬರುವ ಅಧಿಕಾರಿ-ಸಿಬ್ಬಂದಿಗೆ ಆಯುಕ್ತರ ಕಚೇರಿಯಲ್ಲಿ ಆಪ್ತಸಮಾಲೋಚಕರ ಮೂಲಕ ಸಮಾಲೋಚನೆ ಮಾಡಲಾಗುತ್ತದೆ. ಬಳಿಕ ಪ್ರಮಾಣ ಪತ್ರ ನೀಡಿ ಕರ್ತವ್ಯಕ್ಕೆ ಹಾಜರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಲ್ಲದೆ, ಚಿಕಿತ್ಸೆ ಪಡೆದ ಅಧಿಕಾರಿಗೆ ಪ್ರತಿ ತಿಂಗಳು ಆಪ್ತಸಮಾಲೋಚನೆ ನಿರಂತರವಾಗಿರುತ್ತದೆ. ಈ ವೇಳೆ ಆತನ ಕೌಟುಂಬಿಕ ವಿಚಾರ ಮತ್ತು ವೈಯಕ್ತಿಕ ಹಾಗೂ ಆರೋಗ್ಯದ ಸಮಸ್ಯೆ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಕೌಟುಂಬಿಕ ಸಮಸ್ಯೆಯಾದರೆ ಅವರ ಕುಟುಂಬ ಸದಸ್ಯರನ್ನು ಕರೆದು ಆಪ್ತಸಮಾಲೋಚನೆ ಮಾಡಲಾಗುತ್ತದೆ. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಸೂಕ್ತ ಚಿಕಿತ್ಸೆಗೆ ಸಲಹೆ ನೀಡಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
26 ಮಂದಿ ಚಿಕಿತ್ಸೆ: ಒಂದು ತಿಂಗಳಿಂದ ನಗರದ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ 26 ಮಂದಿ ಅಧಿಕಾರಿ-ಸಿಬ್ಬಂದಿ ಚಿಕಿತ್ಸೆ ಪಡೆದುಕೊಂಡು, ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಎಂಟು ಮಂದಿ ಯನ್ನು ಮಂಗಳೂರಿಗೆ ಕಳುಹಿಸಲಾಗಿದೆ.
ಆಡಳಿತ ವಿಭಾಗದ ಡಿಸಿಪಿ ನಿಶಾಜೇಮ್ಸ್ ನೇತೃತ್ವದಲ್ಲಿ ಈ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ.ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುವ ಅಧಿಕಾರಿ-ಸಿಬ್ಬಂದಿಯ ಸಮಸ್ಯೆ ಅರಿತು ಹಂತ-ಹಂತವಾಗಿ ಸೂಕ್ತ ಚಿಕಿತ್ಸೆ ನೀಡಿ, ಮದ್ಯದ ಚಟದಿಂದ ದೂರ ಮಾಡಲಾಗಿದೆ. ಈ ಮೂಲಕ ಜನಸ್ನೇಹಿ ಪೊಲೀಸ್ ಮಾಡುತ್ತಿದ್ದೇವೆ. –ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ
–ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ