ಉಡುಪಿ: ಟೋಲ್‌ ಸಮಸ್ಯೆ ಇತ್ಯರ್ಥಕ್ಕೆ ನಿರ್ಣಯ


Team Udayavani, Feb 23, 2021, 5:50 AM IST

ಉಡುಪಿ: ಟೋಲ್‌ ಸಮಸ್ಯೆ ಇತ್ಯರ್ಥಕ್ಕೆ ನಿರ್ಣಯ

ಉಡುಪಿ: ಸಾಸ್ತಾನ, ಗುಂಡ್ಮಿ ಮತ್ತು ಹೆಜಮಾಡಿ ಟೋಲ್‌ ಗೇಟ್‌ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಸೋಮವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ತಳೆಯಲಾಗಿದೆ.

ಮೊದಲು ಸಾಸ್ತಾನ ಟೋಲ್‌ಗೇಟ್‌ ವಿರುದ್ಧ ಹೋರಾಡುತ್ತಿರುವ ಮುಂದಾಳುಗಳು ಮಾತನಾಡಿ, ಕೋಟ ಜಿ.ಪಂ. ಐದು ಕಿ.ಮೀ. ವ್ಯಾಪ್ತಿಯ ಸ್ಥಳೀಯರಿಗೆ ಟೋಲ್‌ನಿಂದ ವಿನಾಯಿತಿ ನೀಡಲೇಬೇಕು ಎಂದರು. ನಮಗೆ ಸರ್ವಿಸ್‌ ರಸ್ತೆಯನ್ನಾದರೂ ಮಾಡಿಕೊಡಲಿ. ಅದರಲ್ಲೇ ಸಂಚರಿಸುತ್ತೇವೆ ಎಂದರು. ಟೋಲನ್ನು ಸಚಿವಾಲಯದ ಅನುಮತಿಯಿಂದ ಆರಂಭಿಸಿದ್ದು ವಿನಾಯಿತಿ ನೀಡಿದರೆ ನಷ್ಟವಾಗುತ್ತದೆ ಎಂದು ನವಯುಗ ಟೋಲ್‌ ಗೇಟ್‌ ಮುಖ್ಯಸ್ಥ ತಿಳಿಸಿದರು.

ಶಾಸಕ ಕೆ. ರಘುಪತಿ ಭಟ್‌ ಅವರು, ಎಲ್ಲವನ್ನೂ ಕಾನೂನನ್ನು ತೋರಿಸಿ ಹೇಳುವುದು ಸರಿಯಲ್ಲ.ಕಂಪೆನಿಯವರು ಹೇಳಿದ ಸಮಯಕ್ಕೆ ಸರಿಯಾಗಿ ಮಾಡಿದ್ದೀರಾ? ಇದೊಂದು ಸ್ಥಳೀಯರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ವ್ಯವಹಾರವಾಗಬೇಕು. ನೀವು ಒಪ್ಪದೆ ಇದ್ದರೆ ಜಿಲ್ಲಾಡಳಿತದಿಂದ ನಿಮಗೇಕೆ ರಕ್ಷಣೆ ಕೊಡಬೇಕು ಎಂದು ಪ್ರಶ್ನಿಸಿದರು.

ಐದು ಗ್ರಾ.ಪಂ. ವ್ಯಾಪ್ತಿಯ ವಾಹನಗಳ ಆರ್‌ಸಿ ದಾಖಲೆಗಳನ್ನು ಸಂಗ್ರಹಿಸಿ ಕೊಡಲು ಹೋರಾಟ ಸಮಿತಿಯವರು ಸಹಕರಿಸುವರು. ಇದರ ಆಧಾರದಲ್ಲಿ ರಿಯಾಯಿತಿ ಕೊಡಬೇಕು. ಹೆಚ್ಚೆಂದರೆ 1,500 ವಾಹನಗಳಿರಬಹುದು. ಇದಕ್ಕೆ ಬೇಕಾದುದನ್ನು ಜಿಲ್ಲಾಡಳಿತ ಮಾಡಿ ಕೊಡುತ್ತದೆ ಎಂದು ಸಂಸದೆ ಶೋಭಾ ತಿಳಿಸಿದರು.

ಎಂಪಿ, ಡಿಸಿ ಗರಂ!
ಸಾಸ್ತಾನ ಟೋಲ್‌ ವಿರೋಧಿ ಹೋರಾಟಗಾರರು ಆಡಿದ ಮಾತಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್‌, “ಯಾವ ಸಭೆಯಲ್ಲಿ ಏನು ಮಾತನಾಡಬೇಕೆಂದು ಗೊತ್ತಿಲ್ಲವೆ? ನಾವು ಸಮಸ್ಯೆಯನ್ನು ಬಗೆಹರಿಸಲು ಸಭೆ ಕರೆದಿದ್ದೇವಿ?’ ಎಂದು ಏರುದನಿಯಲ್ಲಿ ಕೇಳಿದರು. “ಎಂಪಿ ಎಲ್ಲಿ ಹೋಗಿದ್ದೀರಿ’ ಎಂದು ಕೇಳುತ್ತೀರಿ? ನಾನು ನಿಮ್ಮ ಸಮಸ್ಯೆ ಕುರಿತು ಮಾತನಾಡಿದ್ದೇನೆ’ ಎಂದು ಸಂಸದೆಯೂ ಅಸಮಾಧಾನ ವ್ಯಕ್ತ ಪಡಿಸಿದರು.

ಸ್ಥಳೀಯರ ನೇಮಿಸಲು ಆಗ್ರಹ
ಟೋಲ್‌ನಲ್ಲಿ ಸ್ಥಳೀಯರನ್ನು ನೇಮಿಸಿ. ನಾವು ಪ್ರತೀ ಬಾರಿ ಸಂಚರಿ ಸುವಾಗಲೂ ನವಯುಗ ಟೋಲ್‌ನಲ್ಲಿ ಮಾತ್ರ ನಮ್ಮ ಕಾರ್ಡ್‌ ನೀಡಬೇಕಾಗಿದೆ ಎಂದು ಭಟ್‌ ಅಸಮಾಧಾನ ವ್ಯಕ್ತಪಡಿಸಿದರು.

ಬಸ್‌ ಸಂಚಾರ ಕಡಿತ
ಹೆಜಮಾಡಿ ಟೋಲ್‌ ಸಮಸ್ಯೆಯಿಂದ ಬಸ್‌ ನಿಲುಗಡೆಯಾಗಿರುವುದನ್ನು ಶಾಸಕ ಲಾಲಾಜಿ ಮೆಂಡನ್‌ ಬೆಟ್ಟು ಮಾಡಿದರು.
ಹೆಜಮಾಡಿ ಮುಖ್ಯ ಟೋಲ್‌ಗೇಟ್‌ ಅಲ್ಲದೆ, ಮೂಲ್ಕಿಯಿಂದ ಪಡುಬಿದ್ರಿಗೆ ಬರುವಾಗ ಹೆಜಮಾಡಿ ಹಿಂದಿನ ಗ್ರಾ.ಪಂ. ರಸ್ತೆಯಲ್ಲಿಯೂ ಟೋಲ್‌ ಸಂಗ್ರಹಿಸುತ್ತಾರೆ. ಇದರಿಂದಾಗಿ ಶೇ. 75ರಷ್ಟು ಬಸ್‌ಗಳ ಟ್ರಿಪ್‌ಗ್ಳನ್ನು ಕಡಿತ ಮಾಡಲಾಗಿದೆ. ತೆರಿಗೆಗಿಂತ ಟೋಲ್‌ ಶುಲ್ಕವೇ ಜಾಸ್ತಿಯಾಗುತ್ತಿದೆ. ಎನ್‌ಐಟಿಕೆಯಿಂದ ಹೆಜಮಾಡಿಗೆ ಇರುವುದು 11 ಕಿ.ಮೀ. ಈ ನಡುವೆ ಎರಡು ಟೋಲ್‌ ಶುಲ್ಕ ತೆರಲು ಸಾಧ್ಯವೆ? ಈ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡುವುದಾದರೂ ಇದು ಸಾಧ್ಯವೆ? ಇಲ್ಲಿ ಓಡಾಡುವ ಕನಿಷ್ಠ 20 ಬಸ್ಸುಗಳಿಗೆ ರಿಯಾಯಿತಿ ಕೊಡಬೇಕು ಎಂದು ಕೆನರ ಬಸ್‌ ಮಾಲಕರ ಸಂಘದ ಪ್ರ.ಕಾರ್ಯದರ್ಶಿ ಸುರೇಶ ನಾಯಕ್‌ ಮನವಿ ಮಾಡಿದರು.

ಸ್ಥಳೀಯ ಮುಂದಾಳುಗಳು, ಬಸ್‌ ಮಾಲಕರು, ನವಯುಗ ಸಂಸ್ಥೆಯವರು ಕುಳಿತು ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಿ. ಈ ಬಸ್‌ಗಳಿಗೆ ಟೋಲ್‌ನಿಂದ ಮುಕ್ತಿ ನೀಡಿ ಎಂದು ಸಭೆ ನಿರ್ಣಯಿಸಿತು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷ ದಿನಕರಬಾಬು, ಸಿಇಒ ಡಾ| ನವೀನ್‌ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ ಮೊದಲಾದವರು ಉಪಸ್ಥಿತರಿದ್ದರು.

ಗಡಿಗಳಲ್ಲಿ ಚೆಕ್‌ಪೋಸ್ಟ್‌
ಎರಡೂ ರಾಜ್ಯಗಳಿಂದ ಬರುವ ವರನ್ನು ಪರಿಶೀಲನೆ ನಡೆಸಲು ದ.ಕ., ಕೊಡಗು, ಉ.ಕ., ಬೆಳಗಾವಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದರು.

ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಆರ್‌ಟಿಪಿಸಿಆರ್‌ ಕಡ್ಡಾಯ: ಶೋಭಾ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ರೂಪಾಂತರ ವೈರಸ್‌ ಹರಡದಂತೆ ಮುನ್ನೆಚ್ಚರಿಕೆಯಾಗಿ ಜಿಲ್ಲೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ವಿಶೇಷವಾಗಿ ಮುಂಬಯಿಯಿಂದ ಬರುವವರ ಆರ್‌ಟಿಪಿಸಿಆರ್‌ ಪರೀಕ್ಷೆ ವರದಿಯನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸುವಂತೆ ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇರಳ ಮತ್ತು ಮುಂಬಯಿಯಿಂದ ಬಸ್‌ನಿಂದ ಬರುವವರಲ್ಲಿ ಪರೀಕ್ಷಾ ವರದಿ ಇರಲೇಬೇಕು. ಇಲ್ಲವಾದರೆ ಬಸ್‌ ಹತ್ತಿಸಿಕೊಳ್ಳಬಾರದು ಎಂದು ಬಸ್‌ ಮಾಲಕರ ಸಭೆ ಕರೆದು ಸೂಚನೆ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಜಿಲ್ಲೆಗೆ ಬರುವವರಲ್ಲಿ ವರದಿ ಇಲ್ಲದಿದ್ದ ಪಕ್ಷದಲ್ಲಿ ಜಿಲ್ಲೆಯಲ್ಲಿ ಪರೀಕ್ಷೆ ನಡೆಸಿ ವರದಿ ಬರುವವರೆಗೆ ಹೋಂ ಕ್ವಾರಂಟೈನ್‌ ವಿಧಿಸಬೇಕೆಂದು ಸಲಹೆ ನೀಡಿದರು.

ಕುಂದಾಪುರದ ಕಾಮಗಾರಿ 15 ದಿನಗಳಲ್ಲಿ ಉದ್ಘಾಟನೆ
ಕುಂದಾಪುರದ ಶಾಸ್ತ್ರಿ ಸರ್ಕಲ್‌ ಕಾಮಗಾರಿ ಹತ್ತು ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು ಸಾರ್ವಜನಿಕರ ಉಪಯೋಗಕ್ಕೆ ಬರಲಿದೆ ಎಂದು ಸಂಸದೆ, ಜಿಲ್ಲಾಧಿಕಾರಿ, ನವಯುಗ ಸಂಸ್ಥೆಯವರು ತಿಳಿಸಿದರು.

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-review

Movie Review: ಒಂದು ಸರಳ ಪ್ರೇಮ ಕಥೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.