ಹೇಡಿಗಳು ಎಂದ ಖಾದರ್ : ಯಾರು ಎಂದು ಸದನದಲ್ಲಿ ಪಟ್ಟು ಹಿಡಿದ ಬಿಜೆಪಿ

ಮುಸ್ಲಿಮರಿಗೆ ವ್ಯಾಪಾರಕ್ಕಿಲ್ಲ ಅವಕಾಶ ; ಸದನದಲ್ಲಿ ಕೋಲಾಹಲ

Team Udayavani, Mar 23, 2022, 1:45 PM IST

vidhana-soudha

ವಿಧಾನ ಸೌಧ : ಧಾರ್ಮಿಕ ಕೇಂದ್ರದಲ್ಲಿ ಮುಸ್ಲಿಂ ಧರ್ಮದವರು ವ್ಯಾಪಾರ ಮಾಡದಂತೆ ಆಗ್ರಹಿಸುತ್ತಿರುವ ವಿಚಾರ ಬುಧವಾರ ವಿಧಾನಸಭೆಯಲ್ಲಿ ಚರ್ಚೆಗೆ ಬಂದು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ಯುದ್ಧಕ್ಕೆ ಕಾರಣವಾಯಿತು.

ಶೂನ್ಯವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ವಿಪಕ್ಷ ಉಪನಾಯಕ ಯು.ಟಿ ಖಾದರ್ , ನಮ್ಮ ರಾಜ್ಯದ ಅಭಿವೃದ್ಧಿ ಆಗಬೇಕಾ್ದಾರೆ ಸಾಮರಸ್ಯ, ಸಹೋದರತೆ ಇರಬೇಕು. ಕೆಲ ಕ್ರೂರ ಮನಸ್ಸುಗಳು ಸಮಸ್ಯೆ ಸೃಷ್ಟಿಸ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ಇಂತದ್ದೇ ಧರ್ಮ ಅಂತ ಅಲ್ಲದೆ ಜೀವನ ಸಾಗಿಸುತ್ತಿದ್ದಾರೆ.ಕೆಲವು ಕಡೆ ಧಾರ್ಮಿಕ ಕೇಂದ್ರದಲ್ಲಿ ಕೆಲವರು ಮುಸ್ಲಿಂ ಧರ್ಮದವರು ವ್ಯಾಪಾರ ಮಾಡದಂತೆ ಆಗ್ರಹಿಸುತ್ತಿದ್ದಾರೆ. ಅವರು ಕೆಟ್ಟ ಮನಸ್ಸಿನವರು, ಕ್ರೂರಿಗಳು, ಹೇಡಿಗಳು ಎಂದರು.

ಈ ವೇಳೆ ಬಿಜೆಪಿ ಶಾಸಕರು ಆಕ್ರೋಶ ಹೊರ ಹಾಕಿ ಹೇಡಿಗಳು ಯಾರು ಅಂತ ಹೇಳುವಂತೆ ಪಟ್ಟು ಹಿಡಿದರು. ಹೇಡಿಗಳು ಅಂತ ಯಾರನ್ನ ಕರೀತಿದ್ದಾರೆ ಹೇಳಿ ಎಂದು ಶಾಸಕ ರಘುಪತಿ ಭಟ್, ಹರೀಶ್ ಪೂಂಜಾ ಮತ್ತಿತರರು ಆಗ್ರಹಿಸಿದರು. ಈ ವೇಳೆ ಇಲ್ಲಿ ಯಾವುದೇ ಧರ್ಮದ ಹೆಸರೂ ಪ್ರಸ್ತಾಪ ಮಾಡಿಲ್ಲ ಅಂತ ಖಾದರ್ ಸ್ಪಷ್ಟನೆ ನೀಡಿದರು.

ನಮ್ಮ ಮಠಗಳು, ದೇವಸ್ಥಾನಗಳಲ್ಲಿ ಪ್ರವೇಶಕ್ಕೆ ಅವಕಾಶ ಕೊಡುತ್ತೇವೆ. ಇವರ ಮಸೀದಿಗೆ ಹೋಗುವುದಕ್ಕೆ ಬಿಡ್ತಾರಾ ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿ, ಹೇಡಿ ಅನ್ನೋ ಪದ ವಾಪಸ್ ಪಡೆಯುವಂತೆ ಆಗ್ರಹಿಸಿದರು. ಇಷ್ಟು ವರ್ಷ ಓಟ್ ಬ್ಯಾಂಕ್ ರಾಜಕಾರಣ ಮಾಡಿದ್ದು ನೀವು,
ಏನು ಮಾಡಿದ್ದೀರಿ ನೀವು ಎಂದು ಆಕ್ರೋಶ ಹೊರ ಹಾಕಿದರು.

ತೀವ್ರ ಕೋಲಾಹಲ ಉಂಟಾದಾಗ ಸಚಿವ ಮಾಧುಸ್ವಾಮಿ ಅವರು ಬಿಜೆಪಿ ಶಾಸಕರನ್ನು ಕುರ್ಚಿ ಬಳಿ ಹೋಗಿ ಕೂರಿಸಿದರು. ಸ್ಪೀಕರ್ ಕಾಗೇರಿ ಅವರು , ವಿಪ್ ಸತೀಶ್ ರೆಡ್ಡಿ ಹೋಗಿ ಕೂರಿಸಿ, ನೀವು ವಿಪ್ ಇದ್ದೀರಿ ಎಂದು ಸೂಚಿಸಿದರು.

ಮೋಸ, ಕಳ್ಳತನ ಮಾಡದೆ ಬದುಕುತ್ತಿದ್ದಾರೆ : ಖಾದರ್ ಮನವಿ 

ಬೀದಿಬದಿ ವ್ಯಾಪಾರಿಗಳು ಸ್ವಾಭಿಮಾನದಿಂದ ಕೆಲಸ ಮಾಡುತ್ತಿದ್ದಾರೆ.ಮೋಸ, ಕಳ್ಳತನ ಮಾಡದೆ ಬದುಕುತ್ತಿದ್ದಾರೆ. ಎಲ್ಲಾ ಧರ್ಮದ ಜನ ವ್ಯಾಪಾರ ಮಾತ್ತಿದ್ದಾದ್ದಾರೆ, ಇದು ಓಪನ್ ಮಾರ್ಕೆಟ್. ಇದರ ನಡುವೆ ಕೆಲವರು ವೈಮನಸ್ಸು ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಹಾಕಿದ್ದಾರೆ.ಹೆಸರು ಹಾಕಿಲ್ಲ ಸಮಸ್ತ ಬಾಂದವರು ಅಂತ ಹಾಕಿದ್ದಾರೆ.ಹೆಸರು ಹಾಕಿದರೆ ಅವರ ಹೆಸರು ಉಲ್ಲೇಖ ಮಾಡಬಹುದು. ಈಗ ಮಾದ್ಯಮದಲ್ಲಿ ಪ್ರಚಾರ ಸಿಗುತ್ತಿದೆ ಎಂದರು.

ನಾವು ಮುಲ್ಕಿಯ ಹಿಂದೂ ಸಹೋದರರನ್ನಅಭಿನಂದಿಸುತ್ತೇನೆ. ಅವರೇ ಹೋಗಿ ಬೆದರಿಸಿ ತೆಗೆಸಿದ್ದಾರೆ. ಬುದ್ದಿವಾದ ಹೇಳಿದ್ದಕ್ಕೆ ಪೊಲೀಸರು ಮಾಡದ ಕೆಲಸ ಹಿಂದೂ ಸಹೋದರರು ಮಾಡುತ್ತಿದ್ದಾರೆ. ನಾವೆಲ್ಲರೂ ಸೇರಿ ಮಟ್ಟ ಹಾಕುವ ಕೆಲಸ ಮಾಡಬೇಕಿದೆ. ಶಿವಮೊಗ್ಗ, ನೆಲಮಂಗಲ, ಕರಾವಳಿ, ಶಿರಸಿಯಲ್ಲಿ ಬಿತ್ತಿ ಪತ್ರ ಹಾಕಿದ್ದಾರೆ. ಅಂತವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಕೆಲಸ ಆಗಬೇಕು. ಕೋಮುವಾದಿಗಳನ್ನು ನಾವು ನೋಡಿ ಆನಂದಿಸಬಾರದು. ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಖಾದರ್ ಮನವಿ ಮನವಿ ಮಾಡಿದರು.

ಮಾಧುಸ್ವಾಮಿ ಉತ್ತರ

ಯಾವ ಸರ್ಕಾರ ಅಥವಾ ಪ್ರೋತ್ಸಾಹ ಇದೆ ಅಂತ ಭಾವಿಸಬಾರದು. ಆಕಸ್ಮಿಕವಾಗಿ ನಡೆದ ಘಟನೆಗೆ ಎಲ್ಲಾ ಜವಾಬ್ದಾರಿ ಮಾಡಬಾರದು.
ಇದು ಕನ್ಪ್ಯೂಸ್ ಅಗಿದೆ. 2012ರಲ್ಲಿ ರೂಲ್ಸ್ ಮಾಡುವಾಗ ಸಂಸ್ಥೆ ಜಮೀನು , ಸಮೀಪದ ಜಮೀನು, ಕಟ್ಟಡ ಅಥವಾ ನಿವೇಶನ ಸೇರಿದಂತೆ ಯಾವುದೇ ಸ್ವತ್ತನ್ನ ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ.2002 ಹಿಂದೂ ಧಾರ್ಮಿಕ ಸಂಸ್ಥೆ, ಧರ್ಮದತ್ತಿ ನಿಯಮದಲ್ಲಿ ರೂಲ್ಸ್ ಮಾಡಿದ್ದಾರೆ. ಯಾವುದೇ ಧರ್ಮದವರಿಗೆ ಗುತ್ತಿಗೆ ಕೊಡುವಂತಿಲ್ಲ ಅಂತಿದೆ. ಈ ನಿಯಮ ನೋಡಿ ಬೋರ್ಡ್ ಹಾಕಿದ್ದಾರೆ ಎಂದು ರಘುಪತಿ ಭಟ್ ಹೇಳುತ್ತಿದ್ದಾರೆ.

ದೇವಸ್ಥಾನ ಆವರಣದ ಒಳಗಡೆ ಇದ್ದರೆ ನೀವು ತಿದ್ದಿಕೊಳ್ಳಬೇಕಿದೆ, ಹೊರಗೆ ಇದ್ದಾರೆ ನಾವು ಕೇಳಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮಾಡಿದ್ದು. ಈಗ ನೀವೇ ಪ್ರಶ್ನೆ ಮಾಡುತ್ತಿದ್ದೀರಾ ಸಿದ್ದರಾಮಯ್ಯ ಅವರೇ. ಬೇರೆ ಆವರಣ, ಪ್ರದೇಶದಲ್ಲಿ ಆದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ.ಬೇರೆ ಧರ್ಮದವರಿಗೆ ಅವಕಾಶ ಇಲ್ಲ ಅಂತಿದೆ, ಖಾದರ್ ಅವರೇ. ರೇಣುಕಾಚಾರ್ಯ ಅವರು ಸುಳ್ಳು ಸರ್ಟಿಫಿಕೇಟ್ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಇದು ಕಡತಕ್ಕೆ ಹೋಗಲಿದೆ. ಅವರು ಈ ಸದನದ ಗೌರವ ಸದಸ್ಯರು. ನೀವೇ ವಿತ್ ಡ್ರಾ ಮಾಡಿ ಅಂತ ಯು.ಟಿ ಖಾದರ್‌ಗೆ ಸೂಚನೆ ನೀಡಿದರು.

ಟಾಪ್ ನ್ಯೂಸ್

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 15 ಮಂದಿ ಆರೋಪಿಗಳು ಖುಲಾಸೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.