ಡಿಕೆಶಿ ವಿರುದ್ದ ಮತ್ತೆ ಕಿಡಿಕಾರಿದ ಸಚಿವ ಡಾ. ಅಶ್ವಥ್ ನಾರಾಯಣ್
Team Udayavani, May 4, 2022, 2:59 PM IST
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾದವರು. ಜೈಲಿಗೆ ಹೋಗಿ ಬಂದ ವ್ಯಕ್ತಿ. ಅವರಿಗೆ ನೈತಿಕತೆ ಅನ್ನುವುದೇ ಇಲ್ಲ. ಆದರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಸಚಿವ ಡಾ. ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ದಾಖಲೆ ಇಲ್ಲದೆ ಜೈಲಿಗೆ ಹೋಗಿ ಬಂದ ವ್ಯಕ್ತಿ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ. ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಹಾಗಾಗಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಈ ವ್ಯಕ್ತಿಯ ಆರೋಪಕ್ಕೆ ಯಾವ ಕಿಮ್ಮತ್ತಿಲ್ಲ. ದಾಖಲೆ ಇದ್ದರೆ ಮುಂದೆ ಬನ್ನಿ. ಸಿಐಡಿ ತನಿಖೆ ನಡೆಯುತ್ತಿದೆ ಎಂದರು.
ದರ್ಶನ್ ಗೌಡ ಸಂಬಂಧಿ ಅನ್ನುತ್ತಾರೆ. ಡಿಕೆಶಿ ಬೇರೆ ಬೇರೆ ಪಕ್ಷದ ಕಡೆ ಬೆರಳು ತೋರಿಸುತ್ತಾರೆ. ಸಿದ್ದರಾಮಯ್ಯ ಅಸಹಾಕಯಕರಾಗಿದ್ದಾರೆ. ಡಿಕೆಶಿ ಪರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಅವರ ವಿರುದ್ದವಾಗಿ ಸಿದ್ದರಾಮಯ್ಯ ಎಂದಾದರೂ ಧ್ವನಿ ಎತ್ತಿದ್ದಾರಾ ಎಂದು ಪ್ರಶ್ನಿಸಿದರು.
ತಪ್ಪಾಗಿರುವುದನ್ನು ನಮ್ಮಸರ್ಕಾರ ಹೊರತಂದಿದೆ. ಇವರು ಇದರ ಬಗ್ಗೆ ತನಿಖೆಗೆ ಕೊಟ್ಟಿದ್ದಾರಾ?. ಸಚಿವರು ಗಮನಕ್ಕೆ ಬಂದ ಹಿನ್ನೆಲೆ ತನಿಖೆ ಮಾಡಿಸಿದ್ದಾರೆ. ನಮ್ಮ ಇಲಾಖೆಯ ಬಗ್ಗೆ ದೂರು ಬಂದಿದೆ. ಅದು ಬಂದ ತಕ್ಷಣವೇ ತನಿಖೆಗೆ ಕೊಡಲಾಗಿದೆ. ಎಕ್ಸಿಕ್ಯೂಟೀವ್ ಡೈರೆಕ್ಟರ್ ದೂರನ್ನು ತನಿಖೆಗೆ ಕೊಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ನಾಳೆ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆ ದಿಢೀರ್ ಮುಂದೂಡಿಕೆ
ದರ್ಶನ್ ಗೌಡ, ನಾಗೇಶ್ ಗೌಡ ಸಂಬಂಧಿಗಳೇ ಎಂಬ ಪ್ರಶ್ನೆ ಇದೆ. ಹೌದು, ನಾನು ವಿಶ್ವ ಮಾನವ ಒಕ್ಕಲಿಗ. ನಾನು ವಿಶ್ವ ಮಾನವ ಕೂಡ. ವಿಶ್ವ ಮಾನವ ಆಧಾರಿತವಾಗಿ ತೋರಿಸಿಕೊಟ್ಟವರು ಕುವೆಂಪು. ರಾಜ್ಯದಲ್ಲಿರುವ ಎಲ್ಲಾ ಗೌಡರು ನನ್ನ ಸಂಬಂಧಿಕರು. ಯಾರೇ ಇರಲಿ ಎಲ್ಲರೂ ನನ್ನ ಸಂಬಂಧಿಗಳು. ಇಲ್ಲಿ ಅವರು ಬೇರೆ, ಇವರು ಬೇರೆ ಇಲ್ಲ. ಗೌಡರು ಯಾರಿದ್ದಾರೆ ಎಲ್ಲರೂ ನಮ್ಮವರೇ ಎಂದು ಹೇಳಿದ್ದಾರೆ.
ಡಿಕೆಶಿ, ಕುಮಾರಸ್ವಾಮಿ ಸೇರಿದಂತೆ ಎಲ್ಲ ಗೌಡರು ಸಂಬಂಧಿಕರು. ನಾನು ಒಕ್ಕಲಿಗರ ಜಿಪಿಎ ಹೋಲ್ಡರ್. ವಿಶ್ವದಲ್ಲಿರುವ ಒಕ್ಕಲಿಗರೆಲ್ಲಾ ನಮ್ಮ ಸಂಬಂಧಿಕರು, ಜತೆಗಿರುವವರು ಹಿಂಬಾಲಕರು ಎಂದರು.