2,000 ನೋಟು ಬಗ್ಗೆ ಆತಂಕಬೇಡ: ಸೆ.30ರವರೆಗೆ ಸಮಯ ಇದೆ- RBI ಗವರ್ನರ್ ಅಭಯ
2 ಸಾವಿರ ನೋಟು ವಿನಿಮಯ ಪ್ರಕ್ರಿಯೆ
Team Udayavani, May 23, 2023, 7:27 AM IST
ನವದೆಹಲಿ: ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆಯಿಂದ ನಾಗರಿಕರು ಆತಂಕಪಡಬೇಕಾದ ಅಗತ್ಯವಿಲ್ಲ. ತ್ವರಿತವಾಗಿ ಜನರು ಬ್ಯಾಂಕ್ ಶಾಖೆಗಳಿಗೆ ಧಾವಿಸುವ ಅಗತ್ಯವೂ ಇಲ್ಲ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್ ಹೇಳಿದ್ದಾರೆ. ನವದೆಹಲಿಯಲ್ಲಿ ಸೋಮವಾರ ಮಾತನಾಡಿದ ಅವರು, ವಿನಿಮಯ ಮತ್ತು ಠೇವಣಿ ಇರಿಸಲು ಇನ್ನೂ 4 ತಿಂಗಳು ಕಾಲಾವಕಾಶವಿದೆ ಎಂದು ಪ್ರತಿಪಾದಿಸಿದ್ದಾರೆ.
ಮಂಗಳವಾರದಿಂದ ಶುರುವಾಗುವ ವಿನಿಮಯ ಮತ್ತು ಠೇವಣಿ ಪ್ರಕ್ರಿಯೆ ಸೆ.30ರವರೆಗೆ ಇರಲಿದೆ. ಈ ಅವಧಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಿಂದ ಬ್ಯಾಂಕ್ಗಳಿಗೆ ಬಂದು ಸೇರಲಿದೆ ಎಂಬ ವಿಶ್ವಾಸವನ್ನೂ ದಾಸ್ ವ್ಯಕ್ತಪಡಿಸಿದ್ದಾರೆ.
ಆರ್ಬಿಐ ನಿರ್ಧಾರದಿಂದ ಅರ್ಥ ವ್ಯವಸ್ಥೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗಲಾರದು. ಏಕೆಂದರೆ, ಒಟ್ಟಾರೆ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಪೈಕಿ ಈ ನೋಟುಗಳ ಪ್ರಮಾಣ ಶೇ.10.8ರಷ್ಟು ಮಾತ್ರ ಎಂದೂ ಅವರು ತಿಳಿಸಿದ್ದಾರೆ.
ಚಿದು ಟೀಕೆ:
ಹೊಸ ನಿರ್ಧಾರದ ಬಗ್ಗೆ ಕಟು ಟೀಕೆ ಮಾಡಿರುವ ವಿತ್ತ ಖಾತೆ ಮಾಜಿ ಸಚಿವ ಪಿ.ಚಿದಂಬರಂ “2 ಸಾವಿರ ರೂ. ನೋಟುಗಳನ್ನು ಪರಿಚಯಿಸುವ ಮೂಲಕ ಸರ್ಕಾರವು ಕಪ್ಪುಹಣವನ್ನು ಸುಲಭವಾಗಿ ಮತ್ತು ಹೇರಳವಾಗಿ ಸಂಗ್ರಹಿಸಿಡಲು ನೆರವಾಯಿತು. ಈಗ ಅವರ ಆ ಕಪ್ಪುಹಣವನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಸರ್ಕಾರವೇ ಕಪ್ಪುಕುಳಗಳಿಗೆ ಕೆಂಪು ಹಾಸು ಹಾಸಿದೆ. ಇದೊಂದು ಮೂರ್ಖತನದ ನಿರ್ಧಾರ’ ಎಂದಿದ್ದಾರೆ.
ಪೆಟ್ರೋಲ್ ಪಂಪ್ಗ್ಳಿಗೆ ಹರಿದುಬಂದ ನೋಟುಗಳು!
ಮಧ್ಯಪ್ರದೇಶದ ಇಂದೋರ್ನ ಪೆಟ್ರೋಲ್ಪಂಪ್ಗ್ಳಿಗೆ ಈಗ 2 ಸಾವಿರ ರೂ. ಮುಖಬೆಲೆಯ ನೋಟುಗಳೇ ಹರಿದುಬರಲಾರಂಭಿಸಿವೆ. ನೋಟು ವಾಪಸ್ ಘೋಷಣೆ ಬಳಿಕ 100ರೂ. ಪೆಟ್ರೋಲ್ ಹಾಕಲು ಬಂದವರು ಕೂಡ 2,000ರೂ. ನೋಟನ್ನೇ ನೀಡುತ್ತಿದ್ದಾರೆ. ಪಿಂಕ್ ನೋಟುಗಳ ಮೂಲಕ ಪೆಟ್ರೋಲ್ ಖರೀದಿಸುತ್ತಿರುವವರ ಪ್ರಮಾಣ ಹಿಂದಿಗಿಂತ 5 ಪಟ್ಟು ಅಧಿಕವಾಗಿದೆ ಎಂದು ಇಂದೋರ್ ಪೆಟ್ರೋಲ್ ಪಂಪ್ ಡೀಲರ್ಗಳ ಸಂಘ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ