ವಿಮಾನದಲ್ಲಿ ಮೇಸ್ತ್ರಿಗಳ ಕರೆಸಿಕೊಂಡ ಬಿಲ್ಡರ್‌!

ಮಂಗಳೂರಿನಲ್ಲಿ ಕಟ್ಟಡ ಕಾರ್ಮಿಕರ ಕೊರತೆ ಕಾರಣ

Team Udayavani, Jul 5, 2020, 6:00 AM IST

ವಿಮಾನದಲ್ಲಿ ಮೇಸ್ತ್ರಿಗಳ ಕರೆಸಿಕೊಂಡ ಬಿಲ್ಡರ್‌!

ವಿಶೇಷ ವರದಿ-ಮಂಗಳೂರು: ಲಾಕ್‌ಡೌನ್‌ ಅನಂತರ ನಿರ್ಮಾಣ ಕ್ಷೇತ್ರಕ್ಕೆ ಕಾರ್ಮಿಕರ ಭಾರೀ ಕೊರತೆ ಉಂಟಾಗಿದ್ದು, ಕರಾವಳಿಯಲ್ಲೂ ಇದೇ ಸ್ಥಿತಿ ಇದೆ. ಈ ಕ್ಷೇತ್ರವನ್ನು ತಮ್ಮ ಶ್ರಮದಿಂದ ಆಧರಿಸಿದ್ದ ಉತ್ತರ ಭಾರತ, ಉತ್ತರ ಕರ್ನಾಟಕದ ಮಂದಿ ಊರಿಗೆ ತೆರಳಿರುವುದೇ ಇದಕ್ಕೆ ಕಾರಣ. ಕಾಮಗಾರಿ ಮುಂದುವರಿಯಲು ಅವರೇ ಬೇಕು ಎಂಬಂಥ ಸ್ಥಿತಿಯಿದೆ. ಪರಿಹಾರವೆಂಬಂತೆ, ಮಂಗಳೂರಿನ ನಿರ್ಮಾಣ ಉದ್ಯಮಿಯೊಬ್ಬರು ಸ್ವತಃ ಟಿಕೆಟ್‌ ವೆಚ್ಚ ಭರಿಸಿ ದೂರದ ಕೋಲ್ಕತಾದಿಂದ ಮೇಸ್ತ್ರಿಗಳನ್ನು ವಿಮಾನದಲ್ಲಿ ಕರೆತಂದಿದ್ದಾರೆ.

ಕರಾವಳಿಯಾದ್ಯಂತ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಸಿಕೊಂಡವರಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳ ಜನರೇ ಹೆಚ್ಚಿದ್ದರು. ಶ್ರಮ ಹಾಕಿ ದುಡಿಯುವ ಜಾಯಮಾನ, ಸ್ಥಳೀಯ ಕಾರ್ಮಿಕರ ಕೊರತೆ ಅವರ ಮೇಲಿನ ಅವಲಂಬನೆಯನ್ನು ಹೆಚ್ಚಿಸಿದೆ. ಮಂಗಳೂರಿನಲ್ಲೂ ಪ. ಬಂಗಾಲದ ಕಾರ್ಮಿಕರು, ಮೇಸ್ತ್ರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಲಾಕ್‌ಡೌನ್‌ ಸಂದರ್ಭ ಸರಕಾರ ಊರಿಗೆ ತೆರಳಲು ಅವಕಾಶ ನೀಡಿದಾಗ ಇವರೆಲ್ಲ ಹೋಗಿ ದ್ದರು. ಕೋವಿಡ್‌ ಕಡಿಮೆಯಾಗಿ ಸ್ವಲ್ಪ ದಿನ ಬಿಟ್ಟು ಕಾರ್ಮಿಕರು ಮತ್ತೆ ಬರಬಹುದು ಎಂಬ ನಿರೀಕ್ಷೆ ಬಿಲ್ಡರ್‌ಗಳಲ್ಲಿದ್ದರೂ ಹಾಗಾಗಿಲ್ಲ. ಅನಿವಾರ್ಯವಾಗಿ ಈಗ ಬಿಲ್ಡರ್‌ಗಳೇ ಸ್ವತಃ ಸಂಚಾರ ವ್ಯವಸ್ಥೆ ಮಾಡಿ ಕಾರ್ಮಿಕರು, ಮೇಸ್ತ್ರಿಗಳನ್ನು ಕರೆತರಲು ಮುಂದಾಗಿದ್ದಾರೆ. ಇನ್ನು ಕೆಲವು ಮಂದಿ ಬಿಲ್ಡರ್‌ಗಳು ಕಾರ್ಮಿಕರ ನಿರೀಕ್ಷೆಯಲ್ಲಿದ್ದಾರೆ.

ತಲಾ 7,500 ರೂ. ವೆಚ್ಚ
ಕೆಲವು ದಿನಗಳ ಹಿಂದೆ ಕೋಲ್ಕೊತಾ ದಿಂದ ವಿಮಾನ ಮೂಲಕ ಐವರು ಮೇಸ್ತ್ರಿಗಳನ್ನು ಕರೆತರಲಾಗಿದೆ. ಟಿಕೆಟ್‌ ವೆಚ್ಚ ತಲಾ 7,500 ರೂ.ಗಳನ್ನು ಬಿಲ್ಡರ್‌ ಭರಿಸಿದ್ದಾರೆ. ನಿಯಮದಂತೆ ಅವರಿಗೆ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದ್ದು, ಅದರ ವೆಚ್ಚವನ್ನೂ ಬಿಲ್ಡರ್‌ ನೋಡಿಕೊಳ್ಳುತ್ತಿದ್ದಾರೆ. ಹಲವು ಕಟ್ಟಡಗಳು ಮುಕ್ತಾಯ ಹಂತಕ್ಕೆ ಬಂದಿರುವುದರಿಂದ ಅವುಗಳ ಮೇಲ್ವಿಚಾರಣೆ ವಹಿಸಿದ್ದ ಮೇಸ್ತ್ರಿಗಳೇ ಪೂರ್ಣಗೊಳಿಸಲು ಅಗತ್ಯವಿದ್ದು, ಹೀಗಾಗಿ ತುರ್ತಾಗಿ ಕರೆತರಲಾಗಿದೆ ಎಂದು ಬಿಲ್ಡರ್‌ ಕಡೆಯ ಮೂಲಗಳು ತಿಳಿಸಿವೆ.

ವಾಪಸಾಗದ ಉ.ಕ. ಕಾರ್ಮಿಕರು
ಪ್ರತೀ ವರ್ಷವೂ ಮಳೆಗಾಲ ಸಂದರ್ಭ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರಲ್ಲಿ ಹೆಚ್ಚಿನವರು ತಮ್ಮೂರಿಗೆ ಕೃಷಿ ಕೆಲಸಕ್ಕಾಗಿ ವಾಪಸಾಗುತ್ತಾರೆ. ಆದರೂ ಸುಮಾರು ಶೇ.40ರಷ್ಟು ಮಂದಿ ಇಲ್ಲಿ ಉಳಿದುಕೊಳ್ಳುತ್ತಿದ್ದರು. ಆದರೆ ಈ ಬಾರಿ ಬಹುತೇಕರು ಊರಿಗೆ ತೆರಳಿದ್ದು, ಹಿಂದೆ ಬಂದಿಲ್ಲ. ಹಾಗಾಗಿ ಉತ್ತರ ಭಾರತದ ಕಾರ್ಮಿಕರನ್ನೇ ಕರೆಸಲು ಬಿಲ್ಡರ್‌ಗಳು ಮುಂದಾಗಿದ್ದಾರೆ.

ಬಂಗಾಲಕ್ಕೆ ಬಸ್‌ ವ್ಯವಸ್ಥೆ
ಪ. ಬಂಗಾಲದಿಂದ ಬಸ್‌ ಮೂಲಕ ಕಾರ್ಮಿಕರನ್ನು ಕರೆ ತರಲು ಯೋಜನೆ ಹಾಕಿಕೊಳ್ಳಲಾಗಿದ್ದು, ಜಿಲ್ಲಾಡಳಿತದ ಅನುಮತಿ ಕೇಳಲಾಗಿದೆ. ಒಂದು ಬಸ್‌ನಲ್ಲಿ 30 ಜನ ಕಾರ್ಮಿಕರಂತೆ ಸಾಧ್ಯವಾದಷ್ಟು ಮಂದಿಯನ್ನು ಕರೆತರಲು ಸಿದ್ಧತೆ ನಡೆಸಲಾಗಿದೆ. ಮಂಗಳೂರಿನಿಂದ ಪ. ಬಂಗಾಲಕ್ಕೆ ಹೋಗಿ ಬರುವುದು ಸುಮಾರು 5 ಸಾವಿರ ಕಿ.ಮೀ.ಗಳ ಪ್ರಯಾಣ. ಒಬ್ಬ ಕಾರ್ಮಿಕನ ಮೇಲೆ 5ರಿಂದ 6 ಸಾವಿರ ರೂ. ವೆಚ್ಚವಾಗಲಿದೆ. ಆದರೂ ಇದು ಅನಿವಾರ್ಯ ಎನ್ನುತ್ತಾರೆ ಬಿಲ್ಡರ್‌ಗಳು.

ಪ. ಬಂಗಾಲ ಕಾರ್ಮಿಕರಿಂದ ಕರೆ
ಪ. ಬಂಗಾಲದ ಕಾರ್ಮಿಕರು ಸ್ವತಃ ಆಸಕ್ತಿ ತೋರಿ ಕರೆ ಮಾಡುತ್ತಿದ್ದಾರೆ. ನಿರ್ಮಾಣ ಕ್ಷೇತ್ರ ಈಗಾಗಲೇ ಮರಳು ಸಮಸ್ಯೆಯಿಂದಾಗಿ ಸಂಕಷ್ಟ ದಲ್ಲಿದೆ. ಸರಕಾರವೂ ನಿರ್ಲಕ್ಷ್ಯ ವಹಿಸಿದೆ. ನಾವು ಕಾರ್ಮಿಕರನ್ನು ಒತ್ತಾಯಿಸುವುದಿಲ್ಲ. ಎಲ್ಲರ ಸುರಕ್ಷತೆಯೂ ಅಗತ್ಯ.
-ನವೀನ್‌ ಕಾಡೋìಜಾ, ಅಧ್ಯಕ್ಷರು, ಕ್ರೆಡಾೖ ಮಂಗಳೂರು

ಕ್ವಾರಂಟೈನ್‌ ಕಡ್ಡಾಯ
ಕಾರ್ಮಿಕರನ್ನು ಸರಕಾರದ ಆದೇಶದಂತೆ ಉಚಿತವಾಗಿ ಅವರ ಊರಿಗೆ ಕಳುಹಿಸಿಕೊಟ್ಟಿದ್ದೇವೆ. ಮಂಗಳೂರಿಗೆ ವಾಪಸಾಗುವ ಕಾರ್ಮಿಕರಿಗೆ ಇಲಾಖೆಯಿಂದ ನಿರ್ಬಂಧವಿಲ್ಲ. ಆದರೆ ಬೇರೆ ರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್‌ ಕಡ್ಡಾಯ.
-ನಾಗರಾಜ್‌, ಕಾರ್ಮಿಕ ಅಧಿಕಾರಿ, ದ.ಕ. ಜಿಲ್ಲೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.