ವಿಧಾನ ಕದನ-2023: ಕಾಂಗ್ರೆಸ್‌ಗೆ ಖಾದರ್‌ ಖಾಯಂ, ಬಿಜೆಪಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ !


Team Udayavani, Mar 14, 2023, 7:16 AM IST

ut khadar

ಮಂಗಳೂರು: ಕಾಂಗ್ರೆಸ್‌ಗೆ ಯಾವುದೇ ಸಮಸ್ಯೆಯಿಲ್ಲದೆ ಅಭ್ಯರ್ಥಿ ಅಖೇರುಗೊಳಿಸಬಹುದಾದ ರಾಜ್ಯದ ಕೆಲವೇ ಕ್ಷೇತ್ರಗಳಲ್ಲಿ ಒಂದು ಮಂಗಳೂರು.
ಹೌದು. ಇಲ್ಲಿ ಯು.ಟಿ. ಫರೀದ್‌ ಅವರು ಶಾಸಕರಾಗಿ ಚುನಾಯಿತರಾದ ಬಳಿಕ ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಆಯ್ಕೆ ಎನ್ನುವುದು ಕೇವಲ ಔಪಚಾರಿಕ ಪ್ರಕ್ರಿಯೆ ಮಾತ್ರ. ಫ‌ರೀದ್‌ ನಿಧನ ಹೊಂದಿದ ಬಳಿಕ ಅವರ ಪುತ್ರ ಯು.ಟಿ. ಖಾದರ್‌ ಕಾಂಗ್ರೆಸ್‌ನ ಖಾಯಂ ಅಭ್ಯರ್ಥಿ. ಅವರೂ ಸತತ ನಾಲ್ಕು ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಈ ಬಾರಿಯೂ ಅವರಿಗೆ ಬಹುತೇಕ ಟಿಕೆಟ್‌ ಸಿಕ್ಕಿ ಆಗಿದೆ.

ಅಲ್ಪಸಂಖ್ಯಾಕ ಮತದಾರರ ಸಂಖ್ಯೆ ಹೆಚ್ಚಿರುವುದು, ಬಹುತೇಕ ಯಾವುದೇ ವಿರೋಧ ಇಲ್ಲದ ವ್ಯಕ್ತಿತ್ವ, ಇತರ ಕೋಮಿನಿಂದಲೂ ಮತ ಸೆಳೆಯಬಲ್ಲ ವ್ಯಕ್ತಿತ್ವ ದಿಂದಾಗಿ ಯು.ಟಿ. ಖಾದರ್‌ ಇಲ್ಲಿ ಸೇಫ್‌. 2018ರ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಪೂರ್ಣ ನೆಲಕಚ್ಚಿದಾಗಲೂ ಇದೊಂದು ಕ್ಷೇತ್ರ ಯು.ಟಿ. ಖಾದರ್‌ ಅವರನ್ನು ಬಿಟ್ಟುಕೊಡಲಿಲ್ಲ.
ಈ ಕ್ಷೇತ್ರದಲ್ಲಿ ನಿರಂತರವಾಗಿ ಕಾಂಗ್ರೆಸ್‌ ಗೆಲ್ಲುತ್ತಾ ಬಂದಿದೆ ಹಾಗೂ ಸದ್ಯಕ್ಕೆ ಕಾಂಗ್ರೆಸ್‌ ಸೋಲುವ ಪರಿಸ್ಥಿತಿ ಬರುವುದು ತೀರಾ ಕಷ್ಟ ಎಂಬ ಸನ್ನಿವೇಶ ಇರುವ ಹೊರ ತಾಗಿಯೂ ಬಿಜೆಪಿಯಿಂದ ಅಚ್ಚರಿಯ ರೀತಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದೇ ಇದೆ. ಸೋತರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ಥಾನಮಾನ ಸಹಿತ ಪ್ರಯೋಜನಗಳನ್ನು ಗಮನದಲ್ಲಿರಿಸಿ ಅಭ್ಯರ್ಥಿಗಳಾಗ ಬಯ ಸುವವರು ಪಕ್ಷದ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.

ಕಳೆದ ಬಾರಿ ಖಾದರ್‌ ವಿರುದ್ಧ ಸ್ಪರ್ಧಿಸಿ ಸೋಲನುಭವಿ ಸಿದ್ದ ಹಾಗೂ ಆ ಬಳಿಕ ಮೈಸೂರು ಎಲೆಕ್ಟ್ರಿಕಲ್ಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂತೋಷ್‌ ರೈ ಬೊಳಿಯಾರ್‌ ಹಾಗೂ ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದ, ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ ಗುರುತಿಸಿಕೊಂಡ ಸತೀಶ್‌ ಕುಂಪಲ ಇವರಿಬ್ಬರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಬೊಳಿಯಾರ್‌ ಸದಾ ಕ್ರಿಯಾಶೀಲವಾಗಿ ಓಡಾಡಿಕೊಂಡಿದ್ದರೆ, ಕುಂಪಲ ಕೂಡ ಕಡಿಮೆಯಿಲ್ಲ ಎಂಬಂತೆ ಕಳೆದ ಆರೇಳು ತಿಂಗಳುಗಳಿಂದ ಚಲನಶೀಲರಾಗಿದ್ದಾರೆ. ಇದರಲ್ಲಿ ಸಂತೋಷ್‌ ಬಂಟ ಸಮುದಾಯದವರಾದರೆ ಸತೀಶ್‌ ಬಿಲ್ಲವರು.

ಇಬ್ಬರೂ ಟಿಕೆಟ್‌ಗಾಗಿ ಸಣ್ಣ ರೀತಿಯಲ್ಲಿ ಮೇಲಾಟ ಶುರುಮಾಡಿದ್ದಾರೆ. ಇದು ಮೇರೆ ಮೀರಿದರೆ ಪರಿಹಾರವೇನು ಎಂಬ ಬಗ್ಗೆ ಬಿಜೆಪಿ ಉನ್ನತ ನಾಯಕರು ತಲೆಕೆಡಿಸಿಕೊಂಡಿದ್ದಾರೆ. ಇಬ್ಬರನ್ನೂ ಬಿಟ್ಟು ಮೂರನೇ ವ್ಯಕ್ತಿಯನ್ನು ಆರಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಇವರನ್ನು ಹೊರತುಪಡಿಸಿದರೆ ಪಕ್ಷದಲ್ಲಿ ಕೇಳಿಬರುತ್ತಿರುವ ಹೆಸರುಗಳು ಚಂದ್ರಹಾಸ ಪಂಡಿತ್‌ಹೌಸ್‌, ಚಂದ್ರಶೇಖರ ಉಚ್ಚಿಲ ಹಾಗೂ ರವೀಂದ್ರ ಶೆಟ್ಟಿ ಉಳಿದೊಟ್ಟು.

ಇವರಲ್ಲಿ ಚಂದ್ರಹಾಸ್‌ ಪ್ರಸ್ತುತ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷರು ಹಾಗೂ ವೈಯಕ್ತಿಕವಾಗಿ ಸಂತೋಷ್‌ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುವವರು. ಇನ್ನು ಚಂದ್ರಶೇಖರ ಉಚ್ಚಿಲ ಅವರು ಹಿಂದೆ 2004 ಹಾಗೂ 2007ರಲ್ಲಿ ಸ್ಪರ್ಧಿಸಿ ಸೋತಿದ್ದರಾದರೂ ಈಗಲೂ ಸ್ಪರ್ಧಿಸುವ ಉತ್ಸಾಹ ದಲ್ಲಿದ್ದಾರೆ. ಆದರೆ ಅವರು ಸದ್ಯ ಕಾರ್ಯಕರ್ತರ ಮಧ್ಯೆ ಕ್ರಿಯಾಶೀಲರಾಗಿಲ್ಲ ಎನ್ನುವುದು ಅವರಿಗಿರುವ ಅಡ್ಡಿ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ನಾನು ಆಕಾಂಕ್ಷಿ ಅಲ್ಲ, ಆದರೆ ಪಕ್ಷ ನಾಯಕತ್ವ ನನಗೆ ಸ್ಪರ್ಧಿಸಲು ಹೇಳಿದರೆ ಸಿದ್ಧ ಎನ್ನುತ್ತಿದ್ದಾರೆ.

ಇತರ ಕ್ಷೇತ್ರಗಳ ಮೇಲೆ ಅವಲಂಬಿತ
ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಅಭ್ಯರ್ಥಿ ಘೋಷಣೆ ಮಾಡಬೇಕಾದರೆ ಇತರ ಕ್ಷೇತ್ರಗಳಲ್ಲಿ ನಿಲ್ಲುವ ಅಭ್ಯರ್ಥಿಗಳು, ಜಾತಿ ಲೆಕ್ಕಾಚಾರ ಇತ್ಯಾದಿ ಅಂಶಗಳನ್ನು ಪರಿಗಣಿಸುವ ಸಾಧ್ಯತೆ ಇದೆ. ಜಾತಿ ವಿಚಾರದಲ್ಲಿ ನೋಡಿದರೆ ಸಂತೋಷ್‌ ಹಾಗೂ ಸತೀಶ್‌ ಇವರಿಬ್ಬರೇ ಸದ್ಯಕ್ಕೆ ಪಟ್ಟಿಯಲ್ಲಿ ಮೇಲಿರುವವರು.
ಎಸ್‌ಡಿಪಿಐಯ ರಿಯಾಜ್‌ ಫ‌ರಂಗಿಪೇಟೆ ಉಳ್ಳಾಲದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

~ ವೇಣುವಿನೋದ್‌ ಕೆ.ಎಸ್‌

ಟಾಪ್ ನ್ಯೂಸ್

1-cssadsa

Karwar; ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಿದ್ಧತೆಗಳು ಪೂರ್ಣ

kejriwal-2

Kejriwal ಬಂಗಲೆ ವಿವಾದ : ಸಿಬಿಐ ತನಿಖೆಗೆ ಗೃಹ ಸಚಿವಾಲಯ ಆದೇಶ

Cauvery issue ರಾಜಕಾರಣ ಬೇಡ: ಸಚಿವ ಮಧು ಬಂಗಾರಪ್ಪ

Cauvery issue ರಾಜಕಾರಣ ಬೇಡ: ಸಚಿವ ಮಧು ಬಂಗಾರಪ್ಪ

Jaishankar

India ಸ್ವಾವಲಂಬನೆಯನ್ನು “ಆರ್ಥಿಕ ರಕ್ಷಣಾ ನೀತಿ” ಎಂದು ತಪ್ಪಾಗಿ ಭಾವಿಸಬಾರದು: ಜೈಶಂಕರ್

CM ಸಿದ್ದರಾಮಯ್ಯ ಅರಸು ಆಗಲು ಸಾಧ್ಯವಿಲ್ಲ: ಜಿಟಿ.ದೇವೇಗೌಡ

CM ಸಿದ್ದರಾಮಯ್ಯ ಅರಸು ಆಗಲು ಸಾಧ್ಯವಿಲ್ಲ: ಜಿಟಿ.ದೇವೇಗೌಡ

Davanagere ನಾನು ಬಿಜೆಪಿ ಕಟ್ಟಾಳು, ಕಾಂಗ್ರೆಸ್‌ ಸೇರಲ್ಲ: ರೇಣುಕಾಚಾರ್ಯ

Davanagere ನಾನು ಬಿಜೆಪಿ ಕಟ್ಟಾಳು, ಕಾಂಗ್ರೆಸ್‌ ಸೇರಲ್ಲ: ರೇಣುಕಾಚಾರ್ಯ

14-fsad-sad

3000 cusec ನೀರು ಹರಿಸಲು ಆದೇಶ; ಆಕ್ಷೇಪಣೆ ಸಲ್ಲಿಸಲು ತೀರ್ಮಾನ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯ ರಕ್ಷಣೆ

Mangaluru ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯ ರಕ್ಷಣೆ

Mangaluru ಪೊಲೀಸರ ಎದುರೇ ಮಗುವನ್ನು ಕೊಲ್ಲಲು ತಂದೆಯಿಂದ ಯತ್ನ

Mangaluru ಪೊಲೀಸರ ಎದುರೇ ಮಗುವನ್ನು ಕೊಲ್ಲಲು ತಂದೆಯಿಂದ ಯತ್ನ

Mangaluru ಆಸ್ಪತ್ರೆಯಲ್ಲಿ ಹಲ್ಲೆ: ಆರೋಪಿಯ ಬಂಧನ

Mangaluru ಆಸ್ಪತ್ರೆಯಲ್ಲಿ ಹಲ್ಲೆ: ಆರೋಪಿಯ ಬಂಧನ

Mangaluru ಕರಾವಳಿಯ ವಿಭಿನ್ನ ಸಂಸ್ಕೃತಿ ಮಾದರಿ: ಚಿತ್ರನಟ ಅಭಿಷೇಕ್‌ ಅಂಬರೀಷ್‌

Mangaluru ಕರಾವಳಿಯ ವಿಭಿನ್ನ ಸಂಸ್ಕೃತಿ ಮಾದರಿ: ಚಿತ್ರನಟ ಅಭಿಷೇಕ್‌ ಅಂಬರೀಷ್‌

Ullal ಕಾಲೇಜು ಬಳಿ ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿಯ ಬಂಧನ

Ullal ಕಾಲೇಜು ಬಳಿ ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿಯ ಬಂಧನ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

dr MC SUDHAKAR

Karnataka: ಮುಂದಿನ ವರ್ಷ SEP ಜಾರಿ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌

MATHUURA TRAIN

Mathura: ಪ್ಲಾಟ್‌ಫಾರಂಗೆ ರೈಲು ಡಿಕ್ಕಿ

LAND AI

AI News: ಒತ್ತುವರಿ ಪತ್ತೆಗೆ ಎಐ ಸಾಥ್‌

NRIPENDRA MISHRA

Ayodhya: ರಾಮ ಮಂದಿರದಿಂದ ಅಯೋಧ್ಯೆ ಆರ್ಥಿಕಾಭಿವೃದ್ಧಿ : ನೃಪೇಂದ್ರ ಮಿಶ್ರಾ

chandra babu naidu

Skill Development Board scam: ನಾಯ್ಡು ಕೇಸು ವಿಚಾರಣೆಗೆ ಹೊಸ ಪೀಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.