ಎಲಾನ್ ಮಸ್ಕ್‌ ಮತ್ತೆ ವಿಶ್ವದ ನಂ.1 ಕುಬೇರ


Team Udayavani, Feb 28, 2023, 1:45 PM IST

thumb-1

ನವದೆಹಲಿ: ವಿಶ್ವದ ಶ್ರೀಮಂತ ಉದ್ಯಮಿ, ಟೆಸ್ಲಾ ಮತ್ತು ಟ್ವಿಟರ್‌ ಸಿಇಒ ಎಲಾನ್‌  ಮಸ್ಕ್‌ ವಿಶ್ವ ಕುಬೇರರ ಪಟ್ಟಿಯಲ್ಲಿ ಮತ್ತೊಮ್ಮೆ ನಂ.1 ಪಟ್ಟಕ್ಕೇರಿದ್ದಾರೆ ಎಂದು ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ವರದಿ ಮಾಡಿದೆ.

ಕಳೆದ ಡಿಸೆಂಬರ್‌ನಲ್ಲಿ ಫ್ರೆಂಚ್‌ ಮೂಲದ ಫ್ಯಾಷನ್‌ ಬ್ರಾಂಡ್‌ ʻಲೂಯಿ ವಿಟಾನ್‌ʼನ ಸಿಇಒ ಬರ್ನಾರ್ಡ್‌ ಅರ್ನಾಲ್ಟ್‌ ಅವರು ಮಸ್ಕ್‌ನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದರು.

ಎರಡು ತಿಂಗಳ ಕಾಲ ಎರಡನೇ ಸ್ಥಾನದಲ್ಲಿದ್ದ ಮಸ್ಕ್‌ ಇದೀಗ ತಮ್ಮ ಟೆಸ್ಲಾದ ಷೇರುಗಳ ಹೆಚ್ಚಳದಿಂದಾಗಿ ಮೊದಲ ಸ್ಥಾನಕ್ಕೆ ಏರಿದ್ದಾರೆ.

ಸೋಮವಾರ ಷೇರು ಪೇಟೆ ಮುಕ್ತಾಯವಾದ ಬಳಿಕ ಮಸ್ಕ್‌ ಸಂಪತ್ತು 187.1 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದ್ದು, ಆ ಮೂಲಕ 185.3 ಬಿಲಿಯನ್‌ ಡಾಲರ್‌ ಸಂಪತ್ತು ಹೊಂದಿರುವ ಅರ್ನಾಲ್ಟ್‌ ಅವರನ್ನು ಹಿಂದಿಕ್ಕಿದ್ದಾರೆ.

ಈ ವರ್ಷ ಟೆಸ್ಲಾ ಷೇರು ಮೌಲ್ಯ ಶೇ.70 ಹೆಚ್ಚಾಗಿದ್ದು, ಇದರಿಂದಲೇ ಮಸ್ಕ್‌ ಕುಬೇರರ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ತಲುಪಿದ್ದಾರೆ ಎಂದು ಹೇಳಲಾಗಿದೆ.

ಟ್ವಿಟರ್‌ ಅನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಬಳಿಕ ಮಸ್ಕ್‌ ಅವರು ಭಾರೀ ಕುಸಿತ ಕಂಡಿದ್ದರು. ನವೆಂಬರ್‌, ಡಿಸೆಂಬರ್‌ ನಡುವಿನಲ್ಲಿ ಅವರ ಸಂಪತ್ತಿನ ಮೌಲ್ಯವು 200 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿತ್ತು.ಇದು ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ಕುಸಿತ ಎಂದು ವರದಿಗಳು ತಿಳಿಸಿವೆ.

2022 ಎಲಾನ್‌ ಮಸ್ಕ್‌ಗೆ ಅತ್ಯಂತ ಕೆಟ್ಟ ವರ್ಷವಾಗಿತ್ತು. ಕೋವಿಡ್‌-19 ಹಿನ್ನಲೆ, ಟ್ವಿಟರ್‌ ಖರೀದಿ , ವಿವಾದಗಳು, ದುಬಾರಿ ಯೋಜನೆಗಳು ಇತ್ಯಾದಿಗಳಿಂದಾಗಿ ಮಸ್ಕ್‌ಗೆ ವಾಲ್‌ಸ್ಟ್ರೀಟ್‌ ಶಾಕ್‌ ನೀಡಿತ್ತು. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಮಸ್ಕ್‌ ಮತ್ತೊಮ್ಮೆ ವಿಶ್ವದ ನಂ.1 ಕುಬೇರರಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಪ್ರಮುಖ ಇಸ್ಲಾಮಿಕ್ ಕಮಾಂಡರ್‌ ಗಳನ್ನು ಹತ್ಯೆ ಮಾಡಿದ ತಾಲಿಬಾನ್

ಟಾಪ್ ನ್ಯೂಸ್

Mysuru ದಲಿತರ ಕೇರಿಗಳಲ್ಲಿ ಪೇಜಾವರ ಶ್ರೀಗಳ ಮಿಂಚಿನ‌ ಸಂಚಾರ

Mysuru ದಲಿತರ ಕೇರಿಗಳಲ್ಲಿ ಪೇಜಾವರ ಶ್ರೀಗಳ ಮಿಂಚಿನ‌ ಸಂಚಾರ

UGNEET/PGET 2023: ಮೂಲ ದಾಖಲೆ ಸಲ್ಲಿಸಲು ಸೆ.27ರವರೆಗೆ ಅವಕಾಶ

UGNEET/PGET 2023: ಮೂಲ ದಾಖಲೆ ಸಲ್ಲಿಸಲು ಸೆ.27ರವರೆಗೆ ಅವಕಾಶ

Cauvery issue: ರಾಜ್ಯದ ಜನರಿಗೆ ನಾಮ ಹಾಕಿದ್ದೇ ಕಾಂಗ್ರೆಸ್ ಸಾಧನೆ: ಸಂಸದ ಪ್ರತಾಪ್‌ ಸಿಂಹ

Cauvery issue: ರಾಜ್ಯದ ಜನರಿಗೆ ನಾಮ ಹಾಕಿದ್ದೇ ಕಾಂಗ್ರೆಸ್ ಸಾಧನೆ: ಸಂಸದ ಪ್ರತಾಪ್‌ ಸಿಂಹ

mogral

Road Mishap: ಬದಿಯಡ್ಕ- ಪಳ್ಳತ್ತಡ್ಕ: ಖಾಸಗಿ ಶಾಲಾ ಬಸ್- ರಿಕ್ಷಾ ಡಿಕ್ಕಿ: 5 ಮಂದಿ ಮೃತ್ಯು

Hunsur ಕಟ್ಟೆಮಳಲವಾಡಿಯಲ್ಲಿ ತಂಬಾಕು ಹರಾಜಿಗೆ ಸಂಸದ ಪ್ರತಾಪ್ ಸಿಂಹ ಚಾಲನೆ

Hunsur ಕಟ್ಟೆಮಳಲವಾಡಿಯಲ್ಲಿ ತಂಬಾಕು ಹರಾಜಿಗೆ ಸಂಸದ ಪ್ರತಾಪ್ ಸಿಂಹ ಚಾಲನೆ

Sept.26 Bengaluru Bandh: ಏನೇನಿದೆ? ಏನು ಇರುವುದಿಲ್ಲ?

Sept.26 Bengaluru Bandh: ಏನೇನಿದೆ? ಏನು ಇರುವುದಿಲ್ಲ?

Bengaluru bandh; Curfew till tuesday midnight say City Police Commissioner B Dayananda

Bengaluru bandh; ಬಲವಂತದ ಬಂದ್, ರ‍್ಯಾಲಿ ಮಾಡುವಂತಿಲ್ಲ ಎಂದ ಆಯುಕ್ತರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DESERTS

Sahara: 8 ಲಕ್ಷ ವರ್ಷಗಳ ಹಿಂದೆ ಹಚ್ಚ ಹಸಿರಿನಿಂದ ಕೂಡಿದ್ದ ಸಹಾರಾ ಮರುಭೂಮಿ!

ISREALLL

Israel: ಇಸ್ರೇಲ್‌ಗೆ ಶೀಘ್ರವೇ 7 ಮುಸ್ಲಿಂ ರಾಷ್ಟ್ರಗಳ ಅಂಗೀಕಾರ

ASTEROID

Asteroid: ಭೂಮಿಗೆ ಬಂತು ಕ್ಷುದ್ರಗ್ರಹ ಸ್ಯಾಂಪಲ್‌

vivek ramaswamy

USA: ವಿವೇಕ್‌ ಜತೆ ಊಟಕ್ಕೆ 41 ಲಕ್ಷ ರೂ !

CIGERETTE

Britain: ಸಿಗರೇಟ್‌ ನಿಷೇಧಕ್ಕೆ ಬ್ರಿಟನ್‌ ಚಿಂತನೆ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

alchohol

Karnataka: ಮದ್ಯ ದುಬಾರಿ- ಗೋವಾಗೆ ಹೋಲಿಸಿದರೆ ರಾಜ್ಯದಲ್ಲಿ ಮದ್ಯದ ದರ ಶೇ.413ರಷ್ಟು ಹೆಚ್ಚು

DESERTS

Sahara: 8 ಲಕ್ಷ ವರ್ಷಗಳ ಹಿಂದೆ ಹಚ್ಚ ಹಸಿರಿನಿಂದ ಕೂಡಿದ್ದ ಸಹಾರಾ ಮರುಭೂಮಿ!

AMRUTH PAUL

IPS ಅಧಿಕಾರಿ ಅಮೃತ್‌ ಪೌಲ್‌ಗೆ ಜಾಮೀನು

modi whatsapp

Whatsapp: ಮೋದಿ ಚಾನೆಲ್‌ಗೆ ವಾರದಲ್ಲೇ 54 ಲಕ್ಷ ಫಾಲೋವರ್ಸ್‌!

Mysuru ದಲಿತರ ಕೇರಿಗಳಲ್ಲಿ ಪೇಜಾವರ ಶ್ರೀಗಳ ಮಿಂಚಿನ‌ ಸಂಚಾರ

Mysuru ದಲಿತರ ಕೇರಿಗಳಲ್ಲಿ ಪೇಜಾವರ ಶ್ರೀಗಳ ಮಿಂಚಿನ‌ ಸಂಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.