
ಗತವೈಭವದತ್ತ ಮೊದಲ ಹೆಜ್ಜೆ… 2018ರ ಬಳಿಕ ಓಪನಿಂಗ್ ಸಡಗರ
Team Udayavani, Mar 30, 2023, 7:23 AM IST

ಅಹ್ಮದಾಬಾದ್: ಈ ಬಾರಿಯ ಐಪಿಎಲ್ ಪಂದ್ಯಾವಳಿ “ಗತವೈಭವದತ್ತ ಮೊದಲ ಹೆಜ್ಜೆ” ಎಂಬುದಾಗಿ ಬಣ್ಣಿಸಲ್ಪಟ್ಟಿದೆ. ಕಳೆದ 4 ವರ್ಷಗಳ ಕಾಲ ಪುಲ್ವಾಮಾ ದಾಳಿ ಹಾಗೂ ಕೊರೊನಾ ಉಪಟಳದಿಂದ ಐಪಿಎಲ್ನ ಜೋಶ್ ದೊಡ್ಡ ಮಟ್ಟದಲ್ಲಿ ಕಂಡುಬಂದಿರಲಿಲ್ಲ. ಈ ಬಾರಿ ಮತ್ತೆ ಹಿಂದಿನ ವೈಭವದ ಸ್ಪಷ್ಟ ಸೂಚನೆ ಲಭಿಸಿದೆ. ಇದಕ್ಕೆ ಕಾರಣ, ಉದ್ಘಾಟನ ಸಮಾರಂಭ. 2018ರ ಬಳಿಕ ಐಪಿಎಲ್ ಮೊದಲ ಬಾರಿಗೆ “ಐಪಿಎಲ್ ಓಪನಿಂಗ್ ಸೆರಮನಿ’ ನಡೆಯುತ್ತಿರುವುದು ವಿಶೇಷ.
2008ರ ಚೊಚ್ಚಲ ಕೂಟದಿಂದಲೂ ಐಪಿಎಲ್ ಭರ್ಜರಿ ಉದ್ಘಾಟನ ಸಮಾರಂಭಕ್ಕೆ ಸಾಕ್ಷಿಯಾಗುತ್ತ ಬಂದಿತ್ತು. ಸಲ್ಮಾನ್ ಖಾನ್, ಪಿಟ್ಬುಲ್, ಶಾರೂಖ್ ಖಾನ್, ಶ್ರೀಯಾ ಶರಣ್, ಕತ್ರಿನಾ ಕೈಫ್ ಮೊದಲಾದ ಸೆಲಿಬ್ರಿಟಿಗಳಿಂದ ರಂಗೇರಿಸಿಕೊಂಡಿತ್ತು. ಆದರೆ 2019ರಿಂದ 2022ರ ತನಕ ಐಪಿಎಲ್ ಉದ್ಘಾಟನ ಸಮಾರಂಭವನ್ನು ಕೈಬಿಡಲಾಯಿತು.
2019ರಂದು ಉದ್ಘಾಟನೆಯನ್ನು ಕೈಬಿಡಲು ಮುಖ್ಯ ಕಾರಣ ಪುಲ್ವಾಮ ದಾಳಿ. ಅಂದಿನ ಉದ್ಘಾಟನ ಸಮಾರಂಭದ ದೊಡ್ಡ ಮೊತ್ತವನ್ನು ಮೃತಪಟ್ಟ ಸಿಆರ್ಪಿಎಫ್ ಯೋಧರ ಕುಟುಂಬದವರಿಗೆ ನೀಡಲಾಯಿತು. ಬಳಿಕ ಕೊರೊನಾ ದಾಳಿ ನಡೆಸಿತು. ಐಪಿಎಲ್ ವೇಳಾಪಟ್ಟಿ, ಸ್ಥಳ, ಮಾದರಿ… ಎಲ್ಲವೂ ಅಸ್ತವ್ಯಸ್ತಗೊಂಡಿತು.
ಒಂದು ಗಂಟೆ ಶೋ
ಇದೀಗ 4 ವರ್ಷಗಳ ಬಳಿಕ ಐಪಿಎಲ್ ಅದ್ಧೂರಿಯ ಹಾಗೂ ರಂಗುರಂಗಿನ ಉದ್ಘಾಟನ ಸಮಾರಂಭವನ್ನು ಕಾಣಲಿದೆ. ಶುಕ್ರವಾರದ ಆರಂಭಿಕ ಪಂದ್ಯಕ್ಕೂ ಒಂದು ಗಂಟೆ ಮೊದಲು ಅಹ್ಮದಾಬಾದ್ನಲ್ಲಿ ಈ ಸಮಾರಂಭ ಕಳೆಗಟ್ಟಲಿದೆ. ಐಪಿಎಲ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದಂತೆ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಮುಖ್ಯ ಆಕರ್ಷಣೆ ಆಗಲಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಹೆಸರು ಕೂಡ ಕೇಳಿಬರುತ್ತಿದೆ. ಆದರೆ ಬಿಸಿಸಿಐ ಮಾತ್ರ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.
ಎಲ್ಲ ನಾಯಕರಿಲ್ಲ
ಕೂಟದಲ್ಲಿ 10 ತಂಡಗಳು ಭಾಗವಹಿಸುತ್ತಿವೆಯಾದರೂ ಉದ್ಘಾಟನ ಸಮಾ ರಂಭದಲ್ಲಿ ಕೆಲವು ನಾಯಕರಿಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.
ಈಗಿನ ಸ್ಥಿತಿಯಂತೆ ಪಂಜಾಬ್ ಕಿಂಗ್ಸ್, ಕೆಕೆಆರ್, ಲಕ್ನೋ ಮತ್ತು ಡೆಲ್ಲಿ ತಂಡಗಳ ನಾಯಕರು ಭಾಗವಹಿಸುವುದು ಅನುಮಾನ. ಇವರೆಲ್ಲ ಮರುದಿನ ಮೊಹಾಲಿ ಮತ್ತು ಲಕ್ನೋದಲ್ಲಿ ನಡೆಯುವ ಪಂದ್ಯದಲ್ಲಿ ಪಾಲ್ಗೊಳ್ಳಬೇಕಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

French Open 2023: ಜೆಬ್ಯುರ್-ಹದಾದ್ ಮಯಾ ಮುಖಾಮುಖಿ

WTC Final;ಹೇಗಿದ್ದೀತು ಓವಲ್ ಟ್ರ್ಯಾಕ್? ಟೆಸ್ಟ್ ಫೈನಲ್ ಗೂ ಮುನ್ನ ಒಂದು ಕುತೂಹಲ

Singapore Open Super 750; ಸಿಂಗಾಪುರದಲ್ಲಿ ಮಿಂಚಬೇಕಿದೆ ಸಿಂಧು

Bangladesh ಟೆಸ್ಟ್ ತಂಡದ ನೂತನ ನಾಯಕರಾಗಿ ಲಿಟನ್ ದಾಸ್ ನೇಮಕ
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

Guarantee Scheme ಬಗ್ಗೆ ಪ್ರತಿಭಟನೆ ಮಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ; ಸಿದ್ದರಾಮಯ್ಯ

Dandeli : ದ್ವಿ ಚಕ್ರ ವಾಹನ ಸ್ಕಿಡ್ ಆಗಿ ಓರ್ವ ಗಂಭೀರ

Adipurush: ʼಆದಿಪುರುಷ್ʼ ಸಿನಿಮಾದ ಪ್ರತಿ ಶೋನ ಒಂದು ಸೀಟು ಹನುಮಾನ್ ದೇವರಿಗೆ ಮೀಸಲು

Gruha Jyoti ಬಾಡಿಗೆದಾರರಿಗೂ ಸಿಗಲಿದೆ ಉಚಿತ ವಿದ್ಯುತ್ ಭಾಗ್ಯ: ಮಾಡಬೇಕಾದ ವಿಧಾನ ಇಲ್ಲಿದೆ

Balasore Train Tragedy ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ಹತ್ತು ಅಂಶಗಳ ನೆರವು