ಬೋಟ್ನಿಂದ ಬಿದ್ದು ಮೀನುಗಾರ ಸಾವು
Team Udayavani, May 7, 2023, 5:37 AM IST
ಕಾಪು: ಮೀನುಗಾರಿಕಾ ಬೋಟ್ನ ಹಿಂಬದಿಯಲ್ಲಿ ನಿಂತು ಮೂತ್ರ ಮಾಡುತ್ತಿದ್ದ ವ್ಯಕ್ತಿ ಆಯ ತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಮೇ 1ರಂದು ನಡೆದಿದೆ.
ತಮಿಳುನಾಡು ರಾಮೇಶ್ವರ ರಾಮನಗರ ಮಹಾಪುರಂ ನಿವಾಸಿ ತುತ್ರಿಯನ್ ಎಂಬವರ ಮೀನುಗಾರಿಕಾ ಬೋಟ್ನಲ್ಲಿ ಕೆಲಸ ಮಾಡುತ್ತಿದ್ದ ರಾಜನ್ (32) ಮೃತ ಮೀನುಗಾರ.
ಮೃತ ರಾಜನ್ ಅವರು ತುತ್ರಿಯನ್ ಅವರ ಮೀನುಗಾರಿಕಾ ಬೋಟ್ನಲ್ಲಿ ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದರು. ಮೇ 1ರಂದು ರಾತ್ರಿ ಬೋಟ್ನಲ್ಲಿ ಮಲ್ಪೆಯಿಂದ ಕೆಲಸಗಾರರೊಂದಿಗೆ ಹೊರಟು ಕಟಪಾಡಿಯ ಹತ್ತಿರ ತಲಪಿದಾಗ ಬೋಟ್ನಲ್ಲಿದ್ದ ಅವರು ಹಿಂಬದಿಯ ತುದಿಯಲ್ಲಿ ನಿಂತುಕೊಂಡು ಮೂತ್ರ ಮಾಡುತ್ತಿದ್ದ ವೇಳೆ ಆಯತಪ್ಪಿ ಬೋಟಿನಿಂದ ಸಮುದ್ರದ ನೀರಿಗೆ ಬಿದ್ದಿದ್ದರು.
ತೀವ್ರ ಹುಡುಕಾಟದ ಬಳಿಕ ಮೇ 5ರಂದು ರಾಜನ್ ಅವರ ಮೃತದೇಹವು ಕಾಪು ಬೀಚ್ನಲ್ಲಿ ದೊರಕಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.