ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್

1978 ರಲ್ಲಿ ಮೊದಲ ಸಲ ಶಾಸಕನಾದೆ.... ತಾಯಿ ಎದೆ ಹಾಲು ವಿಷವಾಗಿದೆ...

Team Udayavani, Mar 31, 2023, 10:36 PM IST

1-qweqwwqe

ಹಾವೇರಿ:ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.ಹಾನಗಲ್ ಪಟ್ಟಣದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ 76 ರ ಹರೆಯದ ಹಿರಿಯ ನಾಯಕ ಮನೋಹರ ತಹಶೀಲ್ದಾರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಏಪ್ರಿಲ್ 7 ರಂದು ಹಾನಗಲ್ ಪಟ್ಟಣಕ್ಕೆ ಪಂಚರತ್ನ ಯಾತ್ರೆ ಆಗಮಿಸಲಿದ್ದು ಈ ವೇಳೆ ಪಕ್ಷ ಸೇರ್ಪಡೆಯಾಗಲಿದ್ದಾರೆ.

ಇವತ್ತು ನನ್ನ ರಾಜಕೀಯ ತೀರ್ಮಾನದ ಎರಡನೇ ಘಟ್ಟ.1969ರಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ ಸ್ನೇಹಿತರು ಸೇರಿ ಅಂದು ಕಾಂಗ್ರೆಸ್ ಉಳಿವಿಗೆ ನಿರ್ಧಾರ ಮಾಡಿದ್ದೆ. ಎನ್ ಎಸ್ ಯುಐ ಮೂಲಕ ಕಾಂಗ್ರೆಸ್ ಗೆ ಬಂದೆ. ಯುವ ಕಾಂಗ್ರೆಸ್ ಅಧ್ಯಕ್ಷನಾಗಿ, ಅಖಂಡ ಧಾರವಾಡ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷನಾಗಿ 11 ವರ್ಷ ಸೇವೆ ಮಾಡಿದ್ದೇನೆ. 1978 ರಲ್ಲಿ ಮೊದಲ ಸಲ ಶಾಸಕನಾದೆ. 1989 ರಲ್ಲಿ ಎರಡನೇ ಸಲ 1999ರಲ್ಲಿ ಮೂರನೇ ಸಲ,
2013 ರಲ್ಕಿ ನಾಲ್ಕನೇ ಸಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ಉಪ ಸಭಾಪತಿಯಾಗಿ, ಸಚಿವನಾಗಿ ಕೆಲಸ ಮಾಡಿದ್ದೆ, ಕಾಂಗ್ರೆಸ್ ನನ್ನ ತಾಯಿ ಇದ್ದಂಗೆ ತಾಯಿಗೆ ಎಂದು ದ್ರೋಹ ಮಾಡಬಾರದು ಎಂದುಕೊಂಡಿದ್ದೆ. ತಾಯಿ ಎದೆ ಹಾಲು ವಿಷ ಆದಾಗ ಮಗು ಬದುಕಲು ಸಾಧ್ಯವಿಲ್ಲ.ನಾನು ಶಾಸಕನಿದ್ದಾಗಲೇ, ದೂರದ ಹುಬ್ಬಳ್ಳಿಯಿಂದ ಬಂದವರಿಗೆ ಮಣೆ ಹಾಕಿದರು. ಹುಟ್ಟಿದ್ದು ಕಾಂಗ್ರೆಸ್ ನಲ್ಲಿ ಸಾಯೋದು ಕಾಂಗ್ರೆಸ್ ನಲ್ಲಿ ಅಂದುಕೊಂಡಿದ್ದೆ. ನನಗೆ ನೋವು ಕೊಟ್ಟರೂ ಪಕ್ಷಕ್ಕಾಗಿ ಕೆಲಸ ಮಾಡಿದೆ. ಉಪಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಹೊರಗಿನವರು, ಒಳಗಿನವರು ಯಾರು ಇರಲಿಲ್ಲ.ಎಂಎಲ್ ಸಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು.ಸೂಟ್ ಕೇಸ್ ತಗೊಂಡು ಹಿಂದೆ ಸರದಿದ್ದಾರೆ ಎಂದು ಅಪಪ್ರಚಾರ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ನನ್ನನ್ನ ಕೊಂಡುಕೊಳ್ಳುವ ಗಂಡಸು ಭೂಮಿಯ ಮೇಲೆ ಹುಟ್ಟಿಲ್ಲ.ಅವರಿಗೆ ತಾಕತ್ ಇದ್ದರೆ ನನ್ನನ್ನ ಸ್ಪರ್ಧೆ ಯಿಂದ ಹಿಂದೆ ಸರಿಸಲಿ.ನನಗಾದ ಅನ್ಯಾಯಕ್ಕೆ ಅಲ್ಲಿಂದ ಸಿಡಿದು ಹೊರ ಬಂದಿದ್ದೇನೆ. ಕೈ ಮುಗಿದು ಕಾಲಿಗೆ ಬಿದ್ದು ಟಿಕೆಟ್ ಕೇಳಿದೆ. ಅವರಿಗೆ ಕರುಣೆ ಇಲ್ಲ, ಹೃದಯ ಇಲ್ಲ, ಅವರ ಮನಸ್ಸು ಮರಗಲೆ ಇಲ್ಲ. ಇದು ನನ್ನ ಕೊನೆ ಚುನಾವಣೆ ಒಂದು ಅವಕಾಶ ಕೊಡಿ ಎಂದು ಕೇಳಿದೆ. ಗಲ್ಲಿಗೆ ಹಾಕುವವನಿಗೆ ಕೊನೆ ಆಸೆ ಏನು ಅಂತಾ ಕೇಳುತ್ತಾರೆ.ಆದರೆ ನನಗೆ ಹಾಗೂ ಕೇಳಲಿಲ್ಲ, ಸೌಜನ್ಯಕ್ಕೂ ಕೇಳಲಿಲ್ಲ. ಚೆಂಡಿಗೆ ಕೈ ಹಾಕಿ ಹೊರ ಹಾಕಿದರು. ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತೀದ್ದೇನೆ.

ನನ್ನ ಮುಂದೆ ಬಹಳಷ್ಟು ಪಕ್ಷಗಳಿದ್ದವು. ನೀವೆ ನನಗೆ ಸುಪ್ರೀಂ, ನೀವು ನನಗೆ ಬಿ ಫಾಮ್೯ ಕೊಡೊರು.ಪಕ್ಷೇತರ ಯಾಕಾಗಬಾರದು ಎನ್ನುವ ಚಿಂತನೆ ಬಂತು. ಆಗ ನಾನು ಒಂಟಿ ಸಿಪಾಯಿ ಆಗುತ್ತೇನೆ. ಪಕ್ಷೇತರ ಬೇಡ, ಪಕ್ಷದಿಂದ ನಿಲ್ಲುವ ತೀರ್ಮಾನ ಮಾಡಿದೆವು. ಜೆಡಿಎಸ್ ಆಯ್ಕೆ ಮಾಡಿದ್ರೆ ಒಳ್ಳೆಯದು ಅಂತ ಹೇಳಿದರು. ಏಪ್ರಿಲ್ 7 ರಂದು ಪಂಚರತ್ನ ಯಾತ್ರೆ ಹಾನಗಲ್ ಗೆ ಬರುತ್ತದೆ.ನೀವು ಒಪ್ಪಿಗೆ ಕೊಟ್ಟರೆ, ನಾವು ನೀವು ಸೇರಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರೋಣ. ಏಪ್ರಿಲ್ 7 ಕ್ಕೆ ಪಂಚರತ್ನ ಯಾತ್ರೆ ಸ್ವಾಗತಿಸೋಣ. ಅಂದು ಎಲ್ಲರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರೋಣ. ಮತ್ತೆ ಶಾಸಕನಾಗುವ ಹುಚ್ಚು ನನ್ನಲ್ಲಿ ಇರಲಿಲ್ಲ. ಸ್ವಾಭಿಮಾನಕ್ಕಾಗಿ ನಿಂತಿದ್ದೇನೆ, ತಾಲೂಕಿನವರೇ ಮುಂದಿನ‌ ಶಾಸಕರಾಗಬೇಕು ಎಂದು ಹೇಳಿದರು.

ಟಾಪ್ ನ್ಯೂಸ್

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ

smi irani

Missing: ಕಾಂಗ್ರೆಸ್ ಟ್ವೀಟ್ ಗೆ ಕಟುವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

1-sad-dsa

Bhimanna T Naik ದುಃಖ ತಪ್ತ ಕುಟುಂಬಕ್ಕೆ‌ ಸಕಾಲಿಕ ನೆರವಾದ ಶಾಸಕ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ