ವಿಜೃಂಭಿಸಿದ ಗೌರಿಮಾರು ಕಟ್ಟೆ ಉತ್ಸವ


Team Udayavani, Dec 4, 2021, 4:19 PM IST

17gowrikatte

ಕಣ್ಣು ಕೋರೈಸುವ ದೀಪಗಳ‌ ಸಾಲು, ಎಲ್ಲಿ‌ ನೋಡಲಲ್ಲಿ ಕಿಕ್ಕಿರಿದು ನಿಂತ ಜನ, ಆಕರ್ಷಕವಾಗಿ ಅಲಂಕೃತಗೊಂಡ ದೇವಾಲಯ, ಓಂ ನಮಃ ಶಿವಾಯ ಎಂಬ ಭಕ್ತಿ ಪೂರ್ವಕ ಉದ್ಘೋಷ, ಭಕ್ತರಿಗೆಂದೇ ಭೂಮಿಗಿಳಿದು ಬಂದಂತೆ ಕಾಣುತ್ತಿದ್ದ ಶ್ರೀಮಂಜುನಾಥ ಸ್ವಾಮಿ. ಇದು ಕಾರ್ತಿಕ ಲಕ್ಷ ದೀಪೋತ್ಸವದ ಕೊನೆಯದಿನದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಕಂಗಳಿಸುತ್ತಿದ್ದ ರೀತಿ. ಪಾದಯಾತ್ರೆಯೊಂದಿಗೆ ಆರಂಭವಾಗಿದ್ದ ಲಕ್ಷದೀಪೋತ್ಸವದ ಉತ್ಸವಗಳು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಜರುಗಿದ ಗೌರಿಮಾರು ಕಟ್ಟೆ ಉತ್ಸವದೊಂದಿಗೆ ಸಂಪನ್ನವಾಯಿತು.

ಎಂದಿನಂತೆ ಚಂಡೆ ವಾದನದ ಮೂಲಕ ದೇವಾಲಯದ ಪ್ರಾಂಗಣಕ್ಕೆ ದೇವರನ್ನು ಸ್ವಾಗತಿಸಲಾಯಿತು. ನಂತರ ಅಮ್ಮನವರ ಪ್ರಧಾನ ಅರ್ಚಕರು ದೇವಾಲಯದಲ್ಲಿರುವ ಬಲಿ ಪೀಠಗಳಿಗೆ, ಅಷ್ಟ ದಿಗ್ಪಾಲಕರಿಗೆ ಬಿಲ್ವಪತ್ರೆ, ಅಕ್ಷತೆಗಳ ಮೂಲಕ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ವಾಮಿಗೆ ಪೂಜೆ ಮಾಡುವ ಪ್ರಧಾನ ಅರ್ಚಕರು ಹೂವು ಮತ್ತು ವಿವಿಧ ಆಭರಣಗಳಿಂದ ಸಿಂಗರಿಸಿದ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ದೇವಾಲಯ ಪ್ರದಕ್ಷಿಣೆ ಮಾಡಿದರು.

ಪೂಜೆ, ಆರತಿಯ ಬಳಿಕ ದೇವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಅಷ್ಟಾವಧಾನ ಸೇವೆ ಸಲ್ಲಿಸಲಾಯಿತು. ಚತುರ್ವೇದ ಪಾರಾಯಣ, ಪುರಾಣ, ಗೀತ, ಪಂಚಾಗ, ಸುಶಿರವಾದ್ಯಗಳಾದ ಕೊಳಲು, ಓಲಗ, ಚರ್ಮವಾದ್ಯಗಳಾದ ಚಂಡೆ, ಮದ್ದಳೆ, ಶಂಖ, ಜಾಗಟೆ, ಸಂಗೀತ ಗಾಯನದ ಮೂಲಕ ದೇವರಿಗೆ ಪೂಜೆ ಸಲ್ಲಿಸಲಾಯಿತು. ಹದಿನಾರು ಸುತ್ತಿನ ಬಳಿಕ ದೇವರನ್ನು ಹೊತ್ತು ದೇವಾಲಯದ ಮುಂಭಾಗದಲ್ಲಿ ಹೂವು, ದೀಪಗಳಿಂದ ಸಜ್ಜಾಗಿ ನಿಂತಿದ್ದ ಬೆಳ್ಳಿರಥಕ್ಕೆ ತರಲಾಯಿತು.

ರಥಾರೋಹಣನಾದ ಶ್ರೀ ಸ್ವಾಮಿಯನ್ನು ಆನೆ, ನಂದಿ, ತಮಟೆ, ಮಂಗಳವಾದ್ಯ, ಛತ್ರ ಚಾಮಾರಾದಿಗಳ ಸಹಿತ ದೇವಾಲಯ ಪ್ರದಕ್ಷಿಣೆ ಬಂದು ಶ್ರೀ ಕ್ಷೇತ್ರದ ಮುಖ್ಯ ದ್ವಾರದ ಬಳಿಯಿರುವ ಗೌರಿಮಾರು ಕಟ್ಟೆಗೆ ಕರೆತರಲಾಯಿತು. ಅಲ್ಲಿ ದೇವರನ್ನು ಪ್ರತಿಷ್ಠಾಪಿಸಿ, ಪೂಜಾಕೈಂಕರ್ಯಗಳನ್ನು ನೆರವೇರಿಸಲಾಯಿತು. ಋತ್ವಿಕರು, ಆಗಮಿಕರಿಂದ ವೇದಘೋಷ, ಮಂಗಳವಾದ್ಯ ವಾದನ, ಸಂಗೀತ ಗಾಯನ ಸೇರಿದಂತೆ ಮಹಾ ಮಂಗಳಾರತಿ ಬೆಳಗುವುದರೊಂದಿಗೆ ಗೌರಿಮಾರುಕಟ್ಟೆಯ ಪೂಜೆ ಸಾಂಗವಾಗಿ ನೆರವೇರಿಸಲಾಯಿತು.

ಪೂಜೆಯ ನಂತರ ದೇವಾಲಯಕ್ಕೆ ಹಿಂತಿರುಗಿದ ರಥದಿಂದ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಾದ್ಯ ವೃಂದ, ನಂದಿಕೋಲು ಕುಣಿತ, ವೀರಗಾಸೆ, ತಮಟೆ, ಕಂಸಾಳೆಗಳು ಜನರ ಮನಸೆಳೆದವು. ಕೆರೆಕಟ್ಟೆ ಉತ್ಸವದಿಂದ ಆರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕೆ ಗೌರಿ ಮಾರುಕಟ್ಟೆ ಉತ್ಸವ ಈ ವರ್ಷದ ಉತ್ಸವಗಳಿಗೆ ವಿರಾಮ ಹಾಕಿತು.

ಟಾಪ್ ನ್ಯೂಸ್

Udupi “ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆUdupi “ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ

Udupi “ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ

ವಿದ್ಯಾರ್ಥಿಗಳ ಬ್ಯಾಗ್‌ ತೂಕ ಇಳಿಕೆ: ಸಚಿವ ಮಧು ಬಂಗಾರಪ್ಪ

Mangaluru ವಿದ್ಯಾರ್ಥಿಗಳ ಬ್ಯಾಗ್‌ ತೂಕ ಇಳಿಕೆ: ಸಚಿವ ಮಧು ಬಂಗಾರಪ್ಪ

1-sasadsad

Asian Games ವನಿತಾ ಕ್ರಿಕೆಟ್‌: ಚಿನ್ನಕ್ಕಾಗಿ ಭಾರತ-ಶ್ರೀಲಂಕಾ ಹೋರಾಟ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

1-sasadsa

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯಾರ್ಥಿಗಳ ಬ್ಯಾಗ್‌ ತೂಕ ಇಳಿಕೆ: ಸಚಿವ ಮಧು ಬಂಗಾರಪ್ಪ

Mangaluru ವಿದ್ಯಾರ್ಥಿಗಳ ಬ್ಯಾಗ್‌ ತೂಕ ಇಳಿಕೆ: ಸಚಿವ ಮಧು ಬಂಗಾರಪ್ಪ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ

Belthangady ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಮರ ಬಿದ್ದು ವ್ಯಕ್ತಿ ಸಾವು

Belthangady ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಮರ ಬಿದ್ದು ವ್ಯಕ್ತಿ ಸಾವು

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

Udupi “ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆUdupi “ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ

Udupi “ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ

prahlad joshi

Politics: ರಾಷ್ಟ್ರಪತಿ ಹೆಸರಲ್ಲಿ ಕಾಂಗ್ರೆಸ್‌ ಚಿಲ್ಲರೆ ರಾಜಕಾರಣ: ಜೋಷಿ

alchohol

Karnataka: ಬೊಕ್ಕಸ ಭರ್ತಿಗೆ 400 ಹೊಸ ಮದ್ಯದಂಗಡಿ- ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ

ವಿದ್ಯಾರ್ಥಿಗಳ ಬ್ಯಾಗ್‌ ತೂಕ ಇಳಿಕೆ: ಸಚಿವ ಮಧು ಬಂಗಾರಪ್ಪ

Mangaluru ವಿದ್ಯಾರ್ಥಿಗಳ ಬ್ಯಾಗ್‌ ತೂಕ ಇಳಿಕೆ: ಸಚಿವ ಮಧು ಬಂಗಾರಪ್ಪ

dam

Cauvery: ಬೆಂಗಳೂರು ಬಂದ್‌ಗೆ ರೈತ ಹಿತರಕ್ಷಣ ಸಮಿತಿ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.