ಶುರುವಾಗಿದೆ ಆದಾಯ ತೆರಿಗೆ ಲೆಕ್ಕಾಚಾರ

ನಿಮ್ಮ ಆದಾಯದ ಮೇಲೆ ಹಣ ಕಡಿತ ಮಾಡುವುದಕ್ಕೆ ಇದೆ ಹಂತಹಂತದ ಕ್ರಮಗಳು

Team Udayavani, Jun 14, 2020, 6:00 AM IST

ಶುರುವಾಗಿದೆ ಆದಾಯ ತೆರಿಗೆ ಲೆಕ್ಕಾಚಾರ

ಮಾರ್ಚ್‌, ಏಪ್ರಿಲ್‌, ಮೇ ತಿಂಗಳು ಬಂತೆಂದರೆ ಸಾಕು ಉದ್ಯೋಗಿಗಳು, ಉದ್ಯಮಿಗಳು ಆದಾಯ ತೆರಿಗೆ ಪಾವತಿ ಕಸರತ್ತಿಗೆ ತೊಡಗುತ್ತಾರೆ. ಸದ್ಯ ಎಲ್ಲ ಕಡೆ ಕೋವಿಡ್-19 ಹಾವಳಿ ಇರುವುದರಿಂದ, ವಿವರ ಸಲ್ಲಿಕೆಗೆ ನವೆಂಬರ್‌ 30ರವರೆಗೆ ಗಡುವು ವಿಸ್ತರಿಸಲಾಗಿದೆ. ಆದ್ದರಿಂದ ಆದಾಯ ತೆರಿಗೆ ಅಂದರೇನು, ಅದರ ಲೆಕ್ಕಾಚಾರ ಮಾಡುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.

ಆದಾಯ ತೆರಿಗೆ ಅಂದರೇನು?
ಸರಳವಾಗಿ ಹೇಳುವುದಾದರೆ ಉದ್ಯೋಗಿಗಳು ಹಾಗೂ ಉದ್ಯಮಗಳ ಆದಾಯದ ಮೇಲೆ ಸರಕಾರ ವಿಧಿಸುವ ತೆರಿಗೆಯನ್ನು ಆದಾಯ ತೆರಿಗೆ ಎನ್ನಲಾಗುತ್ತದೆ. ಪ್ರತೀವರ್ಷ ಮೇ, ಜೂನ್‌ ಹೊತ್ತಿಗೆ ತೆರಿಗೆದಾರರು ತಮ್ಮ ವಿವರವನ್ನು ಸರಕಾರಕ್ಕೆ ಸಲ್ಲಿಸಬೇಕು. ಅದನ್ನು ಸರಕಾರ ಪರಿಶೀಲಿಸಿ, ಮುಂದಿನ ಲೆಕ್ಕಾಚಾರ ಮಾಡುತ್ತದೆ.

ತೆರಿಗೆಗೆ ಒಳಪಡುವ ಆದಾಯ
ಸಂಸ್ಥೆಯೊಂದು ನಿಮಗೆ ವೇತನ ನೀಡುವಾಗ, ಒಂದು ವಿವರ ಪಟ್ಟಿ ನೀಡುತ್ತದೆ. ಅದರಲ್ಲಿ ಸಿಟಿಸಿ (ಕಾಸ್ಟ್‌ ಟು ಕಂಪನಿ-ಕಂಪನಿಗಾದ ಖರ್ಚು) ಎಂಬ ಪದವಿರುತ್ತದೆ. ಇದರಲ್ಲಿ ವೇತನದ ಎಲ್ಲ ಲೆಕ್ಕಗಳೂ ಇರುತ್ತವೆ. ಮೂಲ ವೇತನ, ಮನೆ ಬಾಡಿಗೆ ಭತ್ಯೆ, ಮೂಲಭತ್ಯೆ, ಪ್ರಯಾಣ ಭತ್ಯೆ, ವೈದ್ಯಕೀಯ ಸೌಲಭ್ಯಗಳು, ಭವಿಷ್ಯನಿಧಿ ಮೊತ್ತ, ಪಿಂಚಣಿ ಮೊತ್ತ ಇನ್ನಿತರ ವಿವರಗಳಿರುತ್ತವೆ.

ಗ್ರಾಚ್ಯುಟಿ (ಸಂಸ್ಥೆಯೊಂದು ನೀವು ಕೆಲಸ ಬಿಟ್ಟ ನಂತರ ಗೌರವಪೂರ್ಣವಾಗಿ ನೀಡುವ ಮೊತ್ತ) ಮತ್ತು ಭವಿಷ್ಯನಿಧಿ ಮೊತ್ತವನ್ನು, ನಿಮ್ಮ ಸಿಟಿಸಿಯಲ್ಲಿ ಕತ್ತರಿಸಿದ ನಂತರ ಉಳಿಯುವ ಹಣ ಒಟ್ಟು ವೇತನವೆಂದು ಕರೆಸಿಕೊಳ್ಳುತ್ತದೆ. ಈ ಮೊತ್ತವನ್ನೇ ತೆರಿಗೆ ಅಥವಾ ಇನ್ನಿತರ ಕಡಿತಗಳನ್ನು ಮಾಡದೆ ನಿಮಗೆ ನೀಡಲಾಗಿರುತ್ತದೆ. ನಿಮ್ಮ ವೇತನದಲ್ಲಿ ಕಡಿತ ಮಾಡಬಹುದಾದ ಮೊತ್ತಗಳು, ವಿನಾಯ್ತಿಗಳನ್ನು ಲೆಕ್ಕಾಚಾರ ಮಾಡಿ (ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ ಇತ್ಯಾದಿ), ಉಳಿಯುವ ಮೊತ್ತದ ಮೇಲೆ ಆದಾಯ ತೆರಿಗೆ ಹಾಕಲಾಗುತ್ತದೆ. ಒಂದು ವೇಳೆ ವೇತನ ಹೊರತುಪಡಿಸಿ ಬೇರೆ ರೀತಿಯ ಆದಾಯ ನಿಮಗಿದ್ದರೆ, ಅದನ್ನೂ ಇಲ್ಲಿ ಪರಿಗಣಿಸಲಾಗುತ್ತದೆ.

ಆದಾಯ ತೆರಿಗೆ ಹಂತಗಳು
ನಿಮಗೆ ಬರುವ ಆದಾಯ, ತೆರಿಗೆ ವ್ಯಾಪ್ತಿಗೆ ಬರುತ್ತದೋ, ಇಲ್ಲವೋ ಎನ್ನುವುದನ್ನು ಮೊದಲು ಖಾತ್ರಿಪಡಿಸಿಕೊಳ್ಳಬೇಕು. ಅದಕ್ಕಾಗಿ ಬೇರೆ ಬೇರೆ ತೆರಿಗೆ ಹಂತಗಳನ್ನು ತಿಳಿದುಕೊಳ್ಳಬೇಕು. ಇಲ್ಲಿ ವಾರ್ಷಿಕವಾಗಿ ನೀವು ಎಷ್ಟು ಆದಾಯ ಹೊಂದಿದ್ದೀರಿ, ಹಾಗೆಯೇ ನಿಮ್ಮ ವಯಸ್ಸೆಷ್ಟು ಎನ್ನುವುದರ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತದೆ.

ಲೆಕ್ಕಾಚಾರ ಹೇಗೆ?
ಆದಾಯ ತೆರಿಗೆ ಲೆಕ್ಕಾಚಾರ ಬಹಳ ಸೂಕ್ಷ್ಮವಾಗಿದೆ. ಇಲ್ಲಿ ಬರೀ ಆದಾಯ ತೆರಿಗೆಯಲ್ಲದೇ ಸರಕಾರ ವಿಧಿಸುವ ಸೆಸ್‌ ಕೂಡಾ ಸೇರುತ್ತದೆ. ಆದ್ದರಿಂದ ಒಟ್ಟಾರೆ ತೆರಿಗೆ ಹೆಚ್ಚಾಗುತ್ತದೆ. ಉದಾಹರಣೆ: 28 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನಿಗೆ ವಾರ್ಷಿಕವಾಗಿ 6 ಲಕ್ಷ ರೂ.ವರೆಗೆ ವೇತನವಿದೆ ಎಂದುಕೊಳ್ಳೋಣ. ಆತನ 2.5 ಲಕ್ಷ ರೂ. ಹಣಕ್ಕೆ ತೆರಿಗೆ ಹಾಕುವುದಿಲ್ಲ. 2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ತೆರಿಗೆ ದರ ಶೇ.5 ಆಗಿರುತ್ತದೆ. ಈಗ ತೆರಿಗೆ ಮೊತ್ತ 12,500 ರೂ. ಆಗಿರುತ್ತದೆ. 5 ಲಕ್ಷ ರೂ.ನಿಂದ 6 ಲಕ್ಷ ರೂ.ವರೆಗೆ ಆದಾಯ ತೆರಿಗೆ ದರ ಶೇ.20ರಷ್ಟಾಗುತ್ತದೆ, ಅಂದರೆ ತೆರಿಗೆ ಮೊತ್ತ 20,000 ರೂ. ಈಗ ಒಟ್ಟಾರೆ ತೆರಿಗೆ 32,500 ರೂ. ಇದಕ್ಕೆ ಶೇ.4ರಷ್ಟು ಸೆಸ್‌ ಹಾಕಲಾಗುತ್ತದೆ. ಈಗ ಒಟ್ಟಾರೆ ತೆರಿಗೆ ಮೊತ್ತ 33,800 ರೂ.

ತೆರಿಗೆ ಕ್ಯಾಲ್ಕುಲೇಟರ್‌
ವ್ಯಕ್ತಿಗತವಾಗಿ ತೆರಿಗೆಯನ್ನು ಲೆಕ್ಕಾಚಾರ ಮಾಡುವುದು ಕಷ್ಟದ ಕೆಲಸ. ಆದ್ದರಿಂದ ಭಾರತೀಯ ಆದಾಯ ತೆರಿಗೆ ಇಲಾಖೆ ತನ್ನ ಇ-ಫೈಲಿಂಗ್‌ ವೆಬ್‌ಸೈಟ್‌ನಲ್ಲಿ ಇ-ಕ್ಯಾಲ್ಕುಲೇಟರ್‌ ಒಂದನ್ನು ಸಿದ್ಧಪಡಿಸಿದೆ. ಅಲ್ಲಿ ನಿಖರ ಲೆಕ್ಕಾಚಾರ ಪಡೆಯಬಹುದು.

ತೆರಿಗೆಯ ಹಂತಗಳು-2020-21
60 ವರ್ಷ ಒಳಗಿನವರಿಗೆ
ನಿವ್ವಳ ಆದಾಯ       ತೆರಿಗೆ
2.5 ಲಕ್ಷ ರೂ.ವರೆಗೆ 0%
2.5 ಲಕ್ಷ ರೂ.ನಿಂದ 5 ಲಕ್ಷ ರೂ. 5%
5 ಲಕ್ಷ ರೂ.ನಿಂದ 10 ಲಕ್ಷ ರೂ. 20%
10 ಲಕ್ಷ ರೂ.ಗಿಂತ ಮೇಲೆ 30%

80 ವರ್ಷ ಮೇಲ್ಪಟ್ಟವರಿಗೆ
5 ಲಕ್ಷ ರೂ.ವರೆಗೆ 0%
5 ಲಕ್ಷ ರೂ.ನಿಂದ 10 ಲಕ್ಷ ರೂ. 20%
10 ಲಕ್ಷ ರೂ.ಗಿಂತ ಮೇಲೆ 30%

ಟಾಪ್ ನ್ಯೂಸ್

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Mumbai: Sensex jumped to 75000 during Modi’s tenure

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.