ನೇಕಾರ ಸಮುದಾಯಕ್ಕೆ ಬಿಜೆಪಿ ಟಿಕೆಟ್ ಕೊಡಿ: ಬ್ಯಾನರ್ ಹಿಡಿದು ಪ್ರತಿಭಟನೆ
ಹಳಬರಿಗೆ ಟಿಕೆಟ್ ನೀಡಿದರೆ ಬಿಜೆಪಿ ಒಬ್ಬ ಶಾಸಕನನ್ನು ಕಳೆದುಕೊಳ್ಳಬೇಕಾಗುತ್ತದೆ...
Team Udayavani, Apr 2, 2023, 6:25 PM IST
ರಬಕವಿ-ಬನಹಟ್ಟಿ: ಬೆಂಗಳೂರಿನ ಗೋಲ್ಡನ್ ಪ್ಯಾಲೇಸ್ ರೆಸಾರ್ಟ್ ನಲ್ಲಿ ನಡೆಯಿತ್ತಿರುವ ಬಿಜೆಪಿ ಚುನಾವಣೆ ರಾಜ್ಯ ಕಾರ್ಯಕಾರಣಿ ಸಭೆಯ ಮುಂಭಾಗದಲ್ಲಿ ತೇರದಾಳ ಮತಕ್ಷೇತ್ರಕ್ಕೆ ಈ ಬಾರಿ ಸ್ಥಳೀಯ ನೇಕಾರರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಭಾನುವಾರಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜೇಂದ್ರ ಅಂಬಲಿ, ”ಕ್ಷೇತ್ರದಲ್ಲಿನ ವಾಸ್ತವ ಅರಿತು ಈ ಬಾರಿ ಟಿಕೆಟ್ ನೀಡಬೇಕು. ಶೇ.40 ರಷ್ಟು ನೇಕಾರ ಸಮುದಾಯವನ್ನೇ ಹೊಂದಿರುವ ತೇರದಾಳದಲ್ಲಿ ಬಹು ದಿನಗಳ ಬೇಡಿಕೆಯಾಗಿರುವದನ್ನು ಪಕ್ಷವು ಈಡೇರಿಸಬೇಕು. ಪಕ್ಷ ಗೆಲ್ಲಬೇಕಾದರೆ ನೇಕಾರ ಸಮುದಾಯಕ್ಕೆ ಟಿಕೆಟ್ ನೀಡಿದರೆ ಮಾತ್ರ ಗೆಲುವು ನಿಶ್ಚಿತವೆಂದರು.
ಈ ಬಾರಿ ಟಿಕೆಟ್ ಸ್ಥಳೀಯರಿಗೆ ನೀಡಿದ್ದೇ ಆದಲ್ಲಿ 30 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಜಯಗಳಿಸುವುದು ಖಚಿತ. ಕ್ಷೇತ್ರದಲ್ಲಿ ನೇಕಾರರ ಸಮುದಾಯ ಕಾರ್ಯಕರ್ತರು ಸಾಕಷ್ಟು ರೊಚ್ಚಿಗೆದ್ದಿರುವ ಕಾರಣ ಅನಾವಶ್ಯಕವಾಗಿ ಮತ್ತೆ ಹಳಬರಿಗೆ ಟಿಕೆಟ್ ನೀಡಿದರೆ ರಾಜ್ಯ ಬಿಜೆಪಿ ಒಂದು ಶಾಸಕನನ್ನು ಕಳೆದುಕೊಳ್ಳುವದರಲ್ಲಿ ಅನುಮಾನವಿಲ್ಲ ಎಂದರು. ಪ್ರವೀಣ ಕೋಲಾರ, ಕುಮಾರ ಕದಂ, ಮಲ್ಲಿಕಾರ್ಜುನ ಸವದಿ, ರಮೇಶ ಮಂಡಿ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ