
ಆಸ್ಕರ್ ಸಮಾರಂಭದಲ್ಲಿ ನನಗೆ ದೊಡ್ಡ ಆಘಾತವಾಯಿತು: ಗುನೀತ್ ಮೊಂಗಾ ಹೇಳಿದ್ದೇನು?
ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ಮಾಪಕಿಯ ಹೊಸ ಅನುಭವ
Team Udayavani, Mar 17, 2023, 4:37 PM IST

ನವದೆಹಲಿ: ಆಸ್ಕರ್ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕಾರ ಭಾಷಣವನ್ನು ಸಂಗೀತದಿಂದ ಕಡಿತಗೊಳಿಸಿದಾಗ ನನಗೆ ದೊಡ್ಡ ಆಘಾತ ಉಂಟಾಯಿತು ಎಂದು “ದಿ ಎಲಿಫೆಂಟ್ ವಿಸ್ಪರರ್ಸ್” ನಿರ್ಮಾಪಕಿ ಗುನೀತ್ ಮೊಂಗಾ ಶುಕ್ರವಾರ ಹೇಳಿದ್ದಾರೆ.
ಕಾರ್ತಿಕಿ ಗೊನ್ಸಾಲ್ವಿಸ್ ನಿರ್ದೇಶಿಸಿದ ಚಲನಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಶುಕ್ರವಾರ ಬೆಳಗ್ಗೆ ಚಿನ್ನದ ಕಿರು ಪ್ರತಿಮೆಯೊಂದಿಗೆ ತವರಿಗೆ ಮರಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮೊಂಗಾ”ನಾನು ಋಣಿಯಾಗಿದ್ದೇನೆ. ಇದೊಂದು ಆಶೀರ್ವಾದ ಎಂದು ನನ್ನ ಭಾವನೆ. 1.4 ಶತಕೋಟಿ ಜನರು ಇದನ್ನು ಒಟ್ಟಿಗೆ ವ್ಯಕ್ತಪಡಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಇದು ಅತಿವಾಸ್ತವಿಕವಾಗಿದೆ” ಎಂದರು.
ತಮಿಳು ಸಾಕ್ಷ್ಯಚಿತ್ರ ಕಿರುಚಿತ್ರವು ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ನಿರ್ಮಾಣವಾಯಿತು. ಪ್ರಶಸ್ತಿಯನ್ನು ಮಹಿಳೆಯರಿಬ್ಬರಿಗೆ ನೀಡಲಾಗಿತ್ತು ಗೊನ್ಸಾಲ್ವೆಸ್ ಅವರು ತಮ್ಮ ಗೆಲುವನ್ನು “ಮಾತೃಭೂಮಿ ಭಾರತಕ್ಕೆ” ಅರ್ಪಿಸಿದ್ದಾರೆ.
“ಸಂಗೀತದಿಂದ ನನ್ನ ಮಾತು ಕಡಿತಗೊಂಡಾಗ ನನಗೆ ದೊಡ್ಡ ಆಘಾತವಾಯಿತು. ನಾನು ವೇದಿಕೆಯಲ್ಲಿದ್ದೆ ಆದರೆ ಇದು ಭಾರತೀಯ ನಿರ್ಮಾಣಕ್ಕಾಗಿ ಭಾರತದ ಮೊದಲ ಆಸ್ಕರ್ ಎಂದು ನಾನು ಗಟ್ಟಿಯಾಗಿ ಮೈದಾನದಲ್ಲಿದ್ದ ಜನರಿಗೆ ಹೇಳಿದೆ ಮತ್ತು ನಂತರ ಎಲ್ಲರೂ ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು ”ಎಂದು ಮೊಂಗಾ ಆಸ್ಕರ್ ಪ್ರಶಸ್ತಿಯನ್ನು ಎತ್ತಿ ಹಿಡಿದು ಅನುಭವ ಹಂಚಿಕೊಂಡಿದ್ದಾರೆ.
ಮೊಂಗಾ ಅವರು ಮೈಕ್ನತ್ತ ನಡೆದಾಗ, ಸಂಗೀತವು ಅವರ ಮಾತನ್ನು ನಿಲ್ಲಿಸುವುದನ್ನು ಸೂಚಿಸಿತು ಮತ್ತು ತಂಡವನ್ನು ವೇದಿಕೆಯಿಂದ ಹೊರಗೆ ಕರೆದೊಯ್ಯಲಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

10 ಕೋಟಿ ಮೌಲ್ಯದ ಕಾರು ಖರೀದಿಸಿದ ಶಾರುಖ್: ಡ್ರೈವ್ ಮಾಡಿಕೊಂಡು ಹೋಗುವ ವಿಡಿಯೋ ವೈರಲ್

ಪ್ರಿಯಾಂಕಾ ಬಾಲಿವುಡ್ ತೊರೆಯಲು ಕರಣ್ ಜೋಹರ್ ಕಾರಣ! ಕಂಗನಾ V/S ಪ್ರಿಯಾಂಕಾ ಚೋಪ್ರಾ

ಆ ದಿನಗಳು.. ಹೃದಯಾಘಾತವಾದ ಕರಾಳ ದಿನಗಳ ಬಗ್ಗೆ ಮೌನ ಮುರಿದ ನಟ ಸುನಿಲ್ ಗ್ರೋವರ್

ಚೇತರಿಕೆಯ ಹಾದಿಯಲ್ಲಿ ಅಮಿತಾಭ್: ಗಾಯದ ಬಳಿಕ ಮೊದಲ ಬಾರಿ ಅಭಿಮಾನಿಗಳ ಮುಂದೆ ಬಂದ ಬಿಗ್ ಬಿ
MUST WATCH
ಹೊಸ ಸೇರ್ಪಡೆ

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಭಾರತದಲ್ಲಿ ಪಾಕ್ ಸರ್ಕಾರದ ಟ್ವಿಟರ್ ಖಾತೆಗೆ ಮತ್ತೆ ತಡೆ

ಕೆಲವು ಪಂದ್ಯಗಳಿಗೆ ರೋಹಿತ್ ರೆಸ್ಟ್ : ಸೂರ್ಯಕುಮಾರ್ ಯಾದವ್ ಉಸ್ತುವಾರಿ ನಾಯಕ