GT V\s KKR: ಮತ್ತೆ ಕಾಡಲಿದೆಯೇ ರಿಂಕು ಭೀತಿ?


Team Udayavani, Apr 29, 2023, 8:27 AM IST

kkr

ಕೋಲ್ಕತಾ: ಗೆಲುವಿನ ಲಯದಲ್ಲಿರುವ ಗುಜರಾತ್‌ ಟೈಟಾನ್ಸ್‌ ಮತ್ತು ಸತತ 4 ಸೋಲಿನ ಸರಪಳಿಯನ್ನು ಕಡಿದುಕೊಂಡಿರುವ ಕೋಲ್ಕತಾ ನೈಟ್‌ರೈಡರ್ ಶನಿವಾರ ದ್ವಿತೀಯ ಸುತ್ತಿನ ಮುಖಾಮುಖಿಗೆ ಸಜ್ಜು ಗೊಂಡಿವೆ. ಹಾಲಿ ಚಾಂಪಿಯನ್‌ ಗುಜರಾತ್‌ ಪಾಲಿಗೆ ಇದು ಸೇಡಿನ ಪಂದ್ಯ. ಅಹ್ಮದಾ ಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಮೇಲಾಟದಲ್ಲಿ ಕೆಕೆಆರ್‌ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು.

ಇತ್ತಂಡಗಳ ನಡುವಿನ ಮೊದಲ ಮುಖಾಮುಖೀ ಹಾರ್ದಿಕ್‌ ಪಾಂಡ್ಯ ಗೈರಲ್ಲಿ ನಡೆದಿತ್ತು. ಅಂದು ರಶೀದ್‌ ಖಾನ್‌ ನಾಯಕತ್ವ ವಹಿಸಿದ್ದರು. 204 ರನ್‌ ಬೆನ್ನಟ್ಟಿಕೊಂಡು ಹೋದ ಗುಜರಾತ್‌ಗೆ ರಿಂಕು ಸಿಂಗ್‌ ಸಿಂಹಸ್ವಪ್ನ ವಾಗಿ ಕಾಡಿದ್ದರು. ಯಶ್‌ ದಯಾಳ್‌ ಅವರ ಅಂತಿಮ ಓವರ್‌ನಲ್ಲಿ ಸತತ 5 ಸಿಕ್ಸರ್‌ ಸಿಡಿಸಿ ಜಯಭೇರಿ ಮೊಳಗಿಸಿ ದ್ದನ್ನು ಮರೆಯಲುಂಟೇ! ಐಪಿಎಲ್‌ನ ಅತ್ಯಂತ ರೋಚಕ ಹಣಾಹಣಿಗೆ ಈ ಪಂದ್ಯ ಸಾಕ್ಷಿಯಾಗಿತ್ತು. ಬಹುಶಃ ಈಗಲೂ ರಿಂಕು ಸಿಂಗ್‌ ಭೀತಿಯಿಂದ ಗುಜರಾತ್‌ ಹೊರಬಂದಿರಲಿಕ್ಕಿಲ್ಲ!

ಆದರೂ ಕೂಟದಲ್ಲೇ ಅತ್ಯಂತ ಲಯದಲ್ಲಿರುವ ತಂಡವೆಂದರೆ ಗುಜರಾತ್‌ ಟೈಟಾನ್ಸ್‌ ಎಂಬುದನ್ನು ಮರೆಯುವಂತಿಲ್ಲ. ಅತೀ ಕಡಿಮೆ ಪಂದ್ಯಗಳಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ಹಿರಿಮೆ ಪಾಂಡ್ಯ ಪಡೆಯದ್ದು (7 ಪಂದ್ಯ, 5 ಜಯ). ಇನ್ನೊಂದೆಡೆ ನಿತೀಶ್‌ ರಾಣಾ ಬಳಗ ಎಂಟರಲ್ಲಿ ಮೂರನ್ನಷ್ಟೇ ಗೆದ್ದಿದೆ. ಪಂಜಾಬ್‌ ವಿರುದ್ಧ ಸೋಲಿನ ಆರಂಭ ಕಂಡಿದ್ದ ಕೋಲ್ಕತಾ, ಅನಂತರ ಸತತ 2 ಪಂದ್ಯಗಳನ್ನು ಗೆದ್ದು ಭರವಸೆ ಮೂಡಿಸಿತು. ಆದರೆ ಮತ್ತೆ ಸತತವಾಗಿ ಮುಗ್ಗರಿಸುತ್ತ ಹೋಯಿತು. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಜೀವದಾನ ಪಡೆಯಿತು. ಈ ಗೆಲುವು ಕೆಕೆಆರ್‌ಗೆ ಸ್ಫೂರ್ತಿ ತುಂಬೀತೇ ಎಂಬುದಕ್ಕೆ ತವರಿನ ಪಂದ್ಯ ಉತ್ತರ ನೀಡಲಿದೆ. ಉಳಿದ 6 ಪಂದ್ಯಗಳಲ್ಲಿ ಐದನ್ನು ಗೆಲ್ಲಲೇಬೇಕಾದ ಒತ್ತಡ ಕೋಲ್ಕತಾ ಮೇಲಿದೆ. ಈ ಆರರಲ್ಲಿ 2 ಪಂದ್ಯಗಳನ್ನಷ್ಟೇ ಅದು ತವರಿನಾಚೆ ಆಡಲಿದೆ.

ನಿತೀಶ್‌ ರಾಣಾ ನಾಯಕತ್ವದಲ್ಲಿ ಪಳಗಿಲ್ಲ ಮತ್ತು ಕೆರಿಬಿಯನ್‌ದ್ವಯರಾದ ಸುನೀಲ್‌ ನಾರಾಯಣ್‌, ಆ್ಯಂಡ್ರೆ ರಸೆಲ್‌ ಇನ್ನೂ ಲಯ ಕಂಡುಕೊಂಡಿಲ್ಲ ಎಂಬುದನ್ನು ಹೊರತುಪಡಿಸಿದರೆ, ಕೋಲ್ಕತಾ ಬಲಿಷ್ಠ ತಂಡ ಎಂಬುದರಲ್ಲಿ ಅನುಮಾನವಿಲ್ಲ.

ಆರಂಭಕಾರ ಜೇಸನ್‌ ರಾಯ್‌ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಕಳೆದ 3 ಪಂದ್ಯಗಳಲ್ಲಿ 43, 61 ಮತ್ತು 56 ರನ್‌ ಬಾರಿಸಿದ್ದಾರೆ. ಗುರ್ಬಜ್‌, ಜಗದೀಶನ್‌, ವೆಂಕಟೇಶ್‌ ಅಯ್ಯರ್‌, ರಾಣಾ, ರಿಂಕು ಸಿಂಗ್‌, ಶಾರ್ದೂಲ್‌ ಠಾಕೂರ್‌ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಬ್ಯಾಟರ್. ಕೆಕೆಆರ್‌ ಬೌಲಿಂಗ್‌ ಸ್ಪಿನ್ನರ್‌ಗಳಾದ ವರುಣ್‌ ಚಕ್ರವರ್ತಿ, ಸುಯಶ್‌ ಶರ್ಮ ಅವರನ್ನು ಅವಲಂಬಿಸಿದೆ.

ಉತ್ಸಾಹದಲ್ಲಿ ಗುಜರಾತ್‌
ಗುಜರಾತ್‌ ವೈಶಿಷ್ಟ್ಯವೆಂದರೆ ಎಂಥದೇ ಪರಿಸ್ಥಿತಿಯಿಂದ ಜಿಗಿದು ಪಾರಾಗಿ ಬರುವ ಉತ್ಸಾಹ. ಇದಕ್ಕೆ ತಣ್ಣೀರೆರಚಿದ್ದೇ ಕೋಲ್ಕತಾ ಮತ್ತು ರಿಂಕು ಸಿಂಗ್‌. ಅದೂ ತವರಿನಂಗಳದಲ್ಲಿ. ಇದಕ್ಕೆ ಕೆಕೆಆರ್‌ ತವರಾದ ಈಡನ್‌ ಗಾರ್ಡನ್ಸ್‌ನಲ್ಲೇ ಜವಾಬು ನೀಡುವುದು ಗುಜರಾತ್‌ ಗುರಿಯಾದರೆ ಅಚ್ಚರಿ ಏನಿಲ್ಲ.
ಗುಜರಾತ್‌ ಅತ್ಯಂತ ಸಂತುಲಿತ ತಂಡ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಆಲ್‌ರೌಂಡ್‌ ವಿಭಾಗಗಳಲ್ಲಿ ಅದು ಸಶಕ್ತ ಪಡೆಯನ್ನು ಹೊಂದಿದೆ. ಆದರೆ ಪಂದ್ಯ ನಡೆಯುವುದು ಈಡನ್‌ ಅಂಗಳದಲ್ಲಿ. ಅಂದಮಾತ್ರಕ್ಕೆ ಕೋಲ್ಕತಾವೇ ಮೇಲುಗೈ ಸಾಧಿಸ ಬೇಕೆಂದಿಲ್ಲ. ಇಲ್ಲಿ ಆಡಲಾದ ಕಳೆದ ಪಂದ್ಯ ದಲ್ಲಿ ಚೆನ್ನೈ 49 ರನ್ನುಗಳಿಂದ ಕೋಲ್ಕತಾವನ್ನು ಮಣಿಸಿತ್ತು!

ಟಾಪ್ ನ್ಯೂಸ್

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.