ರಾಯಚೂರು : ಭಾರೀ ಮಳೆಗೆ ಕುಸಿದು ಬಿದ್ದ ಮಲ್ಲಾಪುರದ ಶ್ರೀ ಮಠ
Team Udayavani, Sep 26, 2020, 2:40 PM IST
ರಾಯಚೂರು: ಸಿಂಧನೂರು ತಾಲ್ಲೂಕಿನಾದ್ಯಂತ ಭಾರೀ ಮಳೆ ಸುರಿದಿದ್ದು ಪುರಾತನ ದೇವಸ್ಥಾನ ಕುಸಿದು ಬಿದ್ದಿದೆ. ಶುಕ್ರವಾರ ಇಡೀ ರಾತ್ರಿ ಬಿಟ್ಟು ಬಿಡದೆ ಮಳೆಯಾದ ಕಾರಣ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ಮಲ್ಲಾಪುರ ಗ್ರಾಮದ ಪುರಾತನ ದೇವಸ್ಥಾನ ಶ್ರೀ ಮಠ ಸಂಪೂರ್ಣ ಬಿದ್ದು ಹೋಗಿದೆ. ಹಲವೆಡೆ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಕೆಸರು ಗದ್ದೆಯಂತಾಗಿದೆ.
ಕಳೆದ ಶನಿವಾರ ರಾಜ್ಯದಲ್ಲಿ ಧಾರಾಕಾರ ಮಳೆಯಾಗಿದ್ದು ಹೆಚ್ಚಿನ ಕಡೆ ಪ್ರವಾಹಗಳು ಸೃಷ್ಟಿಯಾಗಿದ್ದವು ಇಂದಿನ ಮಳೆಯ ಪರಿಸ್ಥಿತಿಯನ್ನು ಕಂಡರೆ ಒಂದು ವಾರದ ಹಿಂದಿನ ಪ್ರವಾಹದ ನೆನಪಾಗುತ್ತದೆ.
ಇದನ್ನೂ ಓದಿ ;ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ