ಇಫಿ 53ನೇ ಚಿತ್ರೋತ್ಸವ;ಸುನಿಲ್ ಶೆಟ್ಟಿ, ದೇವಗನ್ ಸೇರಿ ಪಂಚ ಸಿನಿ ದಿಗ್ಗಜರ ಮಾತಿಗೆ ಚಪ್ಪಾಳೆಯ ಸುರಿಮಳೆ!

ಯಾವ ಪ್ರತಿಭೆ ಎಲ್ಲಿಂದ ಬೇಕಾದರೂ ಧಿಗ್ಗನೆ ಬೆಳಗಬಹುದು.

Team Udayavani, Nov 21, 2022, 11:10 AM IST

ಇಫಿ 53ನೇ ಚಿತ್ರೋತ್ಸವ;ಸುನಿಲ್ ಶೆಟ್ಟಿ, ದೇವಗನ್ ಸೇರಿ ಪಂಚ ಸಿನಿ ದಿಗ್ಗಜರ ಮಾತಿಗೆ ಚಪ್ಪಾಳೆಯ ಸುರಿಮಳೆ!

ಪಣಜಿ: ರವಿವಾರ ನಡೆದ 53ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚುಚಪ್ಪಾಳೆ ಗಿಟ್ಟಿಸಿದ್ದು ಸನ್ಮಾನಿತರಾದ ಐದು ಮಂದಿ ನಟರು ಹಾಗೂ ಚಿತ್ರಸಾಹಿತಿಯ ಪಂಚ ವಾಕ್ಯಗಳು. ಉಳಿದಂತೆ ಚಪ್ಪಾಳೆ ಕೇಳಿಬಂದದ್ದು ಕೆಲವರ ಭಾಷಣ ಮುಗಿಸಲು.

ಸಂತೋಷವಾಗಿರುವುದೇ ಬದುಕಿನ ಗುಟ್ಟು, ಇನ್ನೊಬ್ಬರ ಸಂತೋಷವನ್ನು ನಾವೂ ಅನುಭವಿಸುತ್ತಾ ಬದುಕುವುದು ನಮ್ಮ ಬದುಕನ್ನು ಸುಂದರವಾಗಿಟ್ಟುಕೊಳ್ಳುವುದರ ರಹಸ್ಯ. ಜತೆಗೆ ಬೆಳಗ್ಗೆ ಬೇಗ ಏಳುವುದು ನಮ್ಮ ಆರೋಗ್ಯ ಹಾಗೂ ಬದುಕನ್ನು ಗಟ್ಟಿಗೊಳಿಸುತ್ತದೆ.. ಮೊದಲಿನೆರಡು ವಾಕ್ಯಗಳು ಎಲ್ಲ ಮಹಾತ್ಮರು ಹೇಳಿದ್ದು, ನಮ್ಮಹಿರಿಯರು ಅನುಸರಿಸಿದ್ದು. ಮೂರನೆಯದ್ದೂ ಸಹ ಹಿರಿಯರೇ ಸಾಬೀತುಪಡಿಸಿದ್ದು. ಅದನ್ನೀಗ ಮತ್ತೆ ಹೇಳಿ ನನ್ನ ಹಾಗೆ ನೀವೂ ಬೇಗ ಏಳಿ, ಚೆನ್ನಾಗಿರಿ ಎಂದದ್ದು ಬಾಲಿವುಡ್‌ ನಟ ಹಾಗೂ ಕನ್ನಡ ನಾಡಿನ ಕರಾವಳಿಯ ಸುನಿಲ್‌ ಶೆಟ್ಟಿ.

ನಿರೂಪಕ ‘ಏನ್ಸಾರ್‌ ಈಗಲೂ ಹಾಗೇ ಇದ್ದೀರಿ’ ಎಂಬ ಪ್ರಶ್ನೆಗೆ ಸುನಿಲ್‌ ಶೆಟ್ಟಿ ಉತ್ತರಿಸಿದ ರೀತಿ. ನಮ್ಮ ಬದುಕು ಚೆನ್ನಾಗಿರಬೇಕೆಂದರೆ ನಾವು ಸಂತೋಷವಾಗಿರಬೇಕು. ಉಳಿದವರ ಸಂತೋಷವನ್ನು ನಮ್ಮ ಸಂತೋಷವೆಂಬಂತೆ ಅನುಭವಿಸಬೇಕು. ಜತೆಗೆ ಬೆಳಗ್ಗೆ ಬೇಗ ಎದ್ದೇಳಬೇಕು. ಮುಂಬಯಿಯಲ್ಲಿ ಸಾಮಾನ್ಯವಾದ ಒಂದು ಮಾತಿದೆ. ಇಬ್ಬರೇ ಬೇಗ ಏಳುತ್ತಾರೆ. ಒಬ್ಬ ಹಾಲಿನವನು [ದೂದ್‌ವಾಲ] ಹಾಗೂ ಮತ್ತೊಬ್ಬ ಸುನಿಲ್‌ ಶೆಟ್ಟಿ !.ಸಭಿಕರಿಂದ ಜೋರಾದ ಚಪ್ಪಾಳೆ.

ಸಿನಿಮಾ ಹೆಚ್ಚು ಪ್ರಜಾಸತ್ತಾತ್ಮಕ
ಸಿನಿಮಾ ಉದ್ಯಮ ಈಗ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ. ಯಾವ ಪ್ರತಿಭೆ ಎಲ್ಲಿಂದ ಬೇಕಾದರೂ ಧಿಗ್ಗನೆ ಬೆಳಗಬಹುದು. ಅದಕ್ಕೆ ಯಾವ ತಡೆಯೂ ಇಲ್ಲ. ಯಾರು ಬೇಕಾದರೂ ತಮ್ಮ ಕಥೆಯನ್ನು ಹೇಳಬಹುದು. ಅದೇ ಸಿನಿಮಾದ ಸ್ವಾತಂತ್ರ್ಯ ಮತ್ತು ಸೊಗಸು ಎಂದವರು ನಟ ಮನೋಜ್‌ ಬಾಜಪೇಯಿ.

ನನಗೆ ಎಲ್ಲವೂ ಇಷ್ಟ
ನಟ ಅಜಯ್‌ ದೇವಗನ್‌, ಸಿನಿಮಾವೇ ಮುಖ್ಯವಾಗಿ ನನಗೆ ಇಷ್ಟ. ನಾವು ಬದುಕಿರುವುದೇ ಸಿನಿಮಾಕ್ಕಾಗಿ, ಸಿನಿಮಾ ಮಾಡುವುದಕ್ಕಾಗಿ. ಹಾಗಾಗಿ ನಟನೆ, ನಿರ್ದೇಶನ, ನಿರ್ಮಾಣ ಎಂದೆಲ್ಲಾ ಪ್ರತ್ಯೇಕಿಸಿ ನೋಡುವ ಆಲೋಚನೆಯೇ ನನಗೆ ಹಿಡಿಸದು. ಇಡಿಯಾಗಿ ಸಿನಿಮಾವೇ ನನ್ನ ಉಸಿರು ಎಂದಾಗ ಜೋರಾದ ಚಪ್ಪಾಳೆ.

ಒಳ್ಳೆಯವರು ಸಿಕ್ಕರು, ಒಳ್ಳೆ ಪಾತ್ರಗಳು ಸಿಕ್ಕವು
ನಾನು ಒಳ್ಳೆಯ ಪಾತ್ರಗಳನ್ನು ಮಾಡಲಿಕ್ಕೆ ಹಲವರು ಕಾರಣ. ನನಗೆ ಒಳ್ಳೆಯ ಬರಹಗಾರರು ಸಿಕ್ಕರು, ಒಳ್ಳೆಯ ನಿರ್ದೇಶಕರು ಸಿಕ್ಕರು, ಒಳ್ಳೆಯ ಪಾತ್ರಗಳನ್ನು ಸೃಷ್ಟಿಸಿದರು, ಅವು ನನ್ನ ಪಾಲಾದವು. ನಾನು ದಕ್ಕಿಸಿಕೊಳ್ಳಲು ಪ್ರಯತ್ನಿಸಿದೆ. ಇಲ್ಲವಾದರೆ ಎಂಥೆಂಥೋ ಪಾತ್ರಗಳು ಬಂದು ಬಿಡುತ್ತಿದ್ದವು. ಎಷ್ಟಿದ್ದರೂ ನಾವು ದುಡ್ಡಿಗಾಗಿ ನಟಿಸುವವರಲ್ಲವೇ? ಎಂದು ಹಿರಿಯ ನಟ ಪರೇಶ್‌ ರಾವಲ್‌ ಡೈಲಾಗ್‌ ಡೆಲಿವರಿಯಂತೆ ಮಾತನಾಡಿದಾಗ ಸಭಿಕರಿಂದ ಮತ್ತೊಮ್ಮೆ ಚಪ್ಪಾಳೆ.

ಇವರಂತೆ ಬದುಕಿ
ಚಿತ್ರ ಸಾಹಿತಿ ವಿಜಯೇಂದ್ರ ಪ್ರಸಾದ್‌ ಅವರದ್ದು ಎರಡೇ ವಾಕ್ಯದ ಭಾಷಣ. ಯುವ ಲೇಖಕರಿಗೆ ಕಿವಿಮಾತು ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ, ’ನಾನು ಗಾಂಧೀಜಿಯಿಂದ ಸ್ಫೂರ್ತಿ ಪಡೆದವನು. ನೀವೂ ಅವರಿಂದ ಸ್ಫೂರ್ತಿ ಪಡೆದು ಅವರಂತೆ ಸರಳವಾಗಿ ಬದುಕಿ’ ಎಂದರು. ಕಿಸೆಯಲ್ಲಿದ್ದ ನೂರರ ನೋಟನ್ನು ತೆಗೆದು ಅದರಲ್ಲಿದ್ದ ಗಾಂಧಿ ಚಿತ್ರ ತೋರಿಸಿ ‘ಈ ಗಾಂಧಿ’ಯನ್ನು ಎಂದು ಉಲ್ಲೇಖಿಸಿದಾಗ ಸಭಿಕರಿಂದ ಜೋರಾದ ಕರತಾಡನ.

ಟಾಪ್ ನ್ಯೂಸ್

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

swim

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ

rohit-sharma

ಐಸಿಸಿ ಏಕದಿನ ರ‍್ಯಾಂಕಿಂಗ್‌ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

1-SDSDSDSAD-AA

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

Supreme Court

ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RRR

ಪ್ರಪಂಚದಾದ್ಯಂತ ಧೂಳೆಬ್ಬಿಸುತ್ತಿರುವ ʻRRRʼ ಜಪಾನ್‌ನಲ್ಲಿ ಮಾಡಿದ ಕಲೆಕ್ಷನ್‌ ಎಷ್ಟು?

oscar

ಭಾರತಕ್ಕೆ ಡಬಲ್‌ ಸಂಭ್ರಮ ತಂದ ಆಸ್ಕರ್‌ 95: ಇಲ್ಲಿದೆ ನೋಡಿ ಆಸ್ಕರ್‌ ವಿಜೇತರ ಸಂಪೂರ್ಣ ಪಟ್ಟಿ

ಇಫಿ; ದೊಡ್ಡ ಬದಲಾವಣೆಗಳು ಸುಮ್ಮನೆ ಬರುವುದಿಲ್ಲ, ಕಠಿನ ಸವಾಲುಗಳೊಂದಿಗೆ ಬರುತ್ತದೆ; ಬರ್ನರ್

ಇಫಿ; ದೊಡ್ಡ ಬದಲಾವಣೆಗಳು ಸುಮ್ಮನೆ ಬರುವುದಿಲ್ಲ, ಕಠಿನ ಸವಾಲುಗಳೊಂದಿಗೆ ಬರುತ್ತದೆ; ಬರ್ನರ್

IFFI 53; ಸಿನಿಮಾಕ್ಕೂ ಬಾಲ್ಯಕ್ಕೂ ಬಹಳ ಸಂಬಂಧವಿದೆ…ಬಾಲ್ಯದ ನೆನಪುಗಳೇ ಹಲವು ಸಿನಿಮಾಗಳ ಕಥಾವಸ್ತು

IFFI 53; ಸಿನಿಮಾಕ್ಕೂ ಬಾಲ್ಯಕ್ಕೂ ಬಹಳ ಸಂಬಂಧವಿದೆ…ಬಾಲ್ಯದ ನೆನಪುಗಳೇ ಹಲವು ಸಿನಿಮಾಗಳ ಕಥಾವಸ್ತು

fypha cinema

ಇಫಿ ಗೋವಾ ಚಿತ್ರೋತ್ಸವ-2022: ಏನಿದು ಇಂಟಿಗ್ರೇಡ್ ಸಿನಿಮಾ ವಿಭಾಗ, ವಿಶೇಷತೆ ಏನು?

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

swim

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ

rohit-sharma

ಐಸಿಸಿ ಏಕದಿನ ರ‍್ಯಾಂಕಿಂಗ್‌ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

1-SDSDSDSAD-AA

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.