IFFI 53; ಸಿನಿಮಾಕ್ಕೂ ಬಾಲ್ಯಕ್ಕೂ ಬಹಳ ಸಂಬಂಧವಿದೆ…ಬಾಲ್ಯದ ನೆನಪುಗಳೇ ಹಲವು ಸಿನಿಮಾಗಳ ಕಥಾವಸ್ತು

ನೀರಿನಲ್ಲಿ ಮುಳುಗುತ್ತಿದ್ದ ತನ್ನ ಆಜ್ಜಿಯನ್ನು ರಕ್ಷಿಸಿದ ಕಥೆಯೂ ಒಂದು ಚಿತ್ರದ ಕಥಾವಸ್ತುವಾಗಿದೆ

Team Udayavani, Nov 21, 2022, 12:15 PM IST

IFFI 53; ಸಿನಿಮಾಕ್ಕೂ ಬಾಲ್ಯಕ್ಕೂ ಬಹಳ ಸಂಬಂಧವಿದೆ…ಬಾಲ್ಯದ ನೆನಪುಗಳೇ ಹಲವು ಸಿನಿಮಾಗಳ ಕಥಾವಸ್ತು

ಪಣಜಿ: ಸಿನಿಮಾಕ್ಕೂ ಬಾಲ್ಯಕ್ಕೂ ಬಹಳ ಸಂಬಂಧವಿದೆ. ಹಲವು ಸಿನಿಮಾಗಳ ಕಥಾವಸ್ತುಗಳು ಬಾಲ್ಯದ ನೆನಪುಗಳೇ. ಈ ಬಾರಿಯ ಇಫಿ ಚಿತ್ರೋತ್ಸವದಲ್ಲಿ ಮಕ್ಕಳ ಬಾಲ್ಯ ಮತ್ತು ಮಕ್ಕಳ ಕನಸನ್ನು ಹೇಳುವಂಥ ಆರು ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಯುನಿಸೆಫ್‌ನ ಸಹಯೋಗದಲ್ಲಿ ಬಿತ್ತರಿಸುತ್ತಿರುವ ವಿಭಾಗವಿದು. ಹೇಗೆ ಕನಸುಗಳು, ಛಲ, ಸಾಮರ್ಥ್ಯ ಮಕ್ಕಳ ಬಾಲ್ಯವನ್ನು ರೂಪಿಸುತ್ತವೆ ಹಾಗೂ ಆ ಹೊತ್ತಿನ ಸಾಮಾಜಿಕ ಹಾಗೂ ಆರ್ಥಿಕ ಸನ್ನಿವೇಶಗಳ ಪಾತ್ರವೇನು ಎಂಬುದನ್ನು ಕಟ್ಟಿಕೊಡುವ ಪ್ರಯತ್ನ ಈ ವಿಭಾಗದ್ದು. ಕೆಪರ್‌ನೌಮ್‌ (Capernaum), ನಾನಿ ತೆರಿ ಮೊರ್ನಿ, ಸುಮಿ, ಟು ಫ್ರೆಂಡ್ಸ್‌, ಉಡ್‌ ಜಾ ನನ್ಹೆ ದಿಲ್‌ ಹಾಗೂ ಧನಕ್‌ ಪ್ರದರ್ಶನಗೊಳ್ಳುತ್ತಿರುವ ಆರು ಚಿತ್ರಗಳು. ಇವೆಲ್ಲವೂ ಮಕ್ಕಳಿಗೆ ಸ್ಫೂರ್ತಿ ತುಂಬುವಂಥ ಚಿತ್ರಗಳು.

ಕೆಲವು ಮಕ್ಕಳ ಬಾಲ್ಯದ ಶೌರ್ಯದ ಕಥನವೂ ಈ ಚಿತ್ರಗಳ ಕಥಾವಸ್ತುಗಳಾಗಿವೆ. ಉದಾಹರಣೆಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದ ಬಾಲಕಿಯೊಬ್ಬಳು ನೀರಿನಲ್ಲಿ ಮುಳುಗುತ್ತಿದ್ದ ತನ್ನ ಆಜ್ಜಿಯನ್ನು ರಕ್ಷಿಸಿದ ಕಥೆಯೂ ಒಂದು ಚಿತ್ರದ ಕಥಾವಸ್ತುವಾಗಿದೆ. ಹಾಗೆಯೇ ಸ್ಫೂರ್ತಿ ತುಂಬಬಲ್ಲಂತ ಹಲವು ಕಥೆಗಳಿವೆ. ಸುಮಿ ಅಂಥ ಮತ್ತೊಂದು ಪಾತ್ರ. ಬಡ ಕುಟುಂಬದ ಸುಮಿ ತನ್ನ ಊರಿಂದ ಬಹಳ ದೂರದಲ್ಲಿರುವ ಶಾಲೆಗೆ ಹೋಗಲು ಬೈಸಿಕಲ್‌ ನ್ನು ಹೇಗಾದರೂ ಹೊಂದಬೇಕೆಂಬ ಕನಸು ಹೊಂದುತ್ತಾಳೆ. ಅದನ್ನು ಈಡೇರಿಸಿಕೊಳ್ಳಲು ಹತ್ತಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವೆಲ್ಲವನ್ನೂ ಗೆದ್ದು ಕೊನೆಗೂ ತನ್ನ ಕನಸನ್ನು ಈಡೇರಿಸಿಕೊಳ್ಳುವ ಸುಮಿ ಬದುಕನ್ನಷ್ಟೇ ಗೆಲ್ಲುವುದಿಲ್ಲ ; ಹಲವು ಮಕ್ಕಳಿಗೆ ಮಾದರಿಯಾಗುತ್ತಾಳೆ.

ಮತ್ತೊಂದು ಸಿನಿಮಾ ಇಬ್ಬರು ಗೆಳೆಯರದ್ದು. ಬಾಬ್ರಿ ಮಸೀದಿ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ನಡೆಯುವ ಕಥಾನಕ. ಸಮಾಜದ ಮತಭೇದ ಹೆಚ್ಚುತ್ತಿರುವ ಮಧ್ಯೆಯೂ ಹೇಗೆ ಇಬ್ಬರು ಗೆಳೆಯರು ಹೇಗೆ ಬದುಕುತ್ತಾರೆ, ತಮ್ಮ ಬಾಲ್ಯ, ಜೀವನವನ್ನು ಸ್ವೀಕರಿಸುತ್ತಾರೆ ಎಂಬುದು ಕಥಾವಸ್ತು. ಇದೇ ಮೊದಲ ಬಾರಿಗೆ ಮಕ್ಕಳ ಸಿನಿಮಾ ಎಂಬ ವಿಭಾಗ ಮಾದರಿಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಅಯೋಜನೆ ಮಾಡಲಾಗಿದೆ.

ಟಾಪ್ ನ್ಯೂಸ್

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಟೀಕೆ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.