ಬೆಲೆ ಇಳಿಕೆಗೆ ಕ್ರಮ: ಗೋಧಿ ರಫ್ತು ನಿಷೇಧಿಸಿದ ಭಾರತ, ಈರುಳ್ಳಿ ಬೀಜ ರಫ್ತು ನಿರ್ಬಂಧ ಸಡಿಲಿಕೆ
ಭಾರತದಿಂದ ಗೋಧಿ ರಫ್ತು ವಹಿವಾಟನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ
Team Udayavani, May 14, 2022, 12:16 PM IST
ನವದೆಹಲಿ:ದೇಶದಲ್ಲಿ ಗೋಧಿ ಬೆಲೆ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಗೋಧಿ ರಫ್ತು ಮಾಡುವುದನ್ನು ತಕ್ಷಣ ಜಾರಿಗೆ ಬರುವಂತೆ ಭಾರತ ನಿಷೇಧ ಹೇರಿದ್ದು, ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:‘ಡಿಟೆಕ್ಟಿವ್ ತೀಕ್ಷ್ಣ’ : 7 ಭಾಷೆಗಳಲ್ಲಿ ಪ್ರಿಯಾಂಕಾ ಉಪೇಂದ್ರ ನಟನೆಯ 50ನೇ ಚಿತ್ರ
ಏತನ್ಮಧ್ಯೆ ಪ್ರಕಟಣೆ ಹೊರಡಿಸುವ ಮೊದಲು ಅಥವಾ ನಂತರ ಗೋಧಿ ರಪ್ತು ಸಾಗಣೆಗೆ ಪಾವತಿಯಾಗಿರುವ ವಹಿವಾಟಿಗೆ ಅನುಮತಿ ನೀಡಲಾಗುವುದು ಎಂದು ಮೇ 13ರಂದು ಡಿಜಿಎಫ್ ಟಿ (ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯ) ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಿದೆ.
ಭಾರತದಿಂದ ಗೋಧಿ ರಫ್ತು ವಹಿವಾಟನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ ಎಂದು ಡಿಜಿಎಫ್ ಟಿ ಸ್ಪಷ್ಟಪಡಿಸಿದೆ. ಭಾರತ ಸರ್ಕಾರವು ಇತರ ದೇಶಗಳಿಗೆ ಆಹಾರ ಭದ್ರತೆಯ ಅಗತ್ಯ ಪೂರೈಸಲು ಹಾಗೂ ವಿದೇಶಗಳ ಕೋರಿಕೆ ನೆಲೆಯಲ್ಲಿ ಅನುಮತಿ ನೀಡಲಾಗುವುದು ಎಂದು ವಿವರಿಸಿದೆ.
ಡಿಜಿಎಫ್ ಟಿ ಹೊರಡಿಸಿರುವ ಮತ್ತೊಂದು ಅಧಿಸೂಚನೆಯಲ್ಲಿ ಈರುಳ್ಳಿ ಬೀಜಗಳ ರಫ್ತುಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಕೆ ಮಾಡುವುದಾಗಿ ಘೋಷಿಸಿದೆ. ಈರುಳ್ಳಿ ಬೀಜಗಳ ರಫ್ತು ನೀತಿಯನ್ನು ನಿರ್ಬಂಧಿತ ಕೆಟಗರಿಯಲ್ಲಿ ಈ ಮೊದಲು ಸೇರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್