Hindi Diwas: ಮಾತೃಭಾಷೆ ಜತೆಗೆ ಹಿಂದಿ ಭಾಷೆಯನ್ನೂ ದೇಶದ ಜನರು ಬಳಸಬೇಕು: ಅಮಿತ್ ಶಾ
ಹಿಂದಿಯನ್ನೂ ಹಂತ, ಹಂತವಾಗಿ ಬಳಸಬೇಕು ಎಂದು ದೇಶದ ಜನರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಶಾ ಹೇಳಿದರು.
Team Udayavani, Sep 14, 2021, 12:55 PM IST
ನವದೆಹಲಿ: ದೇಶದ ಜನರು ತಮ್ಮ ಮಾತೃಭಾಷೆಯೊಂದಿಗೆ ಹಿಂದಿ ಭಾಷೆಯನ್ನೂ ಬಳಸುವ ಬಗ್ಗೆ ವಾಗ್ದಾನ ತೆಗೆದುಕೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ (ಸೆ.14) ಮನವಿ ಮಾಡಿಕೊಂಡಿದ್ದು, ಭಾಷೆಗಳ ಜತೆಯಲ್ಲೇ ಭಾರತ ಆತ್ಮನಿರ್ಭರ್ ಆಗಬೇಕಾದ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ:ಈ ಹೆದ್ದಾರಿಯ ಸಂಚಾರವೇ ಒಂದು ಸಾಹಸ : ಇದು ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ
ಹಿಂದಿ ದಿನಾಚರಣೆಯ ಅಂಗವಾಗಿ ಜನರನ್ನು ಉದ್ದೇಶಿಸಿ ಮಾತನಾಡಿಸಿದ ಶಾ, ಆತ್ಮನಿರ್ಭರ್ ಎಂಬುದು ಕೇವಲ ದೇಶೀಯ ಉತ್ಪಾದನೆಗೆ ಮಾತ್ರ ಸಂಬಂಧಿಸಿದ್ದಲ್ಲ. ನಾವು ಭಾಷೆಗಳೊಂದಿಗೆ ಸಹ ಆತ್ಮನಿರ್ಭರ್ ಆಗಿರಬೇಕು. ಒಂದು ವೇಳೆ ಪ್ರಧಾನಿಯವರು ಅಂತಾಷ್ಟ್ರೀಯ ಮಟ್ಟದಲ್ಲಿ ಹಿಂದಿ ಮಾತನಾಡಲು ಸಾಧ್ಯವಾದರೆ, ನಾವು ಇದರಿಂದ ಮುಜುಗರ ಪಡಲು ಏನಿದೆ? ಹಿಂದಿಯಲ್ಲಿ ಮಾತನಾಡುವುದು ಕಳವಳಕಾರಿ ವಿಚಾರ ಎಂಬ ದಿನಗಳು ಕಳೆದುಹೋಗಿದೆ ಎಂದು ಶಾ ಹೇಳಿದರು.
ಭಾರತದ ಪ್ರಗತಿ ಮಾತೃಭಾಷೆ ಮತ್ತು ಅಧಿಕೃತ ಭಾಷೆಯ ಸಮನ್ವಯತೆಯಲ್ಲಿ ಅಡಕವಾಗಿದೆ ಎಂದು ಅಮಿತ್ ಶಾ ತಿಳಿಸಿದರು. ತಾವು ಕೆಲಸ ಮಾಡುವ ಸ್ಥಳಗಳಲ್ಲಿ ತಮ್ಮ, ತಮ್ಮ ಮಾತೃಭಾಷೆ ಜತೆಗೆ ಅಧಿಕೃತ ಭಾಷೆಗಳಲ್ಲಿ ಒಂದಾಗಿರುವ ಹಿಂದಿಯನ್ನೂ ಹಂತ, ಹಂತವಾಗಿ ಬಳಸಬೇಕು ಎಂದು ದೇಶದ ಜನರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಶಾ ಹೇಳಿದರು.
ಮಾತೃಭಾಷೆಯ ಜತೆಗೆ ಅಧಿಕೃತ ಹಿಂದಿ ಭಾಷೆಯನ್ನು ಬಳಸುವುದರಲ್ಲಿ ದೇಶದ ಪ್ರಗತಿ ಅಡಗಿದೆ ಎಂದು ಪ್ರತಿಪಾದಿಸಿರುವ ಶಾ, ಎಲ್ಲರಿಗೂ ಹಿಂದಿ ದಿವಸ ಆಚರಣೆಯ ಶುಭಾಶಯಗಳು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…