ಉರಿಯದ ಬೀದಿದೀಪ : ಕತ್ತಲೆಯಲ್ಲಿ ಬಂಡಿಮಠ ಬಸ್ ನಿಲ್ದಾಣ
ಕುಡುಕರ ಹಾವಳಿ, ಸ್ವಚ್ಛತೆಯ ಕೊರತೆ
Team Udayavani, Mar 10, 2021, 5:40 AM IST
ಕಾರ್ಕಳ: ಸಂಜೆ ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಕಾರ್ಕಳ ಬಂಡಿಮಠ ಬಸ್ನಿಲ್ದಾಣವೂ ಕತ್ತಲಲ್ಲಿ ಮುಳುಗುತ್ತದೆ.
ಹಲವು ಸಮಯಗಳಿಂದ ಬಂಡಿಮಠ ಬಸ್ ನಿಲ್ದಾಣದ ಬೀದಿದೀಪ ಉರಿಯುತ್ತಿಲ್ಲ. ದೀಪಗಳಿಲ್ಲದ್ದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಬಸ್ ನಿಲ್ದಾಣದಲ್ಲಿ ಬಸ್ಗೆ ಕಾಯಲು ಭಯ ಪಡುವಂತಾಗಿದೆ.
ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೆಎಸ್ಆರ್ಟಿಸಿ ಬಸ್ ನಿಲುಗಡೆ ತಾಣವಿದು. ನಿಲ್ದಾಣ ಪುರಸಭೆಯ 5ನೇ ವಾರ್ಡ್ನಲ್ಲಿದೆ. 2011-12ರಲ್ಲಿ 2.18 ಎಕರೆ ಜಾಗವನ್ನು ಬಸ್ ನಿಲ್ದಾಣಕ್ಕೆ ಕಾಯ್ದಿರಿಸಲಾಗಿತ್ತು. 1.78 ಎಕರೆ ವಿಸ್ತೀರ್ಣದಲ್ಲಿ 2 ಕೋ. ರೂ. ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿಗಳನ್ನು ನಡೆಸಿ ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ.
ಇಳಿಸಿದ ಬಳಿಕ ಏರಿಸಿಲ್ಲ
ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಬೆಳಕಿನ ವ್ಯವಸ್ಥೆಗಾಗಿ ಹೈಮಾಸ್ಟ್ ದೀಪ ಅಳವಡಿಸ ಲಾಗಿತ್ತು. ಅದರಲ್ಲಿರುವ ಬಲ್ಬ್ಗಳೆಲ್ಲ ಹಲವು ಸಮಯದಿಂದ ಕೆಟ್ಟು ಹೋಗಿವೆ. ದುರಸ್ತಿಗೆಂದು ಹೈಮಾಸ್ಟ್ ದೀಪದ ಕಂಬದಲ್ಲಿ ಬಲ್ಬ್ಗಳಿರುವ ಯುನಿಟ್ ಅನ್ನು ಕೆಳಗಿಳಿಸಿ ದುರಸ್ತಿ ನಡೆಸದೆ ಹಾಗೆಯೇ ಬಿಡಲಾಗಿದೆ.
ದಿನಕ್ಕೆ 150ಕ್ಕೂ ಅಧಿಕ ಬಸ್ಗಳು ಈ ನಿಲ್ದಾಣಕ್ಕೆ ಬಂದು ಹೋಗುತ್ತವೆ. ತಾಲೂಕು ಕೇಂದ್ರದಿಂದ 3 ಕಿ.ಮೀ. ದೂರದಲ್ಲಿ ಈ ಬಸ್ ನಿಲ್ದಾಣವಿದೆ. ಆದರೆ ಇಲ್ಲಿನ ಪರಿಸರ ಮಾತ್ರ ಪುಂಡರ ತಾಣವಾಗಿದೆ. ಬೆಳಕಿಲ್ಲದೆ ಇರುವುದರಿಂದ ಕತ್ತಲಿನಲ್ಲಿ ನಿಂತು ಬಸ್ ಕಾಯುವ ಪರಿಸ್ಥಿತಿಯಿದೆ. ಹೆಣ್ಣುಮಕ್ಕಳಿಗೆ ಸುರಕ್ಷತೆ ಭೀತಿ ಎದುರಾಗಿದೆ.
ರಾತ್ರಿ ಮದ್ಯ ಸೇವನೆ ಮಾಡಿ ಸುತ್ತಾಡುವುದು, ಸಾರ್ವಜನಿಕ ಸ್ಥಳ ಗಳಲ್ಲಿ ಸಿಗರೇಟು, ಬೀಡಿ ಸೇದುವುದು ಇಲ್ಲಿ ಸಾಮಾನ್ಯವಾಗಿದೆ. ಬಸ್ ನಿಲ್ದಾಣದ ಒಳಗೆ ಕೆಲವರು ಮಲಗಿರುತ್ತಾರೆ.
ಸ್ವಚ್ಛತೆ ಕೊರತೆ
ಬಸ್ ನಿಲ್ದಾಣ ಪರಿಸರದಲ್ಲಿ ಸ್ವಚ್ಛತೆ ಕೊರತೆಯೂ ಕಂಡು ಬರುತ್ತಿದೆ. ಪರಿಸರದ ಅಲ್ಲಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಮದ್ಯದ ಬಾಟಲಿಗಳು ಬಿದ್ದಿವೆ. ಬೀಡಿ, ಸಿಗರೇಟು ತುಂಡುಗಳನ್ನು ಎಸೆಯಲಾಗಿದೆ.
ಲಾಕ್ಡೌನ್ ಬಳಿಕ ಬಸ್ ಸಂಚಾರ ಎಂದಿನಂತೆ ಇದೆ. ಆದರೆ ಬೆಳಕು ಇನ್ನಿತರ ಕೆಲ ಮೂಲ ಸೌಕರ್ಯ ಕೊರತೆಯಿಂದ
ಹೆಣ್ಣುಮಕ್ಕಳು ಇತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ. ಬೆಳಕಿನ ವ್ಯವಸ್ಥೆ ಜತೆಗೆ ರಾತ್ರಿ ಇಲ್ಲಿ ಮದ್ಯ ಸೇವನೆ ಮಾಡುವುದಕ್ಕೆ ನಿಯಂತ್ರಣ ಹೇರಬೇಕಿದೆ ಎನ್ನುತ್ತಾರೆ ಪ್ರಯಾಣಿಕರು.
ಕೊಟೇಶನ್ ಸಿದ್ಧ
ಬಂಡಿಮಠ ಬಸ್ ನಿಲ್ದಾಣದಲ್ಲಿ ಹೈಮಾಸ್ಟ್ ದೀಪ ದುರಸ್ತಿಗೆ ಕೊಟೇಶನ್ ಸಿದ್ಧವಾಗಿದೆ. ದುರಸ್ತಿಗೆಂದು ಕಂಬದಿಂದ ಬಲುºಗಳನ್ನು ಕೆಳಗೆ ಇಳಿಸಲಾಗಿದೆ. ಶೀಘ್ರ ಇದರ ದುರಸ್ತಿ ನಡೆಸಲಾಗುವುದು.
-ಪದ್ಮನಾಭ, ಎಂಜಿನಿಯರ್ , ಪುರಸಭೆ, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ