ಸುಸ್ಥಿರ ಬದುಕಿಗೆ ಮುನ್ನುಡಿ ಬರೆಯುವ ʼಇಂಟರ್ಯಾಕ್ಷನ್ಸ್’

ಇಫಿ ; ಈ ಚಿತ್ರ ಒಟ್ಟು 12 ಕಿರುಚಿತ್ರಗಳ ಒಂದು ಗುಚ್ಛ!

Team Udayavani, Nov 26, 2022, 9:22 PM IST

1-sadsadasd

ಪಣಜಿ: ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ, ಹವಾಮಾನ ವೈಪರೀತ್ಯ, ಪರಿಸರ ಸಂರಕ್ಷಣೆ, ಜಲಮೂಲಗಳ ಸಂರಕ್ಷಣೆ-ಇತ್ಯಾದಿ ಸುಸ್ಥಿರ ಬದುಕಿಗೆ ನಾವೆಲ್ಲರೂ ಮನಸ್ಸು ಮಾಡಿದರೆ ಸೊಗಸಾದ ಮುನ್ನುಡಿ ಬರೆಯಬಹುದು ಎಂಬುದನ್ನು ತೋರಿಸಲೆತ್ನಿಸಿದೆ “ಇಂಟರ್ಯಾಕ್ಷನ್ಸ್”‌ (Interactions)ಚಿತ್ರ.

ಇಫಿ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಚಿತ್ರ ಒಟ್ಟು 12 ಕಿರುಚಿತ್ರಗಳ ಒಂದು ಗುಚ್ಛ. ಆರ್ಟ್‌ ಫಾರ್‌ ದಿ ವರ್ಲ್ಡ್‌ ನಿರ್ಮಿಸಿರುವ ಚಿತ್ರದಲ್ಲಿ ಭಾರತವೂ ಸೇರಿದಂತೆ 12 ವಿವಿಧ ದೇಶಗಳ ಹೆಸರಾಂತ ನಿರ್ದೇಶಕರು ಕಿರುಚಿತ್ರಗಳನ್ನು ಮಾಡಿಕೊಟ್ಟಿದ್ದಾರೆ. ಎಲ್ಲರ ಥೀಮ್‌ ಎಂದರೆ ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಪರಿಹಾರವನ್ನು ಹುಡುಕುವ, ಪರ್ಯಾಯ ದಾರಿಗಳನ್ನು ತೆರೆಯುವ ಪ್ರಯತ್ನ.

ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಭಾರತದ ʼಎಲಿಫೆಂಟ್‌ ಇನ್‌ ದಿ ರೂಮ್‌ʼ(ನಿರ್ದೇಶನ-ನೀಲ್‌ ಮಾಧವ್‌ ಪಾಂಡಾ) ಅವರ ಚಿತ್ರದ ಬಗ್ಗೆ ನಿರ್ಮಾಪಕ ಮನಬಂದೋ ರಥ್‌ ಮಾತನಾಡಿ, ಯಾವುದೇ ಒಂದು ಸಮಸ್ಯೆಗೆ ಪರಿಹಾರ ಹುಡುಕುವ ಮೊದಲು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಸಮಸ್ಯೆಯನ್ನು ಒಂದು ಕೋಣೆಯಲ್ಲಿ ಬಂಧಿಸಿಟ್ಟ ಕೂಡಲೇ ಪರಿಹಾರವಾಗದು. ಆದ ಕಾರಣ, ನಾವೆಲ್ಲರೂ ಒಟ್ಟಿಗೇ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಹಬಾಳ್ವೆಯ ಸಾಧ್ಯತೆಯನ್ನು ಹುಡುಕಬೇಕುʼ ಎಂದು ಹೇಳಿದರು.

ಎಲಿಫೆಂಟ್‌ ಇನ್‌ ದಿ ರೂಮ್‌, ಕೇರಳದ ವಯನಾಡು ಜಿಲ್ಲೆಯ ಒಂದು ಹಳ್ಳಿಯ ಕಥೆ. ಆ ಹಳ್ಳಿ ಎಲಿಫೆಂಟ್‌ ಕಾರಿಡಾರ್‌ ನ ಪ್ರದೇಶ ವ್ಯಾಪ್ತಿಗೆ ಬರುತ್ತಿದ್ದ ಕಾರಣ, ಸ್ಥಳೀಯರೇ ಸುಮಾರು 600 ಕುಟುಂಬಗಳ ವಸತಿ ಪ್ರದೇಶವನ್ನೇ ಬೇರೆಡೆಗೆ ಸ್ಥಳಾಂತರಿಸಿದರು. ಇದೊಂದು ಆರೋಗ್ಯಕರ ಹಾಗೂ ಸೌಹಾರ್ದ ನಡಿಗೆ. ಎರಡು ಸತ್ಯ ಘಟನೆಗಳನ್ನು ಆಧರಿಸಿ ಒಂದು ಕಥೆಯನ್ನು ಹೆಣೆದಿದ್ದೇವೆ. ಬರೀ ಸಮಸ್ಯೆ ಎನ್ನುವುದಕ್ಕಿಂತ ಪರಿಹಾರ ಸಾಧ್ಯತೆಗಳನ್ನು ಹುಡುಕುವುದು ನಮ್ಮ ಪ್ರಯತ್ನʼ ಎಂದರು ಮನಬಂದೋ.

ಇದೇ ರೀತಿ ಜೀವ ವೈವಿಧ್ಯತೆ, ಜಾಗತಿಕ ತಾಪಮಾನ, ಅರಣ್ಯ ನಾಶ, ಪರಿಸರ, ಅಪಾಯದಲ್ಲಿರುವ ಜಲಮೂಲಗಳು-ಇತ್ಯಾದಿ ಸಂಗತಿಗಳ ಬಗ್ಗೆ ಸಿನಿಮಾಗಳಿವೆ. ನೀಲ ಮಾಧವ್‌ ಪಾಂಡಾವಲ್ಲದೇ ಫೌಜಿ ಬೆನಸೈದಿ (Faouzi Bensaïdi) ಕ್ಲೆಮೆಂಟೆ ಬಿಕೊಚಿ(Clemente Bicocchi), ಆನಾ ದಿ ಕರಬುಚಿಯಾ(Anne de Carbuccia), ತಕುಮಾ ಕಿಕೊರೊ(Takumã Kuikuro), ಓಸ್ಕರ್‌ ಮೆಟ್ಸವಹ್ತ್(Oskar Metsavaht), ಎರಿಕ್‌ ನಜರಿಹಾನ್‌(Eric Nazarian), ಬೆಥಿನ್‌ ಒಬೆರ್ಲಿ(Bettina Oberli), ಇದ್ರಿಸಾ ಉದ್ರಗೊ(Idrissa Ouedraogo), ಜನಿಸ್‌ ರಫಾ(Janis Rafa), ಇಸಬೆಲ್ಲಾ ರೊಸೆಲ್ಲಿನಿ(Isabella Rossellini), ಯುಲೆನ್‌ ಒಲೈಜೊಲ(Yulene Olaizola) ಹಾಗೂ ರುಬೆನ್‌ ಇಮಾಜ್(Rubén Imaz) ಸಿನಿಮಾ ನಿರ್ದೇಶಿಸಿದ್ದಾರೆ.

ಜಿಎಐಎಲ್‌ ಕಾರ್ಪೋರೇಟ್‌ ಕಮ್ಯುನಿಕೇಷನ್ಸ್‌ ಮ್ಯಾನೇಜರ್‌ ರೂಪೇಶ್‌ ಕುಮಾರ್‌ ಮಾತನಾಡಿ, ಹವಾ ಬದಲೊ ಎಂಬ ಉಪಕ್ರಮದಡಿ ಪರಿಸರ ಸ್ನೇಹಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದರಡಿ ಈ ಸಿನಿಮಾವೂ ಒಂದು. ಈ ಹಿಂದೆಯೂ ಕೆಲವು ಕಿರುಚಿತ್ರ, ಸಿನಿಮಾಗಳನ್ನುನಿರ್ಮಿಸಲಾಗಿದೆ ಹಾಗೂ ಪ್ರಶಸ್ತಿಯನ್ನೂ ಪಡೆದಿದೆʼ ಎಂದರು.

ಆರ್ಟ್‌ ಫಾರ್‌ ದಿ ವರ್ಲ್ಡ್‌ ನ ಭಾರತೀಯ ಭಾಗದ ಪ್ರೊಡಕ್ಷನ್‌ ಸಲಹೆಗಾರ ಪ್ರತೀಕ್‌ ಮಜುಂದಾರ್ ತಮ್ಮ ಸಂಸ್ಥೆಯ ಕ್ರಮಗಳ ಕುರಿತು ವಿವರಿಸಿದರು.

ಮೊರೊಕ್ಕೊ, ಜಪಾನ್‌, ಅಮೆರಿಕ, ಭಾರತ ಸೇರಿದಂತೆ ಯರೋಪ್‌, ಮಧ್ಯಪ್ರಾಚ್ಯ, ಆಫ್ರಿಕಾ, ಏಷ್ಯಾ, ಲ್ಯಾಟಿನ್‌ ಅಮೆರಿಕ ಸೇರಿದಂತೆ ವಿವಿಧ ಭಾಗದ 12 ದೇಶಗಳು ಈ ಚಿತ್ರ ಯೋಜನೆಯಲ್ಲಿ ಪಾಲ್ಗೊಂಡಿವೆ. ಈ ಚಿತ್ರವು ಅಕ್ಟೋಬರ್‌ ನಲ್ಲಿ ರೋಮ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ವಿಶ್ವಪ್ರೀಮಿಯರ್‌ ಕಂಡಿತ್ತು.

ಟಾಪ್ ನ್ಯೂಸ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಟೀಕೆ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.