IPL 2023: ಡೆಲ್ಲಿ – ಮರಳಿ ಯತ್ನವ ಮಾಡಲಿ…


Team Udayavani, Apr 20, 2023, 7:04 AM IST

DEL POSTER

ಹೊಸದಿಲ್ಲಿ: ಮರಳಿ ಯತ್ನವ ಮಾಡು ಎಂಬ ಉಕ್ತಿಯಂತೆ ಡೇವಿಡ್‌ ವಾರ್ನರ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ಗುರುವಾರ ತನ್ನ 6ನೇ ಪಂದ್ಯವನ್ನು ಆಡಲಿಳಿಯಲಿದೆ. ಗೆಲುವಿನ ಖಾತೆ ತೆರೆಯಲು ಮತ್ತೂಮ್ಮೆ ಪ್ರಯತ್ನಿಸಲಿದೆ. ಎದುರಾಳಿ ತಂಡ ಬಲಿಷ್ಠ ಕೋಲ್ಕತಾ ನೈಟ್‌ರೈಡರ್ ಎಂಬುದು ಡೆಲ್ಲಿಯ ಆತಂಕಕ್ಕೆ ಕಾರಣವಾಗಲೂಬಹುದು.
ಡೆಲ್ಲಿ ಈಗ “ಮಸ್ಟ್‌ ವಿನ್‌” ಸ್ಥಿತಿಯಲ್ಲಿದೆ. ಇನ್ನೊಂದು ಪಂದ್ಯ ಸೋತರೂ ಪ್ಲೇ-ಆಫ್ ಬಾಗಿಲು ಮುಚ್ಚುವ ಅಪಾಯವಿದೆ. ಆದರೆ ತಾನೆಣಿಸಿದಂತೆ ಏನೂ ಆಗದಿರುವುದೇ ಡೆಲ್ಲಿಯ ದೊಡ್ಡ ಸಮಸ್ಯೆಯಾಗಿದೆ. ಉಳಿದ ತಂಡಗಳೆಲ್ಲ ಗರಿಷ್ಠ 4, ಕನಿಷ್ಠ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಡೆಲ್ಲಿ ಮಾತ್ರ ಸೋಲಿನ ನಂಟನ್ನು ಇನ್ನೂ ಕಡಿದುಕೊಂಡಿಲ್ಲ. ಲಕ್ನೋ ವಿರುದ್ಧ 50 ರನ್‌, ಗುಜರಾತ್‌ ವಿರುದ್ಧ 6 ವಿಕೆಟ್‌, ರಾಜಸ್ಥಾನ್‌ ವಿರುದ್ಧ 57 ರನ್‌, ಮುಂಬೈ ವಿರುದ್ಧ 6 ವಿಕೆಟ್‌, ಆರ್‌ಸಿಬಿ ವಿರುದ್ಧ 23 ರನ್‌… ಹೀಗೆ ವಾರ್ನರ್‌ ಪಡೆಯ ಪತನ ಹಾಗೂ ದುರಂತ ಕಥನ ಮುಂದುವರಿಯುತ್ತ ಬಂದಿದೆ.

ಡೆಲ್ಲಿಯ ಗಂಭೀರ ಸಮಸ್ಯೆ ಓಪನಿಂಗ್‌ನಿಂದಲೇ ಶುರುವಾಗುತ್ತದೆ. 2021ರಲ್ಲಿ 479 ರನ್‌, ಕಳೆದ ವರ್ಷ 10 ಪಂದ್ಯಗಳಿಂದ 283 ರನ್‌ ಬಾರಿಸಿದ್ದ ಪೃಥ್ವಿ ಶಾ ಈ ಬಾರಿ ಬ್ಯಾಟಿಂಗೇ ಮರೆತಿದ್ದಾರೆ. ಮಿಚೆಲ್‌ ಮಾರ್ಷ್‌ ಸೊನ್ನೆಯ ನಂಟು ಬಿಟ್ಟಿಲ್ಲ. ಯಶ್‌ ಧುಲ್‌ಗೆ ಯಶಸ್ಸು ಸಿಗುತ್ತಿಲ್ಲ. ಆರ್‌ಸಿಬಿ ವಿರುದ್ಧ 2 ರನ್ನಿಗೆ ಈ ಮೂವರ ವಿಕೆಟ್‌ ಬಿದ್ದಿರುವುದು ಡೆಲ್ಲಿಯ ವೈಫ‌ಲ್ಯವನ್ನು ಬಿಚ್ಚಿಡುತ್ತದೆ. ಇಲ್ಲಿ ಪರಿಹಾರ ಕಾಣದೆ ಡೆಲ್ಲಿಗೆ ಯಶಸ್ಸು ಅಸಾಧ್ಯ.

ಪೃಥ್ವಿ ಶಾ ಬದಲು ಮನೀಷ್‌ ಪಾಂಡೆ ಅಥವಾ ಸಫ‌ìರಾಜ್‌ ಖಾನ್‌ ಅವರನ್ನು ಆರಂಭಿಕನನ್ನಾಗಿ ಕಳುಹಿಸಲು ಡೆಲ್ಲಿ ಯೋಚಿಸುತ್ತಿದೆ. ವಾರ್ನರ್‌ ಒಂದು ಕಡೆ ನಿಂತು ಆಡುವುದರಿಂದ ಇನ್ನೊಂದು ಬದಿಯಲ್ಲಿ ರನ್‌ ಪ್ರವಾಹ ಹರಿದು ಬರಬೇಕಿದೆ. ಡೆಲ್ಲಿಯ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಕೂಡ ಭರವಸೆದಾಯಕವಾಗಿಲ್ಲ. ಅಕ್ಷರ್‌ ಪಟೇಲ್‌ ಮಾತ್ರ ಒಂದಿಷ್ಟು ನಿರೀಕ್ಷೆ ಮೂಡಿಸುತ್ತಿದ್ದಾರೆ.

ಈ ವರ್ಷದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಕೆಕೆಆರ್‌, ಚಾಂಪಿಯನ್‌ ಗುಜರಾತ್‌ ತಂಡಕ್ಕೆ ಆಘಾತವಿಕ್ಕಿದ ಬಳಿಕ ಸತತ 2 ಪಂದ್ಯಗಳಲ್ಲಿ ಮುಗ್ಗರಿಸಿದೆ. ಹೈದರಾಬಾದ್‌ ವಿರುದ್ಧ ತವರಲ್ಲೇ 23 ರನ್ನುಗಳಿಂದ ಹಾಗೂ ಮುಂಬೈ ವಿರುದ್ಧ 5 ವಿಕೆಟ್‌ಗಳಿಂದ ಎಡವಿದೆ. ಹ್ಯಾಟ್ರಿಕ್‌ ಸೋಲಿನಿಂದ ಪಾರಾಗಲು ಕೆಕೆಆರ್‌ ಶತಪ್ರಯತ್ನ ಮಾಡುವುದು ಖಂಡಿತ.

ವೆಂಕಟೇಶ್‌ ಅಯ್ಯರ್‌, ನಾಯಕ ನಿತೀಶ್‌ ರಾಣಾ, ರಿಂಕು ಸಿಂಗ್‌, ರಸೆಲ್‌, ಸುನೀಲ್‌ ನಾರಾಯಣ್‌, ಚಕ್ರವರ್ತಿ ಅವರನ್ನೊಳಗೊಂಡ ಕೆಕೆಆರ್‌ ಡೆಲ್ಲಿಗಿಂತ ಬಲಾಡ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.