14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

2019ರಿಂದ ಸರ್ಕಾರಿ ಅಧಿಕಾರಿಗಳು ಕೆಲಸದ ಅವಧಿ ವೇಳೆ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.

Team Udayavani, Mar 29, 2023, 6:43 PM IST

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

ಟೋಕಿಯೋ: ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ಅಪರಾಧ. ಆದರೆ ಬಹುತೇಕವಾಗಿ ಎಲ್ಲೆಡೆ ರಾಜಾರೋಷವಾಗಿ ಸಿಗರೇಟ್ ಸೇದುತ್ತಿರುವುದು ಸಾಮಾನ್ಯವಾಗಿದೆ. ಇಲ್ಲೊಂದು ಕುತೂಹಲಕಾರಿ ಪ್ರಸಂಗವಿದೆ…ನಾಗರಿಕ ಸೇವೆಯ ಅಧಿಕಾರಿಗಳು ತಮ್ಮ 14 ವರ್ಷದ ಕೆಲಸದ ಅವಧಿಯಲ್ಲಿ 4,500 ಬಾರಿ ಸಿಗರೇಟ್ ಸೇದಿದ್ದು, ಅದರ ಪರಿಣಾಮ ಆ ವ್ಯಕ್ತಿಗೆ ಬರೋಬ್ಬರಿ 11,000(ಅಂದಾಜು 9 ಲಕ್ಷ ರೂ.) ಡಾಲರ್ ದಂಡ ವಿಧಿಸಿರುವ ಘಟನೆ ಜಪಾನ್ ನಲ್ಲಿ ನಡೆದಿದೆ.

ಇದನ್ನೂ ಓದಿ:ಐಸಿಸಿ ಏಕದಿನ ರ‍್ಯಾಂಕಿಂಗ್‌ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ

ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಪ್ರಕಾರ, ಒಸಾಕಾದ ಅಧಿಕಾರಿಗಳು 61 ವರ್ಷದ ಉದ್ಯೋಗಿ ಮತ್ತು ಪ್ರಿಫೆಕ್ಚರ್ ನ ಹಣಕಾಸು ವಿಭಾಗದ ಇಬ್ಬರು ಸಹೋದ್ಯೋಗಿಗಳು ಸೇರಿಕೊಂಡು ಪದೇ, ಪದೇ ಧೂಮಪಾನ ಮಾಡಿದ್ದಕ್ಕೆ ಮೂವರಿಗೂ ಆರು ತಿಂಗಳವರೆಗೆ ಶೇ.10ರಷ್ಟು ವೇತನ ಕಡಿತಗೊಳಿಸಲಾಗಿತ್ತು.

ಕೆಲಸದ ಅವಧಿಯಲ್ಲಿ ಧೂಮಪಾನ ಮಾಡಬಾರದು ಎಂಬ ಹಲವು ಬಾರಿ ಎಚ್ಚರಿಕೆಯ ನಡುವೆಯೂ ಇವರು ಧೂಮಪಾನ ಚಟ ಮುಂದುವರಿಸಿರುವುದಾಗಿ ವರದಿ ವಿವರಿಸಿದೆ. ಏತನ್ಮಧ್ಯೆ 2022ರ ಸೆಪ್ಟೆಂಬರ್ ನಲ್ಲಿ ಮೂವರು ರಹಸ್ಯವಾಗಿ ತಂಬಾಕು ಸಂಗ್ರಹಿಸಿಟ್ಟಿರುವ ಮಾಹಿತಿ ಮಾನವ ಸಂಪನ್ಮೂಲ(ಎಚ್ ಆರ್ ಡಿಪಾರ್ಟ್ ಮೆಂಟ್) ಕಚೇರಿಗೆ ತಲುಪಿತ್ತು. ಆಗ ಹಿರಿಯ ಅಧಿಕಾರಿಗಳು ಮೂವರಿಗೂ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೂ ಮೂವರು ಧೂಮಪಾನ ಮಾಡುವುದನ್ನು ಮುಂದುವರಿಸಿದ್ದರು.

ಜಗತ್ತಿನಲ್ಲಿ ಜಪಾನ್ ನ ಒಸಾಕಾ ನಗರ ಕಟ್ಟುನಿಟ್ಟಾದ ಧೂಮಪಾನ ನಿಗ್ರಹ ಕಾನೂನು ಜಾರಿಗೆ ತಂದಿದೆ. ಅದರನ್ವಯ ಸರ್ಕಾರಿ ಕಚೇರಿ ಆವರಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ಸಂಪೂರ್ಣ ನಿಷೇಧಿಸಲಾಗಿದೆ. 2019ರಿಂದ ಸರ್ಕಾರಿ ಅಧಿಕಾರಿಗಳು ಕೆಲಸದ ಅವಧಿ ವೇಳೆ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.

ವರದಿಯ ಪ್ರಕಾರ, ಇಬ್ಬರನ್ನು ಹೊರತುಪಡಿಸಿ 61ವರ್ಷದ ನಿರ್ದೇಶಕ ಮಟ್ಟದ ಉದ್ಯೋಗಿ ಸ್ಥಳೀಯ ಸಾರ್ವಜನಿಕ ಸೇವಾ ಕಾಯಿದೆಯಡಿ ಕಾನೂನು ಉಲ್ಲಂಘಿಸಿರುವುದಾಗಿ ಪರಿಗಣಿಸಿ, ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ವೇತನ ಕಡಿತದ ಜೊತೆಗೆ 1.44 ಮಿಲಿಯನ್ ಯೆನ್ ಹೆಚ್ಚುವರಿಯಾಗಿ ದಂಡ ತೆರುವಂತೆ ಸೂಚಿಸಲಾಗಿತ್ತು ಎಂದು ತಿಳಿಸಿದೆ.

ಈ ವ್ಯಕ್ತಿ ಕರ್ತವ್ಯದ ಅವಧಿಯಲ್ಲಿ 355 ಗಂಟೆ 19 ನಿಮಿಷಗಳ ಕಾಲ ಧೂಮಪಾನ ಮಾಡಿರುವುದಾಗಿ ಸರ್ಕಾರ ಬಹಿರಂಗಪಡಿಸಿದೆ. ಇದರ ಪರಿಣಾಮ ಬರೋಬ್ಬರಿ 11,000 ಡಾಲರ್ ದಂಡ ತೆರುವಂತಾಗಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

New Parliament Inauguration; ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nato

NATO ಗೆ ಭಾರತ ಸೇರ್ಪಡೆ?

bill gates

ಹಳೆ ಪ್ರೇಮ ಪ್ರಕರಣದಿಂದ Bill Gates ಗೆ ಸಂಕಷ್ಟ!

North Korea: ಬೈಬಲ್‌ ಜತೆ ಸಿಕ್ಕಿಬಿದ್ದ ಪೋಷಕರು, 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!

North Korea: ಬೈಬಲ್‌ ಜತೆ ಸಿಕ್ಕಿಬಿದ್ದ ಪೋಷಕರು & 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!

ಕೆಲ ತಿಂಗಳಿಂದ ನಾಪತ್ತೆಯಾಗಿದ್ದ ಬ್ರೆಜಿಲ್‍ನ ನಟ ಶವವಾಗಿ ಪತ್ತೆ

ಕೆಲ ತಿಂಗಳಿಂದ ನಾಪತ್ತೆಯಾಗಿದ್ದ ಬ್ರೆಜಿಲ್‍ನ ನಟ ಶವವಾಗಿ ಪತ್ತೆ

thumb-1

ವೃದ್ಧನನ್ನು ತಿಂದುಹಾಕಿದ 40 ಮೊಸಳೆಗಳು!

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

New Parliament Inauguration; ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು