ಹರಿವಂಶ್ ವಿರುದ್ಧ JDU ಆಕ್ರೋಶ
Team Udayavani, May 30, 2023, 7:43 AM IST
ಪಟ್ನಾ: ರಾಜ್ಯಸಭೆಯ ಉಪ ಸಭಾಪತಿ ಮತ್ತು ಜೆಡಿಯು ರಾಜ್ಯಸಭಾ ಸದಸ್ಯ ಹರಿವಂಶ ನಾರಾಯಣ ಸಿಂಗ್ ವಿರುದ್ಧ ಪ್ರಬಲ ಆಕ್ರೋಶ ವ್ಯಕ್ತವಾಗಿದೆ. ಅವರು ಹೊಸ ಸಂಸತ್ ಭವನದ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಜೆಡಿಯು ಮುಖಂಡ ನೀರಜ್ ಕುಮಾರ್ ಪ್ರಬಲವಾಗಿ ಆಕ್ಷೇಪಿಸಿದ್ದಾರೆ. ಕಾರ್ಯಕ್ರಮವನ್ನು ಬಹಿಷ್ಕರಿಸಲು ಪಕ್ಷ ನಿರ್ಧರಿಸಿದ್ದರೂ ಅವರು ಭಾಗವಹಿಸಿದ್ದು ಸರಿಯಲ್ಲ ಎಂದು ವಾದಿಸಿದ್ದಾರೆ. ನೀವು ರಾಜ್ಯಸಭೆಯಲ್ಲಿ ಉಪಸಭಾಪತಿಯಾಗಿ ಕರ್ತವ್ಯ ನಿರ್ವಹಿಸುವುದು ಉಪರಾಷ್ಟ್ರಪತಿ ಮತ್ತು ಸಭಾಪತಿ ಜಗದೀಪ್ ಧನ್ಕರ್ ಅನುಪಸ್ಥಿತಿಯಲ್ಲಿ ಮಾತ್ರ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಜೆಡಿಯು ನಿಲುವನ್ನು ಟೀಕಿಸಿ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಜಾಪ್ರಭುತ್ವ ನಿಯಮಗಳನ್ನು ಉಲ್ಲಂ ಸಿದ್ದಾರೆ ಎಂದು ದೂರಿದರು.