ನಾಚಿಕೆಗೇಡು!; ಕೃಷಿ ಕಾಯ್ದೆ ಹಿಂಪಡೆದುದಕ್ಕೆ ನಟಿ ಕಂಗನಾ ಆಕ್ರೋಶ
Team Udayavani, Nov 19, 2021, 6:01 PM IST
ಮುಂಬಯಿ : ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಕುರಿತಾಜಿ ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ತಾಣಗಳಲ್ಲಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, “ಬೇಸರ, ನಾಚಿಕೆಗೇಡು, ಸಂಪೂರ್ಣವಾದ ಅನ್ಯಾಯ. ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದ್ದಾರೆಯೇ ಹೊರತು ಸಂಸತ್ತಿನಲ್ಲಿ ಆಯ್ಕೆ ಮಾಡಿದ ಸರ್ಕಾರವಲ್ಲ, ಹೀಗಾದರೆ ನಮ್ಮದೂ ಕೂಡ ಜಿಹಾದಿ ರಾಷ್ಟ್ರವಾಗಲಿದೆ. ಈ ರೀತಿ ಆಗಬೇಕೆಂದು ಬಯಸಿದ ಎಲ್ಲರಿಗೂ ಅಭಿನಂದನೆಗಳು,” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೊಂದು ಪೋಸ್ಟ್ ನಲ್ಲಿ , ಅವರು ಪ್ರಧಾನಿ ಮೋದಿಯನ್ನು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯೊಂದಿಗೆ ಪರೋಕ್ಷವಾಗಿ ಹೋಲಿಸಿ “ರಾಷ್ಟ್ರದ ಆತ್ಮಸಾಕ್ಷಿಯು ಗಾಢವಾದ ನಿದ್ರೆಯಲ್ಲಿರುವಾಗ, ಲಾಠಿ ಒಂದೇ ಪರಿಹಾರ ಮತ್ತು ಸರ್ವಾಧಿಕಾರವು ಏಕೈಕ ನಿರ್ಣಯವಾಗಿದೆ.. ಜನ್ಮದಿನದ ಶುಭಾಶಯಗಳು ಮೇಡಂ ಪ್ರಧಾನಿ” ಎಂದು ಇಂದಿರಾ ಗಾಂಧಿ ಅವರ ಫೋಟೋದೊಂದಿಗೆ ಬರೆದಿದ್ದಾರೆ.
ಆನಂದ್ ರಂಗನಾಥನ್ ಅವರು ಮಾಡಿರುವ ಟ್ವೀಟ್ ನ ಸ್ಕ್ರೀನ್ ಶಾಟ್ ಅನ್ನು ಕಂಗನಾ ಹಂಚಿಕೊಂಡಿದ್ದು, ಅದರಲ್ಲಿ ‘ಆಘಾತಗೊಂಡಿದ್ದೇನೆ . ಇದು ಹೇಡಿತನದ ಕೃತ್ಯ. ಅಭಿವೃದ್ಧಿಗೆ, ವಿವೇಕಕ್ಕೆ, ಪ್ರಗತಿಗೆ, ಭಾರತಕ್ಕೆ ಅವಮಾನಕರ ಸೋಲು. ನಮ್ಮನ್ನು ದಶಕಗಳ ಹಿಂದೆ ಕರೆದುಕೊಂಡು ಹೋಗುವಲ್ಲಿ ನರೇಂದ್ರ ಮೋದಿ ವಿರೋಧ ಪಕ್ಷಕ್ಕೆ ಸೇರಿದ್ದಾರೆ. ಭಾರತ ಸೋತಿದೆ!, ಅರಾಜಕತೆಗೆ ಜಯವಾಗಿದೆ, ಕೆಟ್ಟ ದಿನಗಳು ಬಂದಿವೆ’ ಎಂದು ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ