ಕೊಟ್ಟೆ ಕಟ್ಟಿ ಬದುಕು ಕಟ್ಟಿಕೊಂಡ ರತ್ನಾವತಿ ಕಾಮತ್‌


Team Udayavani, Apr 3, 2021, 4:00 AM IST

ಕೊಟ್ಟೆ ಕಟ್ಟಿ ಬದುಕು ಕಟ್ಟಿಕೊಂಡ ರತ್ನಾವತಿ ಕಾಮತ್‌

ಕಾರ್ಕಳ: ಬದಲಾಗುತ್ತಿರುವ ಜೀವನ ಶೈಲಿ, ಒತ್ತಡದ ಬದುಕು ಮತ್ತು ಆಹಾರ ಪದ್ಧತಿಯಿಂದ ಮಧ್ಯವಯಸ್ಸಿನಲ್ಲಿಯೇ ಸಾಕಪ್ಪಾ… ಎನ್ನುವ ಹತಾಶ ಮನೋಭಾವನೆ ಹೆಚ್ಚುತ್ತಿರುವ ಈ ಕಾಲದಲ್ಲಿ 80ರ ಆಸುಪಾಸಿನಲ್ಲೂ ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಈ ಅಜ್ಜಿಯ ಬದುಕು ಪ್ರೇರಣಾದಾಯಕವಾಗಿದೆ.

ಕಾರ್ಕಳ ತಾ|ನ ಜಯಂತಿನಗರ ಪುಟ್ಟ ಮನೆಯೊಂದರಲ್ಲಿ ಮಗನ ಜತೆ ವಾಸವಿರುವ ವೃದ್ಧೆ ರತ್ನಾವತಿ ಕಾಮತ್‌ರಿಗೆ ಈಗ ವಯಸ್ಸು 80 ದಾಟಿದೆ. ಪತಿ ನಾರಾಯಣ ಕಾಮತ್‌ ಅವರು ತೀರಿಕೊಂಡು 6 ವರ್ಷಗಳಾಗಿವೆ. ಶ್ರಮ ಜೀವಿ ರತ್ನಾವತಿ ಕಾಮತ್‌ ಅವರಿಗೆ ಓರ್ವ ಪುತ್ರ, ಇಬ್ಬರು ಪುತ್ರಿ ಯ ರು ಸಹಿತ ಮೂರು ಮಂದಿ ಮಕ್ಕಳು. 8 ಸೆಂಟ್ಸ್‌ ಜಾಗದಲ್ಲಿ ಪುತ್ರನ ಜತೆ ಇವರ ವಾಸ. ಮಗ ಸುಬ್ರಹ್ಮಣ್ಯ ಕಾಮತ್‌ ಖಾಸಗಿ ಕೆಲಸಕ್ಕೆ ಹೋಗುತ್ತಿದ್ದಾರೆ.

ಹಸುಗಳ ಸಾಕಣೆಯಿಂದ ಕುಟುಂಬದ ನಿರ್ವಹಣೆಯನ್ನು ನಡೆಸುತ್ತ ಬಂದಿರುವ ವೃದ್ಧೆಗೆ ಮಕ್ಕಳು ನೆರವಾಗುತ್ತಿದ್ದರು. ಹೆಣ್ಣು ಮಕ್ಕಳಿಬ್ಬರಿಗೆ ಮದುವೆಯಾದ ಬಳಿಕ ಹಸು ಸಾಕಣೆ ಬಿಟ್ಟು ಕೈಲಾದಷ್ಟು ಕೊಟ್ಟೆ ಕಟ್ಟುತ್ತಾರೆ. ಇದ ರಿಂದ ಸ್ವಂತ ಖರ್ಚಿಗೆ ತಿಂಗಳಿಗೆ 2-3 ಸಾವಿರದ ರೂ. ವರೆಗೆ ಗಳಿಸುತ್ತಾರೆ.

ಸ್ಫೂರ್ತಿ ಚಿಲುಮೆ
ಶ್ರಮ ಜೀವಿಯಾದ ವೃದ್ಧೆಯ ದೇಹಕ್ಕೆ ವಯಸ್ಸಾಗಿದೆ. ಆದರೇ ಜೀವನೋತ್ಸಾಹ ಕಳೆದುಕೊಂಂಡಿಲ್ಲ. ಮುಪ್ಪಿನ ಸಮಸ್ಯೆ ಬಾಧಿಸಿಲ್ಲ. ಕೆಲವು ಸಂದರ್ಭದಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆ ಎದುರಾಗಿದ್ದು ಬಿಟ್ಟರೆ ಹೆಚ್ಚೇನೂ ಸಮಸ್ಯೆಯಿಲ್ಲ. ನಮ್ಮನ್ನು ಶ್ರಮಜೀವಿಯಾಗಿ ಬೆಳೆಸಿದ ಅಮ್ಮ ಇಂದು ಲವಲವಿಕೆಯಿಂದಲೇ ಸ್ವಾವಲಂಬಿ ಜೀವನ ಮಾಡುತ್ತಿದ್ದಾರೆ. ಅವರಿಗೆ ನಾವೂ ನೆರವಾಗುತ್ತೇವೆ. ಅವರು ಸ್ಫೂರ್ತಿಯ ಚಿಲುಮೆ ಎನ್ನುತ್ತಾರೆ ಪುತ್ರಿ ವೀಣಾ.

ದಿನಕ್ಕೆ 100 ಕೊಟ್ಟೆ ತಯಾರು
ದೇಹದಲ್ಲಿ ಶಕ್ತಿ ಇರುವಷ್ಟು ದಿನ ಸ್ವಾವಲಂಬಿಯಾಗಿ ಬದುಕುವೆ ಎನ್ನುವ ಧೋರಣೆ ರತ್ನಾವತಿಯವರದ್ದು. ಇದಕ್ಕಾಗಿ ಅವರು ಮನೆ ಕೆಲಸಗಳ ಜತೆಗೆ ಕೊಟ್ಟೆ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ದಿನಕ್ಕೆ 50ರಿಂದ 100ರ ತನಕ ಕೊಟ್ಟೆ ಕಟ್ಟಿ ಮಾರಾಟ ಮಾಡುತ್ತಾರೆ. ಮೊದಲೆಲ್ಲ ಕಡ್ಡಿ ಮತ್ತು ಹಲಸಿನ ಎಲೆಗಳನ್ನು ತರಲು ಅವರೇ ಹೋಗುತ್ತಿದ್ದರು. ಈಗ ಮಕ್ಕಳು ತಂದು ಕೊಟ್ಟು ಸಹಕರಿಸುತ್ತಿದ್ದಾರೆ.

ಟಾಪ್ ನ್ಯೂಸ್

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.