ಕತ್ರಿನಾ ಕಲ್ಯಾಣ: ವಿಕ್ಕಿ ಜತೆ ಬಾಲಿವುಡ್ ಬೆಡಗಿಯ ಹೊಸ ಜೀವನ
Team Udayavani, Dec 8, 2021, 5:11 PM IST
ಜೈಪುರ: ಬಾಲಿವುಡ್ ಪ್ರಖ್ಯಾತ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಡಿಸೆಂಬರ್ 9 ರಂದು ಸವಾಯಿ ರಾಜಸ್ಥಾನದ ಮಾಧೋಪುರದ ಐಷಾರಾಮಿ ಹೋಟೆಲ್ನಲ್ಲಿ ಹೊಸ ಬಾಳಿಗೆ ಕಾಲಿಡಲಿದ್ದಾರೆ.
ಬುಧವಾರ ತಮ್ಮ ಕುಟುಂಬ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರಿಗಾಗಿ ಹಳದಿ ಮತ್ತು ಸಂಗೀತ ಸಮಾರಂಭವನ್ನು ಆಯೋಜಿಸಿದ್ದಾರೆ.
ಜೋಡಿಯ ಮೂರು ದಿನಗಳ ವಿವಾಹ ಸಂಭ್ರಮೋತ್ಸವ ಮಂಗಳವಾರ ಹೋಟೆಲ್ ಆಗಿ ಪರಿವರ್ತಿಸಲಾಗಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ನಡೆದ ಮೆಹೆಂದಿ ಸಮಾರಂಭದೊಂದಿಗೆ ಪ್ರಾರಂಭವಾಗಿದೆ.
38 ವರ್ಷದ ಕತ್ರಿನಾ ಮತ್ತು 33 ರ ಹರೆಯದ ಕೌಶಲ್ ಒಂದು ವರ್ಷಕ್ಕೂ ಹೆಚ್ಚು ಕಾಲ ಡೇಟಿಂಗ್ ಮಾಡಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಮೂಲಗಳ ಪ್ರಕಾರ, ಮೂರೂ ದಿನದ ಸಮಾರಂಭಗಳು ಖಾಸಗಿ ಕಾರ್ಯಕ್ರಮಗಳಾಗಿದ್ದು,ಮದುವೆ, ಹಳದಿ ಮತ್ತು ಸಂಗೀತ್ ಕಾರ್ಯಕ್ರಮ ಕೂಡ ತಮ್ಮ ಹತ್ತಿರದ ಕುಟುಂಬ ಮತ್ತು ಆತ್ಮೀಯ ಸ್ನೇಹಿತರ ವಲಯದವರು ಮಾತ್ರ ಪಾಲ್ಗೊಳ್ಳಲಿದ್ದಾರೆ.
ವಿವಾಹದ ವ್ಯವಸ್ಥೆಗಳು ಮತ್ತು ಅತಿಥಿಗಳ ಪಟ್ಟಿಯ ಗೌಪ್ಯತೆ ಕಾಪಾಡಲಾಗಿದ್ದು,ಕತ್ರಿನಾ ಆತ್ಮೀಯ ಚಲನಚಿತ್ರ ನಿರ್ಮಾಪಕ ಕಬೀರ್ ಖಾನ್, ಮಿನಿ ಮಾಥುರ್, “ಧೂಮ್ 3” ಮತ್ತು “ಥಗ್ಸ್ ಆಫ್ ಹಿಂದೂಸ್ತಾನ್ನ ನಿರ್ದೇಶಕ ವಿಜಯ್ ಕೃಷ್ಣ ಸೇರಿದಂತೆ ದಂಪತಿಗಳ ನಿಕಟ ಸ್ನೇಹಿತರು ದಂಪತಿಗಳಾದ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಮದುವೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಕೊರೊನ ಕಾರಣದಿಂದ ಅತಿಥಿಗಳ ಸಂಖ್ಯೆಯನ್ನು ಮಿತಿಗೊಳಿಸಿದ್ದು, ದಂಪತಿಗಳು ತಮ್ಮ ಉದ್ಯಮದ ಸ್ನೇಹಿತರೊಂದಿಗೆ ಕೆಲ ದಿನಗಳ ನಂತರ ಆರತಕ್ಷತೆಯನ್ನ ಆಚರಿಸಲು ಮುಂದಾಗಿದ್ದಾರೆ.
ಮೆಹಂದಿ ಸಮಾರಂಭಕ್ಕಾಗಿ , ಸುಮಾರು 20 ಕೆಜಿಯಷ್ಟು ಸಾವಯವ ಮೆಹಂದಿ ಪುಡಿಯನ್ನು ರಾಜಸ್ಥಾನದ ಪಾಲಿ ಜಿಲ್ಲೆಯ ಸೋಜತ್ ಪಟ್ಟಣದಿಂದ ತರಿಸಿಕೊಳ್ಳಲಾಗಿದೆ. ಮೆಹಂದಿ ಪುಡಿಯಲ್ಲದೆ, 400 ಮೆಹೆಂದಿ ಕೋನ್ಗಳನ್ನು ಸಹ ತರಲಾಗಿದೆ ಎಂದು ತಿಳಿದು ಬಂದಿದೆ.
ಐಷಾರಾಮಿ ಹೋಟೆಲ್ ನಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಬೌನ್ಸರ್ಗಳ ಭದ್ರ ಕೋಟೆಯೊಳಗೆ ಮದುವೆಯ ಆಚರಣೆಗಳು ನಡೆಯುತ್ತಿದೆ.
ಸ್ಥಳೀಯ ಪೊಲೀಸರನ್ನೂ ಕೂಡ ಭದ್ರತೆಗೆ ನಿಯೋಜಿಸಲಾಗಿದೆ.
ಮದುವೆಯಲ್ಲಿ ಯಾರೊಬ್ಬ ಆಹ್ವಾನಿತರಿಗೆ ಫೋಟೋ ತೆಗೆಯಲು ಅವಕಾಶ ನೀಡಲಾಗಿಲ್ಲ, ದಂಪತಿಗಳು ಮದುವೆಯ ವಿಡಿಯೋ ಮತ್ತು ಫೋಟೋಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ
Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್ʼ
“ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್ ಜೊತೆ ಬೇಬೋ ನಟಿಸೋದು ಪಕ್ಕಾ?
ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ
ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು
MUST WATCH
ಹೊಸ ಸೇರ್ಪಡೆ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್