ಕೋಲ್ಕತಾ ನೈಟ್‌ರೈಡರ್ -ಸನ್‌ರೈಸರ್ ಹೈದರಾಬಾದ್‌: ಹ್ಯಾಟ್ರಿಕ್‌ ಗೆಲುವಿನತ್ತ KKR ದೃಷ್ಟಿ


Team Udayavani, Apr 14, 2023, 8:09 AM IST

KKR-SRH

ಕೋಲ್ಕತಾ: ರಿಂಕು ಸಿಂಗ್‌ ಅವರ ಅದ್ಭುತ ಬ್ಯಾಟಿಂಗ್‌ ವೈಭವದಿಂದ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡಿರುವ ಕೋಲ್ಕತಾ ನೈಟ್‌ರೈಡರ್ಸ್‌ ತಂಡವು ಶುಕ್ರವಾರ ಇಲ್ಲಿ ನಡೆ ಯಲಿರುವ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಎದುರಿಸಲಿದ್ದು ಹ್ಯಾಟ್ರಿಕ್‌ ವಿಜಯದ ಗುರಿಯನ್ನು ಇಟ್ಟುಕೊಂಡಿದೆ.
ಪಂಜಾಬ್‌ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲಿ ಮಳೆಯ ಕಾರಣ ಸೋಲನ್ನು ಕಂಡಿದ್ದ ಕೆಕೆಆರ್‌ ತಂಡವು ಆಬಳಿಕ ಇಬ್ಬರು ಆಟಗಾರರ ಅಸಾಮಾನ್ಯ ಬ್ಯಾಟಿಂಗ್‌ ವೈಭವದಿಂದ ಗೆಲುವಿಗೆ ಟ್ರ್ಯಾಕ್‌ಗೆ ಮರಳಿದೆ. ಸತತ ಎರಡು ಪಂದ್ಯಗಳಲ್ಲಿ ಗೆದ್ದಿರುವ ಕೆಕೆಆರ್‌ ತನ್ನ ಗೆಲುವಿನ ಅಭಿಯಾನವನ್ನು ಇನ್ನಷ್ಟು ಹೆಚ್ಚಿಸುವ ಉತ್ಸಾಹದಲ್ಲಿದೆ.

ಶಾದೂìಲ್‌ ಠಾಕುರ್‌ ಕೂರ್‌ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ತಂಡವು ಬೆಂಗಳೂರು ತಂಡವನ್ನು ಸೋಲಿಸಿ ಅಚ್ಚರಿಗೊಳಿಸಿತು. ಕೇವಲ 29 ಎಸೆತಗಳಲ್ಲಿ 68 ರನ್‌ ಸಿಡಿಸಿದ ಅವರು ತಂಡಕ್ಕೆ 81 ರನ್ನುಗಳ ಭರ್ಜರಿ ಗೆಲುವು ಒದಗಿಸಿದ್ದರು. ಈ ಹಿಂದಿನ ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದಾಗಿ ಕೆಕೆಆರ್‌ ಅಸಾಮಾನ್ಯ ಗೆಲುವು ದಾಖಲಿಸಿತ್ತು. ಅಂತಿಮ ಓವರಿನಲ್ಲಿ ಸತತ 5 ಸಿಕ್ಸರ್‌ ಸಹಿತ ಒಟ್ಟು 31 ರನ್‌ ಪೇರಿಸಿ ಜಯ ತಂದುಕೊಟ್ಟರು.

ಎರಡು ಬಾರಿಯ ಚಾಂಪಿಯನ್‌ ಆಗಿರುವ ಕೆಕೆಆರ್‌ ಈಗಾಗಲೇ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ಅನುಭವಿ ಶಕಿಬ್‌ ಅಲ್‌ ಹಸನ್‌ ಅವರ ಅನುಪಸ್ಥಿತಿಯನ್ನು ಎದುರಿಸುತ್ತಿದೆ. ಆದರೆ ಸಾಮಾನ್ಯ ಆಟಗಾರರಿಬ್ಬರು ಅದ್ಭುತವಾಗಿ ಆಡುವ ಮೂಲಕ ಕೆಕೆಆರ್‌ ಬಲಿಷ್ಠ ತಂಡವಾಗಿ ರೂಪುಗೊಳ್ಳುತ್ತಿದೆ. ಇನ್ನು ತಂಡದ ಸ್ಟಾರ್‌ ಹಿಟ್ಟರ್‌ ಆ್ಯಂಡ್ರೆ ರಸೆಲ್‌ ಮತ್ತು ನಾಯಕ ನಿತೀಶ್‌ ರಾಣಾ ಅವರು ಮಿಂಚಿದರೆ ತಂಡ ಇನ್ನಷ್ಟು ಅಪಾಯಕಾರಿ ಆಗುವುದರಲ್ಲಿ ಸಂಶಯವಿಲ್ಲ.

ಕಳೆದ ಮೂರು ಪಂದ್ಯಗಳಲ್ಲಿ ಕೆಕೆಆರ್‌ ಆರಂಭಿಕರ ನ್ನಾಗಿ ಬೇರೆ ಬೇರೆ ಆಟಗಾರರನ್ನು ಆಡಿಸಿತ್ತು. ಹೈದ ರಾಬಾದ್‌ ವಿರುದ್ದ ರಹಮನುಲ್ಲ ಗುರ್ಬಾಜ್‌ ಅವರ ಬದಲಿಗೆ ಇಂಗ್ಲೆಂಡಿನ ಆರಂಭಿಕ ಆಟಗಾರ ಜೇಸನ್‌ ರಾಯ್‌ ಅವರನ್ನು ಸೇರ್ಪಡೆ ಗೊಳಿಸುವ ಸಾಧ್ಯತೆಯಿದೆ. ಅಘಾ^ನಿಸ್ಥಾನದ ಗುರ್ಬಾಜ್‌ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಹೊಡೆದಿದ್ದರು.

ಹೈದರಾಬಾದ್‌ ಬಲಷ್ಠ
ಐಡೆನ್‌ ಮಾರ್ಕ್‌ರಮ್‌ ಅವರ ನಾಯಕತ್ವದ ಸನ್‌ರೈಸರ್ ಹೈದರಾ ಬಾದ್‌ ತಂಡವು ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಹ್ಯಾರಿ ಬ್ರೂಕ್‌, ಮಾಯಾಂಕ್‌ ಅಗರ್ವಾಲ್‌ ಮತ್ತು ಹೆನ್ರಿಚ್‌ ಕ್ಲಾಸನ್‌ ತಂಡದ ಖ್ಯಾತ ಆಟಗಾರರಾಗಿದ್ದಾರೆ. ನುರಿತ ಆಟ ಗಾರರಿದ್ದರೂ ಮೊದಲೆರಡು ಪಂದ್ಯ ಗಳಲ್ಲಿ ತಂಡ ಉತ್ತಮ ಆಟ ಪ್ರದರ್ಶಿ ಸಲು ವಿಫ‌ಲವಾಗಿತ್ತು. ಆದರೆ ರಾಹುಲ್‌ ತ್ರಿಪಾಠಿ ಅವರ ಅಜೇಯ 74 ರನ್‌ ನೆರವಿನಿಂದ ತಂಡವು ಈ ಹಿಂದಿನ ಪಂದ್ಯದಲ್ಲಿ ಪಂಜಾಬ್‌ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಲು ಯಶಸ್ವಿಯಾಗಿತ್ತು.

ಈ ಗೆಲುವಿನಿಂದ ಉತ್ತೇಜಿತವಾಗಿ ರುವ ಲಾರಾ ಅವರಿಂದ ಮಾರ್ಗದರ್ಶನ ಪಡೆದ ಹೈದರಾಬಾದ್‌ ತಂಡವು ಕೆಕೆಆರ್‌ ತಂಡವನ್ನು ಸೋಲಿಸಿ ಗೆಲುವಿನ ಟ್ರ್ಯಾಕ್‌ನಲ್ಲಿ ಮುಂದುವರಿಯಲು ಹಾತೊರೆಯುತ್ತಿದೆ. ಬ್ರೂಕ್‌, ಕ್ಲಾಸೆನ್‌ ಸಹಿತ ತ್ರಿಪಾಠಿ ಅವರ ಬ್ಯಾಟಿಂಗ್‌ ಬಲದಿಂದ ಹೈದರಾಬಾದ್‌ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದೆ. ಮಧ್ಯಮ ಕ್ರಮಾಂಕದಲ್ಲಿ ತ್ರಿಪಾಠಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಲಿದ್ದಾರೆ. 13.25 ಕೋಟಿ ರೂ. ನೀಡಿ ಖರೀದಿಸಿದ್ದ ಬ್ರೂಕ್‌ ಈವರೆಗಿನ ಪಂದ್ಯಗಳಲ್ಲಿ ಕೇವಲ 13, 3 ಮತ್ತು 13 ರನ್‌ ಹೊಡೆದಿದ್ದಾರೆ. ಅವರಿಂದ ಭರ್ಜರಿ ಆಟದ ನಿರೀಕ್ಷೆಯಲ್ಲಿ ಹೈದರಾಬಾದ್‌ ಇದೆ.
ತಂಡದ ಬೌಲಿಂಗ್‌ ಪಡೆ ಉತ್ತಮ ವಾಗಿದೆ. ವಾಷಿಂಗ್ಟನ್‌ ಸುಂದರ್‌, ಮಾಯಾಂಕ್‌ ಮಾರ್ಕೆಂಡೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಮಾರ್ಕೆಂಡೆ ಈ ಹಿಂದಿನ ಪಂದ್ಯದಲ್ಲಿ 15 ರನ್ನಿಗೆ 4 ವಿಕೆಟ್‌ ಹಾರಿಸಿದ ಸಾಧನೆ ಮಾಡಿದ್ದರು. ಭುವನೇಶ್ವರ್‌ ಕುಮಾರ್‌ ಮತ್ತು ಮಾರ್ಕೊ ಜಾನ್ಸೆನ್‌ ವೇಗದ ದಾಳಿಯ ನೇತೃತ್ವ ವಹಿಸಲಿದ್ದಾರೆ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.