ಕುಂದಾಪುರ: ನಾಲ್ಕೇ ದಿನಕ್ಕೆ ಮುರಿದು ಬಿದ್ದ ಸಂಬಂಧ- ಪತ್ನಿ ವಿರುದ್ಧ ದೂರು!
Team Udayavani, Jul 13, 2023, 8:22 PM IST
ಶಂಕರನಾರಾಯಣ (ಕುಂದಾಪುರ): ಮನೆಯವರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಮದುವೆಯಾದ ಯುವತಿ ಪತಿ ಮತ್ತು ಆತನ ಕುಟುಂಬದವರಿಗೆ ವಂಚಿಸಿದ ಘಟನೆ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಸಂಪಿಗೇಡಿ ಉಳ್ಳೂರು 74 ರ ನಿವಾಸಿ ಸಂಕೇತ್ ಶೆಟ್ಟಿ (31) ಸ್ಪೂರ್ತಿ ಶೆಟ್ಟಿ ಅವರನ್ನು ಮೇ. 21ರಂದು ವಿವಾಹವಾಗಿದ್ದರು. ವಿವಾಹದ ಬಳಿಕ ಕೇವಲ 4 ದಿನ ಮಾತ್ರ ಮನೆಯಲ್ಲಿ ಇದ್ದ ಸ್ಪೂರ್ತಿ ಶೆಟ್ಟಿ ಆ ಬಳಿಕ ಆಕೆ ಪದೇ ಪದೇ ತವರು ಮನೆಗೆ ಹೋಗುತ್ತಿದ್ದರು. ಈ ಬಗ್ಗೆ ಪತಿಯ ಕಡೆಯವರು ವಿಚಾರಿಸಿದಾಗ ತಾನು ಮನೆಯವರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಮದುವೆಯಾಗಿದ್ದು, ತನಗೆ ಹೊಂದಾಣಿಕೆ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕು ಎಂದು ತಿಳಿಸಿದ್ದಾರೆ. ಅದಕ್ಕೆ ಪತಿ ಸಂಕೇತ್ ಶೆಟ್ಟಿ ಒಪ್ಪಿಗೆ ಸೂಚಿಸಿದ್ದರು.
ದಿನ ಕಳೆದಂತೆ ಆಕೆ ಯಾರೊಂದಿಗೋ ಮೊಬೈಲ್ನಲ್ಲಿ ಮಾತನಾಡುತ್ತಿರುವುದು, ವೀಡಿಯೋ ಕಾಲಿಂಗ್ ಮಾಡುವುದನ್ನು ಗಮನಿಸಿದ ಪತಿ ವಿಚಾರಿಸಿದಾಗ ನಾನು ನವೀನ್ ಎಂಬಾತನನ್ನು ಇಷ್ಟ ಪಟ್ಟಿದ್ದೆ. ಆತನನ್ನು ಮದುವೆಯಾಗಲು ಬಯಸಿದ್ದೆ. ಈ ವಿಷಯ ಮನೆಯವರಿಗೂ ಗೊತ್ತಿತ್ತು ಎಂದು ತಿಳಿಸಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಕೇತ್ ಶೆಟ್ಟಿ ನಿನಗೆ ಈಗ ಮದುವೆಯಾಗಿದ್ದು ಇನ್ನು ಆ ರೀತಿ ಇರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸಂಕೇತ್ ಶೆಟ್ಟಿ ಆಕೆಯ ಮನೆಯವರಲ್ಲಿ ತಿಳಿಸಿದಾಗ ಆಕೆ ಹೇಳಿದಂತೆ ನೀನು ಇದ್ದುಬಿಡು. ಇಲ್ಲವಾದರೆ ನೀನು ಆಕೆಗೆ ಹಿಂಸೆ ನೀಡಿದ್ದೀಯಾ ಎಂದು ಕೇಸು ನೀಡಿ ಜೈಲಿಗಟ್ಟುತ್ತೇವೆ ಎಂದು ಬೆದರಿಸಿದ್ಧಾರೆ. ಆ ಬಳಿಕ ಸ್ಪೂರ್ತಿ ಶೆಟ್ಟಿ ಮದುವೆ ಸಂದರ್ಭದಲ್ಲಿ ತನಗೆ ನೀಡಿದ್ದ 10 ಲಕ್ಷ ಮೌಲ್ಯದ ಚಿನ್ನ, ವಜ್ರದ ಆಭರಣಗಳ ಸಮೇತ ಗಂಡನ ಮನೆ ಮನೆ ತೊರೆದಿದ್ದಾರೆ.
ಈ ಕುರಿತು ಸಂಕೇತ್ ಶೆಟ್ಟಿ ಅವರು ಪತ್ನಿ ಸ್ಪೂರ್ತಿ ಶೆಟ್ಟಿ ಮತ್ತು ಆಕೆಯ ಮನೆಯವರ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: 26/11 ಬೆದರಿಕೆ; ಸೀಮಾ ಹೈದರ್ ಹಿಂತಿರುಗದಿದ್ದರೆ…: ಮುಂಬೈ ಪೊಲೀಸರಿಗೆ ಉರ್ದು ಕರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ