ಬೈಕ್ ಗೆ ಕಾರು ಢಿಕ್ಕಿ: ಮೂವರು ಸವಾರರಿಗೆ ಗಾಯ ; ಮಾನವೀಯತೆ ಮೆರೆದ ತಹಶೀಲ್ದಾರ್
Team Udayavani, Mar 2, 2023, 7:30 PM IST
ಕುಷ್ಟಗಿ: ಇಲ್ಲಿನ ತಹಶೀಲ್ದಾರ ಕಚೇರಿ ಸಮೀಪ ಗುರುವಾರ ಸಂಜೆ ಕಾರು ಢಿಕ್ಕಿಯಾಗಿ ಬೈಕ್ ಸವಾರ ಮೂವರು ಯುವಕರಿಗೆ ಗಾಯ ಗೊಂಡಿದ್ದಾರೆ. ಗಾಯಾಳುಗಳು ನರಳಾಡುವ ಸಂದರ್ಭದಲ್ಲಿ ಕುಷ್ಟಗಿ ತಹಶೀಲ್ದಾರ ಅವರು, ತಮ್ಮ ಜೀಪಿನಲ್ಲಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
ಮೂವರು ಯುವಕರು ಚಳಗೇರಾದಿಂದ ಒಂದೇ ಬೈಕಿನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದರು. ಇದೇ ವೇಳೆ ಕಾರು ಚಾಲಕನ ನಿರ್ಲಕ್ಷ ಚಾಲನೆಯಿಂದ ಮುಂದೆ ಹೋಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಾಗ ಬಿದ್ದು ಗಾಯಗೊಂಡಿದ್ದಾರೆ. 108 ವಾಹನ ಬರಲು ವಿಳಂಭವಾಗಿದೆ. ಅದೇ ವೇಳೆ ನಿಡಶೇಸಿ ಗ್ರಾಮಕ್ಕೆ ಸ್ಥಳದ ಸ್ಥಾನಿಕ ಪರಿಶೀಲನೆಗೆ ಹೊರಟಿದ್ದ ತಹಶೀಲ್ದಾರ ಕೆ. ರಾಘವೇಂದ್ರರಾವ್ ಅವರು, ಕೂಡಲೇ ತಮ್ಮ ಜೀಪಿನಲ್ಲಿ ಮೂವರು ಗಾಯಾಳುಗಳನ್ನು ಕುಷ್ಟಗಿ ತಾಲೂಕಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆಗೆ ಕರೆದೊಯ್ಯಲಾಗಿದೆ.
ಮೂವರು ಯುವಕರು ಹುಲಿಯಾಪೂರ ಗ್ರಾಮದ ರಾಜೇಸಾಬ್ ಯಮನೂರಸಾಬ್ ತಾವರಗೇರಾ, ಕಾಶೀಂಸಾಬ್ ಚಂದುಸಾಬ್ ಬೋಗಾಪೂರ ಹಾಗೂ ಕುಮಾರ ದೇವಪ್ಪ ಕಂಪ್ಲಿ ಎಂದು ಗುರುತಿಸಲಾಗಿದ್ದು, ಜೂಲಕಟ್ಟಿ ಗ್ರಾಮದ ಬಳಿ ಸರ್ಕಾರಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗಿ ಸ್ವಗ್ರಾಮಕ್ಕೆ ವಾಪಸ್ಸಾಗುವ ವೇಳೆ ಈ ದುರ್ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ