ರೈಲ್ವೇ ಟ್ಯಾಂಕರ್ನಲ್ಲಿ ಗ್ಯಾಸ್ ಸಾಗಾಟದ ವೇಳೆ ಸೋರಿಕೆ; ವಾಪಸ್ ನಿಲ್ದಾಣಕ್ಕೆ
Team Udayavani, Mar 11, 2023, 5:28 AM IST
ಸುರತ್ಕಲ್: ಇಲ್ಲಿನ ಎಚ್ಪಿಸಿಎಲ್ನಿಂದ ರೈಲ್ವೇ ಟ್ಯಾಂಕರ್ ಮೂಲಕ ಗ್ಯಾಸ್ ಸಾಗಾಟದ ವೇಳೆ ಸೋರಿಕೆಯಾದ ಬಗ್ಗೆ ವರದಿಯಾಗಿದ್ದು, ತತ್ಕ್ಷಣ ಟ್ಯಾಂಕರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಏಳೆಂಟು ಕಿಮೀ ಸಾಗಿದ ಮೇಲೆ ಇದು ಗಮನಕ್ಕೆ ಬಂದಿದ್ದು, ರೈಲು ನಿಲ್ದಾಣಕ್ಕೆ ವಾಪಸ್ ಬಂದಿದೆ. ಆ ಸಂದರ್ಭ ಜೋಕಟ್ಟೆ ರೈಲ್ವೇ ಗೇಟ್ ಬಳಿ ಜನರನ್ನು ದೂರ ಸರಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಅಗ್ನಿಶಾಮಕ ದಳದ ಒಂದು ವಾಹನವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಸ್ವಲ್ಪ ಕಾಲ ಜೋಕಟ್ಟೆ ಸುತ್ತಮುತ್ತ ಆತಂಕದ ವಾತಾವರಣ ಕಂಡು ಬಂತು ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!