ಅಂಧರ ಲಿಪಿಯ ಹರಿಕಾರ ಲೂಯಿ ಬ್ರೈಲ್‌

ಇಂದು ವಿಶ್ವ  ಬ್ರೈಲ್‌‌ ದಿನ

Team Udayavani, Jan 4, 2021, 6:10 AM IST

ಅಂಧರ ಲಿಪಿಯ ಹರಿಕಾರ ಲೂಯಿ ಬ್ರೈಲ್‌

ನಾ ಕಾಣೋ ಲೋಕವನ್ನು ಕಾಣೋರು ಯಾರೋ…? ಬಾಹ್ಯದ ದೃಷ್ಟಿ ಗೋಚರಿಸದಿದ್ದರೂ ಅಂತರಂಗದ ದಿವ್ಯ ದೃಷ್ಟಿಯೊಳಗೆ ಕಾಣುವ ಲೋಕವನ್ನು ಅಂಧ ನೊಬ್ಬ ಬಣ್ಣಿಸುವ ಬಗೆ ಇದಾಗಿದೆ. ಅಂಧರ ಹೊರ ಗಣ್ಣು ಮಸುಕಾಗಿದ್ದರೂ ಅಂತರಂಗದ ಕಣ್ಣು ಸದಾ ಬೆಳಕಿನತ್ತಲೇ ಹಾತೊರೆಯುತ್ತಿರುತ್ತದೆಯಂತೆ. ಅಂಧ ರಿಗೆ ಅಂಥ ಬೆಳಕಿನ ಹಾದಿ ತೋರಿದ ಮಹಾನುಭಾವ ಲೂಯಿ ಬ್ರೈಲ್‌‌ ಅವರನ್ನು ನೆನಪಿಸುವ ದಿನವೇ ವಿಶ್ವ ಬ್ರೈಲ್‌ ದಿನ.

ಪ್ರತಿಯೊಬ್ಬ ಮಹಾಸಾಧಕನ ಹಿಂದೆ ಆತನ ಜೀವನಾನುಭವ ಇದ್ದೇ ಇರುತ್ತದೆ. ಲೂಯಿ ಬ್ರೆ„ಲ್‌ ಜೀವನದಲ್ಲೂ ಅದೇ ಅಗಿರುವಂಥದ್ದು. ತುಂಬ ಬಡತನ ದಿಂದಲೇ ಬೆಳೆದ ಕುಟುಂಬ ಲೂಯಿ ಬ್ರೆ„ಲ್‌ ಅವರದು. ಫ್ರಾನ್ಸ್‌ ದೇಶದ ಕೂವ್ರೆ ಗ್ರಾಮದಲ್ಲಿ 1809ರ ಜ. 4ರಂದು ಸೈಮನ್‌ ರೆ ಬ್ರೈಲ್‌ ‌-ಮೋನಿಕಾ ಬ್ರೈಲ್‌‌ ದಂಪತಿಗೆ ಜನಿಸಿದವರೇ ಲೂಯಿ. ಲೂಯಿ ಬ್ರೆ„ಲ್‌ ಜನಿಸಿದಾಗ ಎಲ್ಲವೂ ಸರಿಯಿತ್ತು. ತಂದೆ ಸೈಮನ್‌ರದು ಕುದುರೆ ಸವಾರರಿಗೆ ಚರ್ಮದ ಜೀನ್‌ ತಯಾರಿಸುವ ವೃತ್ತಿ. ಲೂಯಿಗೆ ಆಗಿನ್ನು ಮೂರು ವರ್ಷ. ಆಟವಾ ಡುತ್ತ ತಂದೆ ಕೆಲಸ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಬಂದ ಲೂಯಿ ಚೂಪಾದ ದಬ್ಬಣ ತೆಗೆದುಕೊಂಡು ಅಲ್ಲಿ ಬಿದ್ದಿದ್ದ ಚರ್ಮಕ್ಕೆ ಚುಚ್ಚಲಾರಂಭಿಸಿದ. ಕ್ಷಣಮಾತ್ರದಲ್ಲಿ ಕೈಯಲ್ಲಿದ್ದ ದಬ್ಬಣ ಅವನ ಎಡಕಣ್ಣಿಗೆ ಚುಚ್ಚಿತು. ಕಣ್ಣಿನಿಂದ ರಕ್ತ ಸುರಿಯಲಾರಂಭಿಸಿತು. ಆಗಿನ್ನೂ ಔಷಧಗಳು ಆವಿಷ್ಕಾರಗೊಂಡಿರಲಿಲ್ಲ. ಕೆಲವು ಗಿಡ ಮೂಲಿಕೆಗಳಿಂದ ಕಣ್ಣಿಗೆ ಚಿಕಿತ್ಸೆ ನೀಡಲಾಯಿತು. ದಿನ ಕಳೆದಂತೆ ಕಣ್ಣು ಕೆಂಪಾಗಿ ಊದಿಕೊಳ್ಳಲು ಫ್ರಾರಂಭವಾಯಿತು. ಕೀವು ಉಂಟಾಗಿ ಸೋಂಕಾಗಿ ಬಲಗಣ್ಣಿಗೂ ಘಾಸಿಯುಂಟು ಮಾಡಿತು. ಪರಿಣಾಮ ಎಲ್ಲವೂ ಮಂಜಿನಂತೆ ಕಾಣತೊಡಗಿದವು. ದೃಷ್ಟಿ ದುರ್ಬಲವಾಗಿ ತನ್ನ ಐದನೇ ವಯಸ್ಸಿನಲ್ಲಿ ಲೂಯಿ ಶಾಶ್ವತವಾಗಿ ಕುರುಡನಾದ. ಇದು ಅವನ ಜೀವನವನ್ನೇ ಬದಲಾಯಿಸಿತು.

ಸಾಧನೆಯ ಹೆಬ್ಟಾಗಿಲು ತೆರೆಸಿತು: ಕಣ್ಣು ಕಳೆದು ಕೊಂಡರೂ ಓದಿನ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಲೂಯಿ ಯೌವನದ ಹೊಸ್ತಿಲಿಗೆ ಕಾಲಿಡುತ್ತಲೇ ಅಂಧರಿಗಾಗಿ ಬ್ರೈಲ್‌‌ ಲಿಪಿ ರೂಪಿಸಿದ. ಲೂಯಿ ರೂಪಿಸಿದ ಬ್ರೈಲ್‌‌ ಲಿಪಿ ಇಂದು ವಿಶ್ವವಿಖ್ಯಾತ. 15 ನೇ ವಯಸ್ಸಿನಲ್ಲಿ ಶಾಲೆಯಲ್ಲಿ ಒಂದು ತುಂಡು ಕಾಗದದ ಮೇಲೆ ಚುಕ್ಕೆಗಳನ್ನು ಮಾಡುವ ಮೂಲಕ ಈ ಬ್ರೆ„ಲ್‌ ಲಿಪಿಗೆ ಭಾಷ್ಯ ಬರೆದರು. ಅಂಧರ ಬದುಕಿನ ಇವತ್ತಿನ ಆತ್ಮವಿಶ್ವಾಸ ಮತ್ತು ಅವರ ಸಾಧನೆಗಳ ಹಿಂದೆ ಲೂಯಿ ಬ್ರೆ„ಲ್‌ರ ಪರಿಶ್ರಮವಿದೆ. ಬ್ರೆ„ಲ್‌ನ ಬದುಕು ಮತ್ತು ಆತ ಮಾಡಿದ ಸಾಧನೆ, ಅನೇಕ ದೃಷ್ಟಿಹೀನರ ಬದುಕಿಗೆ ಸ್ಫೂರ್ತಿಯ ಸೆಲೆಯಾಗಿದೆ. ಅಂಥ ಮಹಾ ಸಾಧಕನನ್ನು ನೆನೆಯುವ ಸಲುವಾಗಿ ಪ್ರತೀ ವರ್ಷ ಜ. 4ರಂದು ಬ್ರೆ„ಲ್‌ ದಿನ ಅಚರಿಸಲಾಗುತ್ತದೆ.

ಅಂಧರ ಶಾಲೆ ಸೇರಿದ: ತಾನು ಅಂಧ ಎಂದು ಅರಿವಾದರು ಸಹ ಲೂಯಿ ಎಂದಿಗೂ ಧೈರ್ಯ ಕಳೆದುಕೊಳ್ಳಲಿಲ್ಲ. ಕಲಿಕೆಯಲ್ಲಿ ಅತ್ಯಂತ ಆಸಕ್ತಿ ಹೊಂದಿದ ಈತ, ಪ್ಯಾರಿಸ್‌ನ ದಿ ರಾಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬ್ಲೆ„ಂಡ್‌ ಯೂತ್‌ ಸಂಸ್ಥೆ ನಡೆಸುವ ಶಾಲೆಗೆ ಸೇರಿದ. ಶಾಲೆಯಲ್ಲಿ ತಾಮ್ರದ ತಂತಿಯಿಂದ ವರ್ಣಮಾಲೆಯ ಅಕ್ಷರಗಳನ್ನು ರೂಪಿಸಿ, ಕಾಯಿಸಿ ಮೇಣದ ಕಾಗದಗಳ ಮೇಲೆ ಒತ್ತಲಾಗುತ್ತಿತ್ತು. ಆದರೆ ಇದರಲ್ಲಿ ಶಬ್ದಗಳು ಅಸ್ಪಷ್ಟವಾಗಿ ಮೂಡುತ್ತಿದ್ದು, ಅಕ್ಷರಗಳ ವ್ಯತ್ಯಾಸ ಕಂಡು ಹಿಡಿಯುವುದು ಕಷ್ಟವಾಗಿತ್ತು. ಮತ್ತೂಂದು ಸಾಧ್ಯತೆಯಲ್ಲಿ ಫ್ರಾನ್ಸ್‌ ಸಿಪಾಯಿ ಪಡೆಯ ನಾಯಕ ಚಾರ್ಲ್ಸ್‌ ಬಾರ್ಬಿಯೆ ರಹಸ್ಯ ಸಂದೇಶಗಳನ್ನು ರವಾನಿಸಲು ಇರುಳು ಬರವಣಿಗೆ ಎಂಬ ವಿಧಾನವನ್ನು ರೂಪಿಸಿದ್ದ. ಇದರಲ್ಲಿ ಶಬ್ದಗಳಿಗೆ ಸಾಂಕೇತಿಕವಾಗಿ ಉಬ್ಬಿದ ಚುಕ್ಕೆ ಹಾಗೂ ಗೆರೆಗಳನ್ನು ಬಳಸಲಾಗಿತ್ತು. ಈ ವಿಧಾನವೂ ಸಹ ಅಂಧರ ಕಲಿಕೆಗೆ ಪೂರಕವಾಗಲಿಲ್ಲ.

ಚುಕ್ಕಿ ಬರವಣಿಗೆಯ ಆರಂಭದಲ್ಲಿ: ಲೂಯಿ ಶಬ್ದಗಳನ್ನು ಸಾಂಕೇತಿಸುವ ಗೆರೆ, ಚುಕ್ಕಿಗಳ ಬದಲಾಗಿ ಚುಕ್ಕೆಗಳನ್ನು ಅಕ್ಷರಗಳಿಗೆ ಸಾಂಕೇತಿಕವಾಗಿ ಮಾಡಿದ. ದಪ್ಪ ಕಾಗದ ಮೇಲೆ ಸ್ಟೈಲಸ್‌(ಚಿಕ್ಕ ಮೊಳೆ)ನಿಂದ ಕೇವಲ 6 ಚುಕ್ಕೆಗಳಿಂದ 63 ವಿನ್ಯಾಸಗಳನ್ನು ರೂಪಿಸಿ, ಇಡೀ ವರ್ಣಮಾಲೆಯ ಅಕ್ಷರ ಹಾಗೂ ಚಿಹ್ನೆಗಳಿಗೆ ಸಂಕೇತ ನೀಡಿದ. ಇದು ಹಿಂದಿನ ವಿಧಗಳಿಗಿಂತ ಬಹಳ ಸುಲಭವಾಗಿತ್ತು. ಆದರೆ ಲೂಯಿಯ ಆವಿಷ್ಕಾರಕ್ಕೆ ಸರಿಯಾದ ಮನ್ನಣೆ ದೊರೆಯಲಿಲ್ಲ. ಆದರೂ ಧೃತಿಗೆಡಲಿಲ್ಲ. ಇದನ್ನು ಆಭಿವೃದ್ಧಿ ಪಡಿಸಿದರು. ಬಳಿಕ ಲೂಯಿಯ ಸಾಧನೆಯನ್ನು ಗಣ್ಯಮಾನ್ಯರು ಪ್ರಶಂಸಿಸಿದರು. ತಾನು ರೂಪಿಸಿದ ಹೊಸ ಲಿಪಿಗೆ ಜನರ ಬೆಂಬಲ ದೊರೆತು, ಜಗತ್ತಿನಾದ್ಯಂತ ಇರುವ ಅಂಧರಿಗೆ ನೆರವಾಗಬೇಕೆಂಬ ಕಂಡ ಕನಸು 20 ವರ್ಷಗಳ ಅನಂತರ ಆಂದರೆ 1844ರಲ್ಲಿ ನೆರವೇರಿತು. ಅಂದು ಲೂಯಿಯ ಹರ್ಷಕ್ಕೆ ಪಾರವೇ ಇರಲಿಲ್ಲ.

ಶತಮಾನದ ಅನಂತರ ಮರುಸಂಸ್ಕಾರ!: ಲೂಯಿ 1856ರಲ್ಲಿ ಕ್ಷಯರೋಗಕ್ಕೆ ತುತ್ತಾಗಿ ಜ. 6ರಂದು ಇಹಲೋಕ ತ್ಯಜಿಸಿದರು. ಲೂಯಿ ನಿಧನದ ಅನಂತರ ಬ್ರೈಲ್‌‌ ಲಿಪಿ ಹೆಚ್ಚು ಪ್ರಸಿದ್ದಿಗೊಂಡು, ವಿಶ್ವವ್ಯಾಪಿಯಾಯಿತು. ಹಲವೆಡೆ ಲೂಯಿ ಹೆಸರಿನಲ್ಲಿ ಅಂಧರ ಶಾಲೆಗಳು ತೆರೆದುಕೊಂಡವು. ಹುಟ್ಟೂರಿನಲ್ಲಿ ಅಮೃತ ಶಿಲೆಯ ಸ್ಮಾರಕ ನಿರ್ಮಿಸಲಾಯಿತು. ಲೂಯಿಯ ಮಹತ್ವದ ಸಾಧನೆಯನ್ನು ಮನಗಂಡ ಫ್ರಾನ್ಸ್‌ ಸರಕಾರ 1952ರಲ್ಲಿ ಅಂದರೆ ಲೂಯಿ ನಿಧನದ 100 ವರ್ಷಗಳ ಆನಂತರ ಕೂವ್ರೆ ಶ್ಮಶಾನದಲ್ಲಿದ್ದ ಲೂಯಿಯ ಶವ ಹೊರತೆಗೆದು, ಸಕಲ ಸರಕಾರಿ ಮರ್ಯಾದೆ, ಗೌರವಗಳೊಂದಿಗೆ ಪ್ಯಾರಿಸ್‌ನ ಪಾಂಥೆಯೋ ಶ್ಮಶಾನದಲ್ಲಿ ಮರುಸಂಸ್ಕಾರ ಮಾಡಲಾಯಿತು.

ಭಾರತಕ್ಕೆ ಬ್ರೈಲ್‌‌ ಲಿಪಿ: ಬ್ರೈಲ್‌‌ ಲಿಪಿ 1951 ರಲ್ಲಿ ಭಾರತ ಪ್ರವೇಶಿಸಿತು. ಕೆಲವು ಸಾಂಕೇತಿಕ ಬದಲಾವಣೆಗಳೊಂದಿಗೆ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಬ್ರೈಲ್‌‌ ಲಿಪಿ ಅಳವಡಿ ಸಲಾಯಿತು. ಕಾಲ ಕಳೆದಂತೆ ಬ್ರೈಲ್‌‌ ಲಿಪಿಯನ್ನು ಗಣಕಯಂತ್ರಕ್ಕೂ ಅಳವಡಿಸಿ, ಬ್ರೈಲ್‌‌ ಮುದ್ರಣ ಯಂತ್ರಗಳಿಂದ ಅನೇಕ ಪುಸ್ತಕಗಳನ್ನು ಮುದ್ರಿಸಲಾಯಿತು. ಪ್ರಸ್ತುತ ಅಂಧರಿಗೊಸ್ಕರ ಪುಸ್ತಕ, ಶೈಕ್ಷಣಿಕ ಸಾಮಗ್ರಿ, ಬ್ಲೆ„ಂಡ್‌ ಸ್ಟಿಕ್‌ ಇತ್ಯಾದಿ ವಸ್ತುಗಳು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್‌ ನಗರದಲ್ಲಿನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವಿಶ್ಯುವಲ್‌ ಹ್ಯಾಂಡಿಕ್ಯಾಪ್‌ (ಎನ್‌ಐವಿಎಚ್‌) ಮುಖಾಂತರ ದೇಶಾದ್ಯಂತ ಪೂರೈಸಲಾಗುತ್ತಿದೆ.

ಅಂಧರ ಸಾಧನೆ: ದೃಷ್ಟಿ ವಿಶೇಷ ಚೇತನರು ಇಂದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ನಿರೀಕ್ಷಿಸದೆ ಸಹಜ ರೀತಿಯಿಂದ ಬದುಕು ನಡೆಸುತ್ತಿದ್ದಾರೆ. ಅಂಗವೈಕಲ್ಯವನ್ನು ಮರೆತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅಮೆರಿಕದ ಲೇಖಕಿ ಹೆಲನ್‌ಕೆಲ್ಲರ್‌, ಕವಿ ಜಾನ್‌ಮಿಲ್ಟನ್‌, ಕಾರ್ಟೂನಿಸ್ಟ್‌ ಜೇಮ್ಸ್ ಟರ್ಬರ್‌, ಹುಟ್ಟು ಅಂಧರಾಗಿ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು.. ಈ ಎಲ್ಲರೂ ತಮ್ಮ ದೈಹಿಕ ವೈಕಲ್ಯವನ್ನು ಮರೆತು ಮಾಡಿದ ಸಾಧನೆ ಮತ್ತು ಪಡೆದ ಯಶಸ್ಸು ಅಪಾರ. ಸಿಡಿಯಲ್ಲಿ ಕೇಳಿಸಿಕೊಂಡು ಕಲಿಯುವುದಕ್ಕೂ ಬ್ರೈಲ್‌ ಲಿಪಿ ಮೂಲಕ ಕಲಿಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.