ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವರ ಪ್ರೇಯಸಿಯೊಂದಿಗೆ ಪರಾರಿ!
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ನಿನ್ನೆ ವಿವಾಹ ನೆರವೇರುತ್ತಿತು
Team Udayavani, Dec 10, 2020, 2:11 PM IST
ಸಾಂದರ್ಭಿಕ ಚಿತ್ರ ಬಳಸಲಾಗಿದೆ
ಮೈಸೂರು: ವಧುವಿನ ಮನೆಯವರು ಮದುವೆಯ ಭರದ ಸಿದ್ಧತೆಯಲ್ಲಿದ್ದರು, ಇತ್ತ ವರನ ಪೋಷಕರೂ ಅಗತ್ಯ ಸಿದ್ಧತೆ
ಮಾಡಿಕೊಳ್ಳುತ್ತಿದ್ದರು, ಎರಡೂ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು, ಸಂಬಂಧಿಕರೂ ಮದುವೆಗೆ ಬರುವ ತಯಾರಿಯಲ್ಲಿದ್ದರು. ಆದರೆ, ಪ್ರೇಯಸಿಯೊಂದಿಗೆ ವರ ಪರಾರಿಯಾದ!
ಮೈಸೂರಿನ ಕೆ.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ನಿಶ್ಚಿತಾರ್ಥವಾದ ಹುಡುಗಿಯೊಂದಿಗೆ ಕೆಲವೇ ಗಂಟೆಗಳಲ್ಲಿ ತಾಳಿ ಕಟ್ಟಬೇಕಿದ್ದವನ ಕೆಲಸಕ್ಕೆ ಸಂಬಂಧಿಕರು ತಲೆ ತಗ್ಗಿಸಿದ್ದಾರೆ.
ಮೈಸೂರಿನ ಸುಣ್ಣದಕೇರಿ ಬಡಾವಣೆ ನಿವಾಸಿ ಉಮೇಶ್ ಪ್ರೇಯಸಿಯೊಂದಿಗೆ ಪರಾರಿಯಾದಾತ. ಈತನಿಗೆ, ಮೈಸೂರು
ನಗರದ ಯುವತಿಯೊಂದಿಗೆ ಬುಧವಾರ ವಿವಾಹ ನಿಶ್ಚಯವಾಗಿತ್ತು. ಸಂಬಂಧಿಕರೂ ಮದುವೆಗೆ ಬರುವ ತಯಾರಿಯಲ್ಲಿದ್ದರು. ಆದರೆ, ವರ ಉಮೇಶ್ ಸೋಮವಾರವೇ ಅಂದರೆ, ತಾಳಿ ಕಟ್ಟಲು ಕೆಲವೇ ಗಂಟೆಗಳು ಇರುವಾಗ, ತನ್ನ ಪ್ರೇಯಸಿ ಜತೆ ಪೇರಿಕಿತ್ತಿದ್ದಾನೆ. ಮದುವೆ ರದ್ದಾದ ಕಾರಣ ವಧುವಿನ ಮನೆಯವರು ಕಂಗಾಲಾಗಿದ್ದಾರೆ. ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ತನ್ನ ಕೈಯಿಂದ ಹಣ ಕಿತ್ತು ಓಡುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ವೃದ್ಧೆ
ಎರಡೂ ಕಡೆಯವರು ಪೇಚಿಗೆ ಸಿಲುಕಿದರು
ಪ್ರೇಯಸಿ ಜತೆ ಮದುವೆ ಆಗುವ ಪ್ಲಾನ್ ಇದ್ದರೆ ಮತ್ತೂಂದು ಹುಡುಗಿಯ ಜತೆ ನಿಶ್ಚಿತಾರ್ಥ ಏಕೆ ಮಾಡಿಕೊಳ್ಳಬೇಕಿತ್ತು.
ಅಷ್ಟೆ ಅಲ್ಲ ಮದುವೆ ದಿನದ ತನಕ ಇದನ್ನೆಲ್ಲಾ ಹೇಳದೆ ಏಕೆ ಮೌನವಾಗಿದ್ದ ಎಂದು ಪ್ರಶ್ನಿಸಿದ್ದಾರೆ. ಉಮೇಶ್ ಹೀಗೆ
ಮಾಡುತ್ತಾನೆ ಎಂದು ನಾವೂ ನಿರೀಕ್ಷಿಸಿರಲಿಲ್ಲ ಎಂದು ಪೇಚಾಡುತ್ತಿರುವ ಉಮೇಶ್ ಪೋಷಕರು, ಮಗ ಮಾಡಿರುವ ತಪ್ಪಿನಿಂದ
ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.