ಅಧಿಕ ಲಾಭಾಂಶ ಆಮಿಷ: 1.64 ಲ.ರೂ. ವಂಚನೆ
Team Udayavani, Jun 8, 2023, 5:16 AM IST
ಮಂಗಳೂರು: ಹೂಡಿಕೆಯ ಮೇಲೆ ಅಧಿಕ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ 1.64 ಲ.ರೂ.ಗಳನ್ನು ಪಡೆದು ವಂಚಿಸಿರುವ ಘಟನೆ ನಡೆದಿದೆ.
ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಅಪರಿಚಿತ ವ್ಯಕ್ತಿಯೋರ್ವ ದೂರುದಾರರಿಗೆ ಜೂ. 4ರಂದು ಇನ್ಸ್ಟಾಗ್ರಾಂ ಮೆಸೆಂಜರ್ನಲ್ಲಿ ಸಂದೇಶ ಮತ್ತು ಲಿಂಕ್ ಕಳುಹಿಸಿದ್ದ. ಆ ಲಿಂಕ್ ಕ್ಲಿಕ್ ಮಾಡಿದಾಗ ಇನ್ಸ್ಟಾಗ್ರಾಂ ಖಾತೆಯ ಪೇಜ್ ತೆರೆದುಕೊಂಡಿತ್ತು. ಆ ಬಳಿಕ ಅಪರಿಚಿತ ವ್ಯಕ್ತಿ 50,000 ರೂ. ಹೂಡಿಕೆ ಮಾಡಿದರೆ 4,90,000 ರೂ. ಲಾಭಾಂಶ ಬರುವುದಾಗಿ ಹೇಳಿದ್ದ. ಅದರಂತೆ ದೂರುದಾರರು 50,000 ರೂ. ಹಣ ವರ್ಗಾಯಿಸಿದರು. ಆಗ ಅಪರಿಚಿತ ವ್ಯಕ್ತಿ 6,90,000 ರೂ. ಲಾಭಾಂಶ ಬಿಟ್ಕಾಯಿನ್ ರೂಪದಲ್ಲಿ ಬಂದಿರುವುದಾಗಿ ತಿಳಿಸಿದ.
ಆ ಬಗ್ಗೆ ಸ್ಕ್ರೀನ್ ಶಾಟ್ ಕೂಡ ಕಳುಹಿಸಿದ. ಅದನ್ನು ಖಾತೆಗೆ ಜಮೆ ಮಾಡಬೇಕಾದರೆ 64,000 ರೂ. ವರ್ಗಾಯಿಸುವಂತೆ ಹೇಳಿದ್ದ ದೂರುದಾರರು ಅದನ್ನು ನಂಬಿ ಹಣ ವರ್ಗಾಯಿಸಿದ್ದರು. ಮತ್ತೆ ಕಮಿಷನ್ ಮೊತ್ತವಾಗಿ ಹಣ ನೀಡುವಂತೆ ಅಪರಿಚಿತ ವ್ಯಕ್ತಿ ಹೇಳಿದ್ದು ಅದನ್ನು ಕೂಡ ದೂರುದಾರರು ವರ್ಗಾಯಿಸಿದ್ದರು. ಅನಂತರ ಲಾಭಾಂಶದ ಎಲ್ಲ ಹಣವನ್ನು ಖಾತೆಗೆ ಜಮೆ ಮಾಡಬೇಕಾದರೆ ಇನ್ಸ್ಟಾ ಗ್ರಾಂ ಖಾತೆಯನ್ನು ಖಾತರಿಗೊಳಿಸಬೇಕಾಗಿದೆ.
ಇನ್ಸ್ಟಾಗ್ರಾಂ ಖಾತೆಯ ಪ್ರೊಫೈಲ್ ಎಡಿಟ್ ಮಾಡಿ ತಾನು ನೀಡಿದ ಇ-ಮೇಲ್ ಐಡಿ ಹಾಕುವಂತೆ ಹೇಳಿದ. ದೂರುದಾರರು ಅದರಂತೆ ಮಾಡಿದಾಗ ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಆ ಇನ್ಸ್ಟಾ ಗ್ರಾಂ ಖಾತೆಯನ್ನು ಬಳಸಿ ಅಪರಿಚಿತ ವ್ಯಕ್ತಿಯು ದೂರುದಾರರ ಸ್ನೇಹಿತರಿಗೆ ಹಣ ಹೂಡಿಕೆ ಮಾಡುವಂತೆ ಸಂದೇಶಗಳನ್ನು ಕಳುಹಿಸಿದ್ದಾನೆ. ಅಪರಿಚಿತ ವ್ಯಕ್ತಿ ಒಟ್ಟು 1.64 ಲ.ರೂ. ವಂಚಿಸಿದ್ದಾನೆ ಎಂಬುದಾಗಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು