ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್: ಸಿಂಧು, ಪ್ರಣಯ್ ಸೆಮಿಫೈನಲ್ ಪ್ರವೇಶ
Team Udayavani, May 27, 2023, 6:30 AM IST
ಕೌಲಾಲಂಪುರ: ಸ್ಟಾರ್ ಶಟ್ಲರ್ಗಳಾದ ಪಿ.ವಿ. ಸಿಂಧು ಮತ್ತು ಎಚ್.ಎಸ್. ಪ್ರಣಯ್ “ಮಲೇಷ್ಯಾ ಮಾಸ್ಟರ್ ಸೂಪರ್-500′ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಕೆ. ಶ್ರೀಕಾಂತ್ ಕೂಟದಿಂದ ನಿರ್ಗಮಿಸಿದ್ದಾರೆ.
6ನೇ ಶ್ರೇಯಾಂಕ ಹೊಂದಿರುವ ಪಿ.ವಿ. ಸಿಂಧು ವನಿತಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ತೀವ್ರ ಪೈಪೋಟಿಯೊಡ್ಡಿದ ತನಗಿಂತ ಕೆಳ ರ್ಯಾಂಕಿಂಗ್ ಆಟಗಾರ್ತಿ, ಚೀನದ ಯೀ ಮಾನ್ ಜಾಂಗ್ ಅವರನ್ನು 21-16, 13-21, 22-20 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಕಳೆದ “ಆಲ್ ಇಂಗ್ಲೆಂಡ್ ಓಪನ್’ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು.
ಸಿಂಧು ಅವರಿನ್ನು 7ನೇ ಶ್ರೇಯಾಂಕದ, ವಿಶ್ವದ ನಂ.9 ಆಟಗಾರ್ತಿಯಾಗಿರುವ ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ಟುಂಜುಂಗ್ ಸವಾಲನ್ನು ಎದುರಿಸಲಿದ್ದಾರೆ. ಈ ಪಂದ್ಯ ಶನಿವಾರ ನಡೆಯಲಿದೆ. ದಿನದ ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ ಟುಂಜುಂಗ್ ದ್ವಿತೀಯ ಶ್ರೇಯಾಂಕದ ಚೀನೀ ಆಟಗಾರ್ತಿ ಯೀ ಜೀ ವಾಂಗ್ ಅವರನ್ನು 21-18, 22-20 ಅಂತರದಿಂದ ಪರಾಭವಗೊಳಿಸಿದರು.
ಸದ್ಯ ಟುಂಜುಂಗ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಎಪ್ರಿಲ್ನಲ್ಲಿ ನಡೆದ “ಮ್ಯಾಡ್ರಿಡ್ ಮಾಸ್ಟರ್’ ಫೈನಲ್ನಲ್ಲಿ ಇವರೆದುರು ಸಿಂಧು ಪರಾಭವ ಗೊಂಡಿದ್ದರು. ಆದರೆ ಟುಂಜುಂಗ್ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಸಿಂಧು ಸೋಲನುಭವಿಸಿದ್ದು ಈ ಪಂದ್ಯದಲ್ಲಿ ಮಾತ್ರ.
ತಪ್ಪಿದ ಇಂಡಿಯನ್ ಸೆಮಿಫೈನಲ್
ವಿಶ್ವದ 9ನೇ ರ್ಯಾಂಕಿಂಗ್ ಆಟಗಾರನಾಗಿರುವ ಎಚ್.ಎಸ್. ಪ್ರಣಯ್ ಜಪಾನ್ನ ಕೆಂಟ ನಿಶಿಮೊಟೊ ಅವರನ್ನು ಜಿದ್ದಾಜಿದ್ದಿ ಕಾಳಗದಲ್ಲಿ 25-23, 18-21, 21-13ರಿಂದ ಮಣಿಸಿದರು. ಪ್ರಣಯ್ ಅವರಿನ್ನು 57ನೇ ರ್ಯಾಂಕಿಂಗ್ನ ಇಂಡೋನೇಷ್ಯಾ ಆಟಗಾರ ಕ್ರಿಸ್ಟಿಯನ್ ಆದಿನಾಥ ವಿರುದ್ಧ ಆಡಲಿದ್ದಾರೆ. ಆದಿನಾಥ ಭಾರತದ ಮತ್ತೋರ್ವ ಆಟಗಾರ ಕೆ. ಶ್ರೀಕಾಂತ್ಗೆ 16-21, 21-16, 21-11 ಅಂತರದ ಸೋಲುಣಿಸಿದರು. ಇಲ್ಲವಾದರೆ “ಆಲ್ ಇಂಡಿಯನ್ ಸೆಮಿಫೈನಲ್’ ಸ್ಪರ್ಧೆಯೊಂದನ್ನು ಕಾಣಬಹುದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್