ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ಇಬ್ಬರ ರಕ್ಷಣೆ
Team Udayavani, Apr 24, 2023, 5:57 AM IST
ಮಲ್ಪೆ: ಮಲ್ಪೆ ಬೀಚ್ನಲ್ಲಿ ನೀರಿಗಿಳಿದು ಈಜಾಡುತ್ತ ಮುಂದೆ ಹೋಗಿ ಅಲೆಯ ಸೆಳೆತಕ್ಕೆ ಸಿಲುಕಿ ನೀರುಪಾಲಾಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಇಲ್ಲಿನ ಜೀವರಕ್ಷಕ ತಂಡದವರು ರಕ್ಷಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹಿರೇಶ್ (25) ಮತ್ತು ವರ್ಷದ್ (27) ಅವರನ್ನು ರಕ್ಷಿಸಲಾಗಿದೆ. ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆ ಘಟನೆ ನಡೆದಿದ್ದು ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ತತ್ಕ್ಷಣ ಜೀವರಕ್ಷಕರು ಜೆಟ್ಸ್ಕೀ ಮೂಲಕ ಸಾಗಿ ದಡದತ್ತ ತಂದಿದ್ದಾರೆ. ವಾರಾಂತ್ಯವಾಗಿದ್ದರಿಂದ ಬೀಚ್ನಲ್ಲಿ ಪ್ರವಾಸಿಗರ ಸಂಖ್ಯೆ ಬಹಳಷ್ಟಿತ್ತು.
ಹೆಚ್ಚಿದ ಅಲೆಗಳ ಒತ್ತಡ
ಶನಿವಾರ ಮಧ್ಯಾಹ್ನದಿಂದ ಸಮುದ್ರ ಅಲೆಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಬಹುತೇಕ ಎಲ್ಲ ಜಲಸಹಾಸ ಕ್ರೀಡೆಗಳು ಮಧ್ಯಾಹ್ನದ ಬಳಿಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ರವಿವಾರ ಬೆಳಗ್ಗೆ ಸಹಜ ಸ್ಥಿತಿಯಲ್ಲಿದ್ದ ಸಮುದ್ರ ಮಧ್ಯಾಹ್ನದ ಬಳಿಕ ಅಲೆಗಳ ಒತ್ತಡ ತೀವ್ರಗೊಂಡಿದ್ದರಿಂದ 3 ಗಂಟೆ ಬಳಿಕ ಎಲ್ಲ ವಾಟರ್ ನ್ಪೋರ್ಟ್ಸ್ಗಳು ಸ್ಥಗಿತಗೊಳಿಸಲಾಗಿತ್ತು.
ನೀರಿಗಿಳಿಯದಂತೆ ಎಚ್ಚರ
ಮಧ್ಯಾಹ್ನದ ಬಳಿಕ ವಾತಾವರಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಒಂದೇ ಸವನೆ ಬೀಸುವ ಗಾಳಿಯಿಂದ ಸಮುದ್ರದಲ್ಲಿ ನೀರಿನ ಒತ್ತಡ ಹೆಚ್ಚಿದ್ದು ಪ್ರವಾಸಿಗರನ್ನು ನೀರಿಗಿಳಿಯದಂತೆ ಇಲ್ಲಿನ ಜೀವ ರಕ್ಷಕ ತಂಡದವರು ಸೂಚನೆ ನೀಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ