ಸಚಿವರ ಸಮರ : ಡಾ.ಸುಧಾಕರ್ ಹೇಳಿಕೆಗೆ ಡಾ.ನಾರಾಯಣ ಗೌಡ ಗರಂ
Team Udayavani, Dec 15, 2021, 6:59 PM IST
ಬೆಳಗಾವಿ : ವಿಧಾನ ಪರಿಷತ್ ಫಲಿತಾಂಶ ಪ್ರಕಟವಾಗಿದ್ದು, ಸಚಿವದ್ವಯರ ನಡುವೆ ಮಾತಿನ ಸಮರಕ್ಕೆ ಕಾರಣ ವಾಗಿದೆ.
ಮಂಡ್ಯ ಮತಪ್ರಮಾಣ ಕಡಿಮೆಯಾಗಿರುವುದು ದುರದೃಷ್ಟಕರ, ನಾವು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಸುಧಾಕರ್ ಹೇಳಿಕೆ ವಿಚಾರಕ್ಕೆ ಸಚಿವ ಡಾ. ನಾರಾಯಣ ಗೌಡ ಅವರು ಕಿಡಿ ಕಾರಿದ್ದಾರೆ.
ಸುಧಾಕರ್ ನಮ್ಮ ಲೀಡರ್ ಹಾ..? ಅವರು,ಅವರ ಕ್ಷೇತ್ರದ ಬಗ್ಗೆ ಮಾತನಾಡಲಿ. ನಾವು ನಮ್ಮ ಕ್ಷೇತ್ರದ ಬಗ್ಗೆ ಹೇಳುತ್ತೇವೆ. ಸಚಿವರಿಗೇನು ಗೊತ್ತು ಮಂಡ್ಯದ ಬಗ್ಗೆ.ನನಗೆ ಗೊತ್ತು ನಾನು ಮಾತನಾಡುತ್ತೇನೆ. ಅವರ ಕೆಲಸ ಅವರು ಮಾಡಲಿ ಎಂದು ನಾರಾಯಣ್ ಗೌಡ ಗರಂ ಆಗಿದ್ದಾರೆ.
ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದೇವೆ, ಪಕ್ಷದ ಬೆಳೆಸುವ ಜವಾಬ್ದಾರಿ ಇದೆ. ನಾನು ಜವಾಬ್ದಾರಿಯಲ್ಲೇ ಇದ್ದೇನೆ ಎಂದರು.
ಮಂಡ್ಯದಲ್ಲಿ ಕೊನೆಯಲ್ಲಿ ಅಬ್ಬರದ ಪ್ರಚಾರ ಮೂಲಕ ತ್ರಿಕೋನ ಸ್ಪರ್ಧೆಯ ಸುಳಿವು ನೀಡಿದ್ದ ಬಿಜೆಪಿ ಕೇವಲ 50 ಮತಗಳನ್ನುಪಡೆಯುವ ಮೂಲಕ ಭಾರೀ ಮುಖಭಂಗ ಅನುಭವಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ