ಮುಂಬೈ ಇಂಡಿಯನ್ಸ್‌ಗೆ 4 ವಿಕೆಟ್‌ ಗೆಲುವು: ಸೋಲಿನೊಂದಿಗೆ ಡಬ್ಲೂಪಿಎಲ್‌ ಮುಗಿಸಿದ ಮಂಧನಾ ಪಡೆ


Team Udayavani, Mar 22, 2023, 7:32 AM IST

RCB MUMBA

ಮುಂಬೈ: ತೀವ್ರ ಪೈಪೋಟಿಯಿಂದ ಸಾಗಿದ ವನಿತಾ ಪ್ರೀಮಿಯರ್‌ ಲೀಗ್‌ನ ಮಂಗಳವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಲು ಯಶಸ್ವಿಯಾಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡವು 6 ವಿಕೆಟಿಗೆ 125 ರನ್‌ ಗಳಿಸಲು ಶಕ್ತವಾಯಿತು. ಇದಕ್ಕುತ್ತರವಾಗಿ ಉತ್ತಮ ಆರಂಭದ ಹೊರತಾಗಿಯೂ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದರೂ ಅಂತಿಮವಾಗಿ 16.3 ಓವರ್‌ಗಳಲ್ಲಿ 129 ರನ್‌ ಗಳಿಸಿ ಜಯಭೇರಿ ಬಾರಿಸಿತು. ಹೀಲಿ ಮ್ಯಾಥ್ಯೂಸ್‌ ಮತ್ತು ಯಾಸ್ತಿಕಾ ಭಾಟಿಯಾ ಮೊದಲ ವಿಕೆಟಿಗೆ 53 ರನ್‌ ಪೇರಿಸಿದ್ದರು. ಆಬಳಿಕ ಕೆಲವು ವಿಕೆಟ್‌ ಉರುಳಿದ್ದರೂ ಗೆಲುವಿನ ಮೊತ್ತ ಕಡಿಮೆ ಇದ್ದ ಕಾರಣ ಮುಂಬೈ ಜಯ ಸಾಧಿಸುವಂತಾಯಿತು.

ಸ್ಪಿನ್‌ ದಾಳಿಗೆ ಕಂಗಾಲು
ಈ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್‌ಸಿಬಿ ತಂಡವು ಅಮೆಲಿಯಾ ಕೆರ್ರ ಅವರ ಮಾರಕ ದಾಳಿಗೆ ಸಿಲುಕಿ 125 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸ್ಪಿನ್ನರ್‌ಗಳು ಮೇಲುಗೈ ಪಡೆಯಬಹುದೆಂಬ ಮುಂಬೈ ಇಂಡಿಯನ್ಸ್‌ ನಾಯಕಿ ಹರ್ಮನ್‌ ಪ್ರೀತ್‌ ಅವರ ನಿರೀಕ್ಷೆ ಸರಿಯಾಗಿಯೇ ಫ‌ಲ ನೀಡಿತು. ಕೆರ್ರ ಅವರು 22 ರನ್‌ ನೀಡಿ ಮೂರು ವಿಕೆಟ್‌ ಉರುಳಿಸಿ ಬೌಲಿಂಗ್‌ನಲ್ಲಿ ಅಗ್ರಸ್ಥಾನಿಯಾಗಿ ಮಿಂಚಿದರೆ ಹೀಲಿ ಮ್ಯಾಥ್ಯೂಸ್‌ ಮತ್ತು ಸೈಕಾ ಇಶಾಕಿ ಅವರು ಬ್ಯಾಟರ್‌ಗಳನ್ನು ಕಾಡುವಲ್ಲಿ ಯಶಸ್ವಿಯಾದರು.

ಮಂಗಳವಾರದ ಈ ಸಾಧನೆಯೊಂದಿಗೆ ಕೆರ್ರ ಮತ್ತು ಇಶಾಕಿ ಅವರು ಯುಪಿಯ ಸೋಫಿ ಅವರೊಂದಿಗೆ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಗರಿಷ್ಠ 13 ವಿಕೆಟ್‌ ಉರುಳಿಸಿದ ಸಾಧನೆಗೆ ಪಾತ್ರರಾದರು.

ಪಂದ್ಯದ ನಾಲ್ಕನೇ ಎಸೆತದಲ್ಲಿಯೇ ಮುಂಬೈ ಯಶಸ್ಸೊಂದನ್ನು ಪಡೆಯಿತು. ಸ್ಮತಿ ಮಂಧನಾ ಮತ್ತು ಸೋಫಿ ಡಿವೈನ್‌ ಅವರ ನಡುವಿನ ಹೊಂದಾಣಿಕೆ ರಹಿತ ಓಟವು ರನೌಟ್‌ಗೆ ಕಾರಣವಾಯಿತು. ಇದರಿಂದ ಆರಂಭದಲ್ಲಿಯೇ ಆರ್‌ಸಿಬಿ ಒತ್ತಡಕ್ಕೆ ಸಿಲುಕಿತು. ಆಗ ತಂಡದ ಸ್ಕೋರ್‌ ಕೇವಲ ಒಂದು ರನ್‌-ಒಂದು ವಿಕೆಟ್‌.

ಸ್ಮತಿ ಅವರು ಕೆರ್ರ ಅವರ ಸ್ಪಿನ್‌ ದಾಳಿಗೆ ಸಿಲುಕುವ ಮೊದಲು ಉತ್ತಮವಾಗಿ ಆಡಿ 25 ಎಸೆತಗಳನ್ನು ಎದುರಿಸಿ 24 ರನ್‌ ಸಂಪಾದಿಸಿದರು. ಇದರಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್‌ ಒಳಗೊಂಡಿತ್ತು. ಎಲ್ಸಿ ಪೆರ್ರಿ ಅವರು ಆರಂಭದಲ್ಲಿ ಎಚ್ಚರಿಕೆಯಿಂದ ಆಟವಾಡಿದರು. ಅವರು 10ನೇ ಓವರ್‌ನಲ್ಲಷ್ಟೇ ಸತತ ಬೌಂಡರಿ ಸಿಡಿಸುವ ಮೂಲಕ ರನ್‌ರೇಟ್‌ ಏರಿಸಿಕೊಂಡರು. ಒಟ್ಟು 28 ಎಸೆತಗಳನ್ನು ಎದುರಿಸಿ 29 ರನ್‌ ಗಳಿಸಿದರು. ಅದರಲ್ಲಿ ಮೂರು ಬೌಂಡರಿಗಳಿದ್ದವು. ಅರ್ಧ ಇನ್ನಿಂಗ್ಸ್‌ ಮುಗಿದಾಗ ತಂಡ ಎರಡು ವಿಕೆಟ್‌ ನಷ್ಟಕ್ಕೆ 56 ರನ್‌ ಗಳಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್‌ ಅವರು ಸ್ವಲ್ಪ ಸಿಡಿದ ಕಾರಣ ತಂಡ 100ರ ಗಡಿ ದಾಟಲು ಸಾಧ್ಯವಾಯಿತು. ರಿಚಾ ಅವರು ಕೇವಲ 13 ಎಸೆತಗಳಲ್ಲಿ 29 ರನ್‌ ಸಿಡಿಸಿದರು. ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಇದರಲ್ಲಿ ಸೇರಿತ್ತು.

ಟಾಪ್ ನ್ಯೂಸ್

ಅಮೆರಿಕ-ತೈವಾನ್‌ ಒಪ್ಪಂದಕ್ಕೆ ಚೀನಾ ಖ್ಯಾತೆ

ಅಮೆರಿಕ-ತೈವಾನ್‌ ಒಪ್ಪಂದಕ್ಕೆ ಚೀನಾ ಖ್ಯಾತೆ

Western Ghats;ನೀರೇ ಇಲ್ಲದಿದ್ದರೂ ಬದುಕುವ 62 ಸಸ್ಯಗಳು!

Western Ghats;ನೀರೇ ಇಲ್ಲದಿದ್ದರೂ ಬದುಕುವ 62 ಸಸ್ಯಗಳು!

ಹಳ್ಳಿಗಳಲ್ಲಿ ಏರುತ್ತಿದೆ ಪಂಚಾಯ್ತಿ ರಾಜಕಾರಣದ ಬಿಸಿ

ಹಳ್ಳಿಗಳಲ್ಲಿ ನಿಧಾನವಾಗಿ ಏರುತ್ತಿದೆ ಪಂಚಾಯತ್‌ ಚುನಾವಣೆ ಬಿಸಿ

New Parliament; ನೂತನ ಸಂಸತ್ತಿನಲ್ಲಿದೆ ವಿಶೇಷ ಪೆಂಡ್ಯುಲಮ್‌

New Parliament; ನೂತನ ಸಂಸತ್ತಿನಲ್ಲಿದೆ ವಿಶೇಷ ಪೆಂಡ್ಯುಲಮ್‌

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

Mekedatu Project ಜಾರಿ ಮಾಡಿದರೆ ಹೋರಾಟ: ಪಳನಿಸ್ವಾಮಿ

Mekedatu Project ಜಾರಿ ಮಾಡಿದರೆ ಹೋರಾಟ: ಪಳನಿಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai; ಮಹೇಂದ್ರ ಸಿಂಗ್‌ ಧೋನಿ ಮೊಣಕಾಲಿಗೆ ಶಸ್ತ್ರಚಿಕಿತ್ಸೆ

Mumbai; ಮಹೇಂದ್ರ ಸಿಂಗ್‌ ಧೋನಿ ಮೊಣಕಾಲಿಗೆ ಶಸ್ತ್ರಚಿಕಿತ್ಸೆ

Surfing: ಮೊದಲ ದಿನ ಕರ್ನಾಟಕ, ತಮಿಳುನಾಡು ಪಾರಮ್ಯ: ಗಮನ ಸೆಳೆದ ಕಿಶೋರ್‌, ತಯಿನ್‌ ಅರುಣ್‌

Surfing: ಮೊದಲ ದಿನ ಕರ್ನಾಟಕ, ತಮಿಳುನಾಡು ಪಾರಮ್ಯ: ಗಮನ ಸೆಳೆದ ಕಿಶೋರ್‌, ತಯಿನ್‌ ಅರುಣ್‌

French Open ಗ್ರ್ಯಾನ್‌ ಸ್ಲಾಮ್‌: ಜೊಕೋವಿಕ್‌, ರಿಬಕಿನಾ ಮುನ್ನಡೆ

French Open ಗ್ರ್ಯಾನ್‌ ಸ್ಲಾಮ್‌: ಜೊಕೋವಿಕ್‌, ರಿಬಕಿನಾ ಮುನ್ನಡೆ

Khelo India: ಆಳ್ವಾಸ್‌ಗೆ ಪದಕಗಳ ಸರಮಾಲೆ

Khelo India: ಆಳ್ವಾಸ್‌ಗೆ ಪದಕಗಳ ಸರಮಾಲೆ

Under-20 World Cup Football: ಇಟಲಿ, ನೈಜೀರಿಯ ಕ್ವಾರ್ಟರ್‌ ಫೈನಲಿಗೆ

Under-20 World Cup Football: ಇಟಲಿ, ನೈಜೀರಿಯ ಕ್ವಾರ್ಟರ್‌ ಫೈನಲಿಗೆ

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ

ಅಮೆರಿಕ-ತೈವಾನ್‌ ಒಪ್ಪಂದಕ್ಕೆ ಚೀನಾ ಖ್ಯಾತೆ

ಅಮೆರಿಕ-ತೈವಾನ್‌ ಒಪ್ಪಂದಕ್ಕೆ ಚೀನಾ ಖ್ಯಾತೆ

Western Ghats;ನೀರೇ ಇಲ್ಲದಿದ್ದರೂ ಬದುಕುವ 62 ಸಸ್ಯಗಳು!

Western Ghats;ನೀರೇ ಇಲ್ಲದಿದ್ದರೂ ಬದುಕುವ 62 ಸಸ್ಯಗಳು!

ಹಳ್ಳಿಗಳಲ್ಲಿ ಏರುತ್ತಿದೆ ಪಂಚಾಯ್ತಿ ರಾಜಕಾರಣದ ಬಿಸಿ

ಹಳ್ಳಿಗಳಲ್ಲಿ ನಿಧಾನವಾಗಿ ಏರುತ್ತಿದೆ ಪಂಚಾಯತ್‌ ಚುನಾವಣೆ ಬಿಸಿ

New Parliament; ನೂತನ ಸಂಸತ್ತಿನಲ್ಲಿದೆ ವಿಶೇಷ ಪೆಂಡ್ಯುಲಮ್‌

New Parliament; ನೂತನ ಸಂಸತ್ತಿನಲ್ಲಿದೆ ವಿಶೇಷ ಪೆಂಡ್ಯುಲಮ್‌

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ