Namibia ಏಕದಿನ ಸರಣಿ: 360 ರನ್‌ ಪೇರಿಸಿಯೂ ಸೋತ ಕರ್ನಾಟಕ


Team Udayavani, Jun 5, 2023, 7:43 AM IST

NAMIBIA VS KARNATAKA

ವಿಂಡ್‌ಹೋಕ್‌ (ನಮೀಬಿಯಾ): ಆತಿಥೇಯ ನಮೀಬಿಯಾ ಎದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಕರ್ನಾಟಕ 360 ರನ್‌ ಪೇರಿಸಿಯೂ ಸೋಲಿನ ಆಘಾತಕ್ಕೆ ಸಿಲುಕಿದೆ. ಪ್ರಚಂಡ ಚೇಸಿಂಗ್‌ ನಡೆಸಿದ ನಮೀಬಿಯಾ 5 ವಿಕೆಟ್‌ ಜಯಭೇರಿ ಮೊಳಗಿಸಿ 5 ಪಂದ್ಯಗಳ ಸರಣಿಯನ್ನು 1-1 ಸಮಬಲಕ್ಕೆ ತಂದು ನಿಲ್ಲಿಸಿತು.

ಆರಂಭಕಾರ ಎಲ್‌.ಆರ್‌. ಚೇತನ್‌ ಮತ್ತು ನಿಕಿನ್‌ ಜೋಸ್‌ ಅವರ ಆಕರ್ಷಕ ಶತಕ ಪರಾಕ್ರಮದಿಂದ ಕರ್ನಾಟಕ ಕೇವಲ 4 ವಿಕೆಟ್‌ ನಷ್ಟಕ್ಕೆ 360 ರನ್‌ ರಾಶಿ ಹಾಕಿತು. ದಿಟ್ಟ ಜವಾಬು ನೀಡಿದ ನಮೀಬಿಯಾ ಕೇವಲ ಒಂದು ಎಸೆತ ಬಾಕಿ ಉಳಿದಿರುವಾಗ 5 ವಿಕೆಟ್‌ ಕಳೆದುಕೊಂಡು 362 ರನ್‌ ಬಾರಿಸಿ ಅಮೋಘ ಗೆಲುವು ಸಾಧಿಸಿತು. ಮೊದಲ ಪಂದ್ಯವನ್ನು ಕರ್ನಾಟಕ 9 ವಿಕೆಟ್‌ಗಳಿಂದ ಗೆದ್ದಿತ್ತು. 3ನೇ ಮುಖಾಮುಖೀ ಬುಧವಾರ ನಡೆಯಲಿದೆ.

ನಾಯಕ ರವಿಕುಮಾರ್‌ ಸಮರ್ಥ್ ಅವರನ್ನು ಕರ್ನಾಟಕ ಬೇಗನೇ ಕಳೆದುಕೊಂಡಿತು. ಅವರ ಗಳಿಕೆ ಬರೀ 5 ರನ್‌. ಬಳಿಕ ಎಲ್‌.ಆರ್‌. ಚೇತನ್‌ ಮತ್ತು ನಿಕಿನ್‌ ಜೋಸ್‌ ಸೇರಿಕೊಂಡು ದ್ವಿತೀಯ ವಿಕೆಟಿಗೆ 258 ರನ್‌ ಜತೆಯಾಟ ನಿಭಾಯಿಸಿದರು. ಇಬ್ಬರಿಂದಲೂ ಶತಕ ದಾಖಲಾಯಿತು. ಚೇತನ್‌ 147 ಎಸೆತಗಳಿಂದ 169 ರನ್‌ ಸಿಡಿಸಿದರೆ (13 ಬೌಂಡರಿ, 8 ಸಿಕ್ಸರ್‌), ನಿಕಿನ್‌ ಜೋಸ್‌ 109 ಎಸೆತ ನಿಭಾಯಿಸಿ 103 ರನ್‌ ಹೊಡೆದರು (5 ಬೌಂಡರಿ, 2 ಸಿಕ್ಸರ್‌).
ಇವರಿಬ್ಬರಿಗಿಂತ ಕೆ. ಸಿದ್ಧಾರ್ಥ್ ಆಟ ಅತ್ಯಂತ ಬಿರುಸಿನಿಂದ ಕೂಡಿತ್ತು. ಕೇವಲ 27 ಎಸೆತಗಳಿಂದ ಅಜೇಯ 59 ರನ್‌ ಬಾರಿಸಿದರು. ಈ ವೇಳೆ ಸಿಡಿದದ್ದು 6 ಸಿಕ್ಸರ್‌ ಹಾಗೂ ಒಂದು ಬೌಂಡರಿ.

ಆಘಾತವಿಕ್ಕಿದ ನಮೀಬಿಯಾ
ಬೃಹತ್‌ ಮೊತ್ತ ಪೇರಿಸಿ ಗೆಲುವಿನ ಕನವರಿಕೆಯಲ್ಲಿದ್ದ ಕರ್ನಾಟಕಕ್ಕೆ ನಮೀಬಿಯಾ ಮರ್ಮಾಘಾತವಿಕ್ಕಿತು. ಸ್ಟೀಫ‌ನ್‌ ಬಾರ್ಡ್‌ (57) ಮತ್ತು ನಿಕೋಲಾಸ್‌ ಡೇವಿನ್‌ (70) ಮೊದಲ ವಿಕೆಟಿಗೆ 119 ರನ್‌ ಪೇರಿಸಿ ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸಿದರು. ವನ್‌ಡೌನ್‌ ಬ್ಯಾಟರ್‌ ಮೈಕಲ್‌ ವಾನ್‌ ಲಿಂಜೆನ್‌ ಅವರಿಂದ ಶತಕ ದಾಖಲಾಯಿತು. 85 ಎಸೆತ ಎದುರಿಸಿದ ಅವರು 7 ಫೋರ್‌, 5 ಸಿಕ್ಸರ್‌ ನೆರವಿನಿಂದ 104 ರನ್‌ ಹೊಡೆದರು. ನಾಯಕ ಗೆರಾರ್ಡ್‌ ಎರಾಸ್ಮಸ್‌ 91 ರನ್‌ ಕೊಡುಗೆ ಸಲ್ಲಿಸಿದರು (67 ಎಸೆತ, 8 ಬೌಂಡರಿ, 2 ಸಿಕ್ಸರ್‌).
ಈ ಪಂದ್ಯದಲ್ಲಿ ಒಟ್ಟು 53 ಬೌಂಡರಿ ಹಾಗೂ 26 ಸಿಕ್ಸರ್‌ ಸಿಡಿಯಲ್ಪಟ್ಟಿತು.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ-4 ವಿಕೆಟಿಗೆ 360 (ಚೇತನ್‌ 169, ನಿಕಿನ್‌ ಜೋಸ್‌ 103, ಸಿದ್ಧಾರ್ಥ್ 59). ನಮೀಬಿಯಾ-49.5 ಓವರ್‌ಗಳಲ್ಲಿ 5 ವಿಕೆಟಿಗೆ 362 (ವಾನ್‌ ಲಿಂಜೆನ್‌ 104, ಎರಾಸ್ಮಸ್‌ 91, ಡೇವಿನ್‌ 71, ಬಾರ್ಡ್‌ 57, ಸಮರ್ಥ್ 32ಕ್ಕೆ 1, ಶುಭಾಂಗ್‌ ಹೆಗ್ಡೆ 61ಕ್ಕೆ 1).

ಟಾಪ್ ನ್ಯೂಸ್

1-saasd

Tamil Nadu : ನೀಲಗಿರಿಯಲ್ಲಿ ಪ್ರವಾಸಿಗರ ಬಸ್ ಕಮರಿಗೆ ಬಿದ್ದು 8 ಮಂದಿ ಮೃತ್ಯು

1-sasa

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

accident

Holehonnuru ; ಭೀಕರ ರಸ್ತೆ ಅಪಘಾತದಲ್ಲಿ ಮೂವರ ದುರ್ಮರಣ

1-asdasd

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

1-dadas

Kushtagi : ವೈಯಕ್ತಿಕ ಸಿಟ್ಟಿಗೆ ಸ್ನೇಹಿತನ ಹತ್ಯೆಗೈದ ಇಬ್ಬರ ಬಂಧನ

Shamanuru Shivashankarappa

Lingayat ಅಧಿಕಾರಿಗಳಿಗೆ ಅನ್ಯಾಯ ಹೇಳಿಕೆಗೆ ಬದ್ಧ: ಶಾಮನೂರು ಪುನರುಚ್ಚಾರ

1-sasa-sa

Hirekerur ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsada-s

Asian Games 10,000 ಮೀ. ರೇಸ್‌: ಕಾರ್ತಿಕ್‌, ಗುಲ್ವೀರ್‌ ಅವಳಿ ಪದಕದ ಹೀರೋಗಳು

1-sasa

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

1-asdasd

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

1-sdsad

World Cup ಆಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ, ನನ್ನ ಪ್ರಧಾನ ಧ್ಯೇಯ..: ಆರ್.ಅಶ್ವಿನ್

1-sasad

Gold medal; ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ: ರೋಹನ್ ಬೋಪಣ್ಣ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

chandrayaan 3………….

Fraud: ಚಂದ್ರಯಾನ-3 ಹೆಸರಿನಲ್ಲಿ 20 ಕೋಟಿ ರೂ. ವಂಚನೆ!

ny rain

Rain: ದಿಢೀರ್‌ ಪ್ರವಾಹಕ್ಕೆ ನ್ಯೂಯಾರ್ಕ್‌ ತತ್ತರ

AADITYA L 1

Aditya L1: ಪ್ರಭಾವಲಯ ದಾಟಿದ ಆದಿತ್ಯ ಎಲ್‌1

tax

Tax : 13 ಲಕ್ಷ ನೌಕರರಿಗೆ ತೆರಿಗೆ ವಿನಾಯಿತಿ

train wheel ch

Railways: ಗಾಲಿಕುರ್ಚಿ ಬಳಸುವವರಿಗೆ ರೈಲಿನಲ್ಲಿ ರ್‍ಯಾಂಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.