ದುರಾಡಳಿತದ ಹಳೆಯ ಆಟಗಾರರು ಕೈಜೋಡಿಸಿದ್ದಾರೆ: ತ್ರಿಪುರಾದಲ್ಲಿ ಪ್ರಧಾನಿ ಮೋದಿ
ಕಾಂಗ್ರೆಸ್-ಸಿಪಿಐ(ಎಂ) ಮೈತ್ರಿ ವಿರುದ್ಧ ಆಕ್ರೋಶ
Team Udayavani, Feb 11, 2023, 5:51 PM IST
ಅಗರ್ತಲಾ : ತ್ರಿಪುರಾದಲ್ಲಿ ಕಾಂಗ್ರೆಸ್-ಸಿಪಿಐ(ಎಂ) ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ದುರಾಡಳಿತದ ಹಳೆಯ ಆಟಗಾರರು ಕೈಜೋಡಿಸಿದ್ದಾರೆ ಎಂದು ಶನಿವಾರ ಹೇಳಿದ್ದಾರೆ.
ಧಲೈ ಜಿಲ್ಲೆಯ ಅಂಬಾಸಾದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ ತಿಪ್ರಾ ಮೋಥಾದ ಬಗ್ಗೆ ಉಲ್ಲೇಖ ಮಾಡಿ, ಇತರ ಕೆಲವು ಪಕ್ಷಗಳು ಸಹ ವಿರೋಧ ಪಕ್ಷದ ಮೈತ್ರಿಗೆ ಹಿಂದಿನಿಂದ ಸಹಾಯ ಮಾಡುತ್ತಿವೆ ಆದರೆ ಅವರಿಗೆ ನೀಡುವ ಪ್ರತೀ ಮತವು ತ್ರಿಪುರಾವನ್ನು ಹಲವಾರು ವರ್ಷಗಳ ಹಿಂದೆ ಕೊಂಡೊಯ್ಯುತ್ತದೆ ಎಂದರು.
“ದುರಾಡಳಿತದ ಹಳೆಯ ಆಟಗಾರರು ಕೈಜೋಡಿಸಿದ್ದಾರೆ, ಇತರ ಕೆಲವು ಪಕ್ಷಗಳು ಅವರಿಗೆ ಹಿಂದಿನಿಂದ ಸಹಾಯ ಮಾಡುತ್ತಿವೆ – ಅವರ ಹೆಸರು ಅಥವಾ ಘೋಷಣೆ ಏನೇ ಇರಲಿ ಆದರೆ ಅವರಿಗೆ ಒಂದೇ ಒಂದು ಮತವು ತ್ರಿಪುರವನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ” ಎಂದು ಅವರು ಹೇಳಿದರು.
ಎಡ ಮತ್ತು ಕಾಂಗ್ರೆಸ್ ಸರ್ಕಾರಗಳು ಬುಡಕಟ್ಟು ಜನಾಂಗದವರ ನಡುವೆ ಒಡಕು ಮೂಡಿಸಿದರೆ, ಬ್ರೂಸ್ ಸೇರಿದಂತೆ ಅವರ ಸಮಸ್ಯೆಗಳನ್ನು ಪರಿಹರಿಸಲು ಬಿಜೆಪಿ ಕೆಲಸ ಮಾಡಿದೆ ಎಂದರು.ಭಾರತದಾದ್ಯಂತ ಆದಿವಾಸಿಗಳ ಉನ್ನತಿಗಾಗಿ ಬಿಜೆಪಿ ಕೆಲಸ ಮಾಡುತ್ತಿದೆ ಎಂದರು.
ಈಶಾನ್ಯ ರಾಜ್ಯದಲ್ಲಿ ಅಭಿವೃದ್ಧಿಯ ಪಥವನ್ನು ಮುಂದುವರಿಸಲು “ಡಬಲ್ ಇಂಜಿನ್” ಸರ್ಕಾರಕ್ಕೆ ಮತ ನೀಡಿ. ಕಾಂಗ್ರೆಸ್ ಮತ್ತು ಎಡಪಕ್ಷಗಳ ಎರಡಲಗಿನ ಕತ್ತಿಯಿಂದ ಎಚ್ಚರದಿಂದಿರಿ, ಅವರು ಜನರಿಗೆ ಪ್ರಯೋಜನವಾಗುವ ಎಲ್ಲಾ ಯೋಜನೆಗಳನ್ನು ನಿಲ್ಲಿಸಲು ಬಯಸುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
MUST WATCH
ಹೊಸ ಸೇರ್ಪಡೆ
Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು
ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.