100 ರೂ. ಹಣ ಡ್ರಾ ಮಾಡಿದ ಕಾರ್ಮಿಕನಿಗೆ ಬಂದಿದ್ದು 2,700 ಕೋಟಿ ರೂ. ಎಸ್ ಎಮ್ ಎಸ್ !
ಲಾಲ್ ರಾಜಸ್ಥಾನದಿಂದ ಉತ್ತರಪ್ರದೇಶಕ್ಕೆ ವಾಪಸ್ ಆಗಲು ಸಿದ್ಧತೆ ನಡೆಸಿದ್ದ.
Team Udayavani, Aug 5, 2022, 3:56 PM IST
ನವದೆಹಲಿ: ಕೆಲವು ಬಾರಿ ನಮಗೆ ಅರಿವಿಲ್ಲದೆ ಕೆಲವೊಂದು ಅಚ್ಚರಿಗಳು ಸಂಭವಿಸುತ್ತದೆ. ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಕಾರ್ಮಿಕನೊಬ್ಬ ಬ್ಯಾಂಕ್ ಖಾತೆಯಿಂದ ನೂರು ರೂಪಾಯಿ ಹಣ ಡ್ರಾ ಮಾಡಿದ್ದ..ಆದರೆ ಆತನ ಮೊಬೈಲ್ ಗೆ ಬಂದ ಎಸ್ ಎಂಎಸ್ ಕಂಡು ಆಘಾತಕ್ಕೊಳಗಾಗಿಬಿಟ್ಟಿದ್ದ…ಯಾಕೆಂದರೆ ಆತನ ಬ್ಯಾಂಕ್ ಖಾತೆಯಲ್ಲಿ 2,700 ಕೋಟಿ ರೂಪಾಯಿ ಬ್ಯಾಲೆನ್ಸ್ ಇದೆ ಎಂಬ ಎಸ್ ಎಂಎಸ್ ಬಂದಿರುವುದು!
ಇದನ್ನೂ ಓದಿ:ಕೌಟುಂಬಿಕ ಕಲಹ: ಪತ್ನಿ-ಪುತ್ರನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನ
ಉತ್ತರಪ್ರದೇಶದ ಛಿಬ್ರಾಮೌ ಕೋವಾಲಿ ಪೊಲೀಸ್ ಠಾಣಾ ಪ್ರದೇಶದ ಕಮಲಾಪುರ್ ಗ್ರಾಮದ ನಿವಾಸಿ ಬಿಹಾರಿ ಲಾಲ್ ರಾಜಸ್ಥಾನದಲ್ಲಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವ ಕಾರ್ಮಿಕ. ಮಳೆಗಾಲದಿಂದಾಗಿ ಫ್ಯಾಕ್ಟರಿ ಕೆಲಸ ಬಂದ್ ಆಗಿದ್ದು, ಲಾಲ್ ರಾಜಸ್ಥಾನದಿಂದ ಉತ್ತರಪ್ರದೇಶಕ್ಕೆ ವಾಪಸ್ ಆಗಲು ಸಿದ್ಧತೆ ನಡೆಸಿದ್ದ.
ಈ ಸಂದರ್ಭದಲ್ಲಿ ತನ್ನ ಜನ್ ಧನ್ ಖಾತೆಯಿಂದ 100 ರೂಪಾಯಿ ವಿತ್ ಡ್ರಾ ಮಾಡಿದ್ದ. ಹಣ ಪಡೆದ ನಂತರ, ಬ್ಯಾಲೆನ್ಸ್ ಹಣ ಎಷ್ಟಿದೆ ಎಂಬ ಎಸ್ ಎಂಎಸ್ ಬಂತಿತ್ತು. ಆದರೆ ತನ್ನ ಖಾತೆಯಲ್ಲಿ 2,700 ಕೋಟಿ ಇದೆ ಎಂಬ ಎಸ್ ಎಂಎಸ್ ಕಂಡು ಲಾಲ್ ನಂಬಲು ಕೂಡಾ ಸಿದ್ಧನಿಲ್ಲ. ಕೂಡಲೇ ಬ್ಯಾಂಕ್ ಮ್ಯಾನೇಜರ್ ಬಳಿ ತೆರೆಳಿದ್ದ, ಅವರು ಲಾಲ್ ಖಾತೆಯಲ್ಲಿ 27,07,85,13,985 ಕೋಟಿ ರೂಪಾಯಿ ಇದ್ದಿರುವುದಾಗಿ ತಿಳಿಸಿದ್ದರು.
ನಾನು ಮೂರು ಬಾರಿ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಿದ್ದು, ಪ್ರತಿ ಬಾರಿಯೂ 2,700 ಕಕೋಟಿ ರೂಪಾಯಿ ಅಂತ ನಮೂದಾಗಿತ್ತು ಎಂದು ಬ್ಯಾಂಕ್ ಮ್ಯಾನೇಜರ್ ಗೆ ಮಾಹಿತಿ ನೀಡಿದ್ದ. ಆದರೆ ಈ ಆಘಾತ, ನಂಬಿಕೆ ಹೆಚ್ಚು ಸಮಯ ಉಳಿದಿರಲಿಲ್ಲವಾಗಿತ್ತು, ಯಾಕೆಂದರೆ ಲಾಲ್ ಸಮೀಪದ ಮತ್ತೊಂದು ಬ್ರ್ಯಾಂಚ್ ಗೆ ಹೋಗಿ ತನ್ನ ಖಾತೆಯ ಬ್ಯಾಲೆನ್ಸ್ ಪರಿಶಿಲಿಸಿದಾಗ ಕೇವಲ 126! ರೂಪಾಯಿ ಇದ್ದಿರುವುದಾಗಿ ನಮೂದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!