Crude Oil: ಒಎನ್ ಜಿಸಿಯಿಂದ ಮುಂದಿನ ವಾರದಿಂದ ಕಚ್ಛಾ ತೈಲ ಉತ್ಪಾದನೆ ಆರಂಭ
ಹೂಡಿಕೆಯನ್ನು ಎರಡು ಪ್ರತ್ಯೇಕ ಯೋಜನೆಗಳಿಗೆ ಬಳಸಲಾಗುತ್ತದೆ
Team Udayavani, Nov 20, 2023, 1:48 PM IST
ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಮುಂದಿನ ವಾರ ಕೃಷ್ಣಾ ಗೋದಾವರಿ ಜಲಾನಯನದಲ್ಲಿ ತನ್ನ ಪ್ರಮುಖ ಆಳವಾದ ನೀರಿನ ಯೋಜನೆಯಾದ ಕಚ್ಛಾ ತೈಲ ಉತ್ಪಾದನೆಯನ್ನು ಆರಂಭಿಸಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Kartarpur: ಗುರುದ್ವಾರದಲ್ಲಿ ಮದ್ಯ, ಮಾಂಸ ಸೇವಿಸಿ ಸಿಖ್ಖರ ಭಾವನೆಗೆ ಅಪಮಾನ: ಬಿಜೆಪಿ ಆರೋಪ
ಒಎನ್ ಜಿಸಿ ಕಚ್ಛಾ ತೈಲ ಉತ್ಪಾದನೆ ಮಾಡುವ ಮೂಲಕ ಭಾರತಕ್ಕೆ ವಾರ್ಷಿಕವಾಗಿ ಬರೋಬ್ಬರಿ 11,000 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಲಿದೆ. ಭಾರತ ಪ್ರತಿವರ್ಷ ಶೇ.85ರಷ್ಟು ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ವರದಿ ವಿವರಿಸಿದೆ.
ಒಎನ್ ಜಿಸಿ 2028-2030ರೊಳಗೆ ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದ ಪೆಟ್ರೋಕೆಮಿಕಲ್ ಯೋಜನೆ ಸಿದ್ಧಪಡಿಸಿಕೊಂಡಿರುವುದಾಗಿ ತಿಳಿಸಿದೆ. ಹೂಡಿಕೆಯನ್ನು ಎರಡು ಪ್ರತ್ಯೇಕ ಯೋಜನೆಗಳಿಗೆ ಬಳಸಲಾಗುತ್ತದೆ ಎಂದು ಹೇಳಿದೆ.
ಕೃಷ್ಣಾ ಗೋದಾವರಿ ಜಲಾನಯನದ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ ಎಂದು ಒಎನ್ ಜಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರಂಭಿಕವಾಗಿ ಕೆಜಿ ಬೇಸಿನ್ ನಲ್ಲಿ 2021ರ ನವೆಂಬರ್ ನಲ್ಲಿ ತೈಲ ಉತ್ಪಾದನೆ ಮಾಡಲು ನಿಗದಿಯಾಗಿತ್ತು. ಆದರೆ ನಂತರ ಹಲವು ಬಾರಿ ಡೆಡ್ ಲೈನ್ ಮುಂದುವರಿಸಲಾಗಿತ್ತು.
ಪ್ರಸ್ತುತ ಕಚ್ಛಾ ತೈಲದ ಬ್ಯಾರೆಲ್ ಬೆಲೆ 77.4 ಡಾಲರ್. ಇದರಿಂದಾಗಿ ನಾವೇ ಕಚ್ಛಾ ತೈಲ ಉತ್ಪಾದಿಸಿದರೆ ಪ್ರತಿದಿನ 29 ಕೋಟಿ ರೂಪಾಯಿ ಭಾರತಕ್ಕೆ ಉಳಿಯವಾಗಲಿದೆ. ವಾರ್ಷಿಕವಾಗಿ 10,600 ಕೋಟಿ ರೂಪಾಯಿ ಉಳಿತಾಯ ಮಾಡಿದಂತಾಗಲಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ