ಮೃತ್ಯುಂಜಯ ಮಂತ್ರ ಪಠಣೆಗೆ ವಿರೋಧ!
Team Udayavani, Jul 27, 2023, 12:25 AM IST
ಬುಲ್ದಾನಾ: ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ “ಸವೃದ್ಧಿ ಎಕ್ಸ್ಪ್ರೆಸ್ವೇ’ನಲ್ಲಿ ಇತ್ತೀಚೆಗೆ ಬಸ್ ಹೊತ್ತಿ ಉರಿದು, 25 ಮಂದಿ ಮೃತಪಟ್ಟಿದ್ದರು. ಈ ಸ್ಥಳದಲ್ಲಿ ಮತ್ತೆ ಇಂತಹ ಘಟನೆ ನಡೆಯಬಾರದು ಎಂದು ಹಾರೈಸಿ “ಮಹಾಮೃತ್ಯುಂಜಯ ಯಂತ್ರ’ ಅಳವಡಿಸಿ “ಮಹಾಮೃತ್ಯುಂಜಯ ಮಂತ್ರ’ ಪಠಿಸಿದ್ದಕ್ಕಾಗಿ ವ್ಯಕ್ತಿಯೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಹಮಿದ್ ದಾಭೋಲ್ಕರ್ ಅವರ ದೂರಿನ ಮೇರೆಗೆ ಬುಲ್ದಾನಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜು.1ರಂದು “ಸಮೃದ್ಧಿ ಎಕ್ಸ್ ಪ್ರಸ್ವೇ’ನಲ್ಲಿ ಬಸ್ಗೆ ಬೆಂಕಿ ತಗುಲಿ, 25 ಮಂದಿ ಸಜೀವ ದಹನವಾಗಿದ್ದರು. ಜು.23ರಂದು ಬುಲ್ದಾನಾ ನಿವಾಸಿ ನೀಲೇಶ್ ಅಧವ್ ಎಂಬುವವರು ಸಿಂಧಖೇಡರಾಜ ಪ್ರದೇಶದ ಪಿಂಪಲುಕುಟದ ಅಪಘಾತ ನಡೆದ ಸ್ಥಳದಲ್ಲಿ ಕೆಲವು ಜನರನ್ನು ಸೇರಿಸಿ, “ಮಹಾಮೃತ್ಯುಂಜಯ ಯಂತ್ರ’ ಅಳವಡಿದ್ದರು. ಅಲ್ಲದೇ ಅಲ್ಲೇ ಕುಳಿತು ಮಹಾಮೃತ್ಯುಂಜಯ ಜಪ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ