PM ಮೋದಿ ವಿರುದ್ಧ ದೂರು ನೀಡಲು ಬಯಸಿದ Pak ನಟಿ; ದೆಹಲಿ ಪೊಲೀಸರ ಉತ್ತರ ಹೇಗಿತ್ತು ಗೊತ್ತಾ!
ಶಿನ್ವಾರಿ ಟ್ವೀಟ್ ಗೆ ದೆಹಲಿ ಪೊಲೀಸರು ನಗು ಭರಿಸುವ ಉತ್ತರ ನೀಡಿದ್ದು, ಅಂತರ್ಜಾಲ ತಾಣದಲ್ಲಿ ವೈರಲ್ ಆಗಿದೆ
Team Udayavani, May 10, 2023, 1:43 PM IST
ನವದೆಹಲಿ: ಭ್ರಷ್ಟಾಚಾರ ಆರೋಪದಡಿ ಪಾಕಿಸ್ತಾನ ಮಾಜಿ ಪ್ರಧಾನಿ, ಪಿಟಿಐ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಬಂಧನಕ್ಕೊಳಗಾಗಿದ್ದ ಬೆನ್ನಲ್ಲೇ ಪಾಕಿಸ್ತಾನದಾದ್ಯಂತ ಖಾನ್ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಗಲಭೆ ಭುಗಿಲೆದ್ದಿದೆ. ಈ ಜಟಾಪಟಿಯ ನಡುವೆಯೇ ಪ್ರಧಾನಿ ಮೋದಿ ವಿರುದ್ಧ ದೂರು ನೀಡುವುದಾಗಿ ತಿಳಿಸಿರುವ ಪಾಕ್ ನಟಿಯೊಬ್ಬಳಿಗೆ ದೆಹಲಿ ಪೊಲೀಸರು ನೀಡಿದ ಖಡಕ್ ಉತ್ತರಕ್ಕೆ ನೆಟ್ಟಿಗರು ಗಹಗಹಿಸಿ ನಗುವಂತೆ ಮಾಡಿದೆ!
ಪಾಕಿಸ್ತಾನಿ ನಟಿ ಸೆಹಾರ್ ಶಿನ್ವಾರಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗುಪ್ತಚರ ಸಂಸ್ಥೆ ರಾ ವಿರುದ್ಧ ದೂರು ನೀಡುವುದಾಗಿ ಟ್ವೀಟ್ ಮಾಡಿದ್ದಳು.
ಶಿನ್ವಾರಿ ಟ್ವೀಟ್ ನಲ್ಲೇನಿತ್ತು?
ದೆಹಲಿ ಪೊಲೀಸರ ಆನ್ ಲೈನ್ ಲಿಂಕ್ ಯಾರಿಗಾದರೂ ತಿಳಿದಿದೆಯೇ? ನನ್ನ ದೇಶ ಪಾಕಿಸ್ತಾನದಲ್ಲಿ ಅರಾಜಕತೆ ಮತ್ತು ಭಯೋತ್ಪಾದನೆಯನ್ನು ಹುಟ್ಟುಹಾಕುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಗುಪ್ತಚರ ಸಂಸ್ಥೆ ರಾ ವಿರುದ್ಧ ನಾನು ದೂರು ನೀಡಬೇಕಾಗಿದೆ. ಭಾರತದ ನ್ಯಾಯಾಲಯಗಳು ಮುಕ್ತ ಸ್ವಾತಂತ್ರ್ಯ ಹೊಂದಿದ್ದರೆ, ನನಗೆ ಭಾರತದ ಸುಪ್ರೀಂಕೋರ್ಟ್ ನಲ್ಲಿ ನ್ಯಾಯ ಸಿಗುವುದು ಖಚಿತ” ಎಂದು ಉಲ್ಲೇಖಿಸಿದ್ದಳು.
ಪಾಕ್ ನಟಿ ಶಿನ್ವಾರಿ ಟ್ವೀಟ್ ಗೆ ದೆಹಲಿ ಪೊಲೀಸರು ನಗು ಭರಿಸುವ ಉತ್ತರ ನೀಡಿದ್ದು, ಅಂತರ್ಜಾಲ ತಾಣದಲ್ಲಿ ವೈರಲ್ ಆಗಿದೆ.
ಟ್ವೀಟ್ ಮೂಲಕ ದೆಹಲಿ ಪೊಲೀಸರ ತಿರುಗೇಟು:
“ನಾವು ಪಾಕಿಸ್ತಾನದಲ್ಲಿ ಈವರೆಗೂ ಯಾವುದೇ ಅಧಿಕಾರದ ವ್ಯಾಪ್ತಿಯನ್ನು ಹೊಂದಿಲ್ಲ ಎಂದು ಭಯಪಡುತ್ತಿದ್ದೇವೆ. ಆದರೆ ನಿಮ್ಮ ದೇಶದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ ಮೇಲೂ ನೀವು ಹೇಗೆ ಟ್ವೀಟ್ ಮಾಡುತ್ತಿದ್ದೀರಿ ಎಂದು ತಿಳಿಯಲು ಬಯಸುತ್ತೇವೆ ಎಂದು ತಿರುಗೇಟು” ನೀಡಿದೆ.
ದೆಹಲಿ ಪೊಲೀಸರ ಹಾಸ್ಯಪ್ರಜ್ಞೆಯ ಉತ್ತರಕ್ಕೆ ನೆಟಿಜನ್ ಗಳು ಶ್ಲಾಘಿಸಿದ್ದು, ಸೆಹಾರ್ ಶಿನ್ವಾರಿಗೆ ಚೆನ್ನಾಗಿ ತಿರುಗೇಟು ನೀಡಿದ್ದೀರಿ. ನಿನಗೆ ಕೆಟ್ಟ ದಿನ ಇದು…ನಮಗೆ ಮನರಂಜನೆಯಾಗಿದೆ ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ